ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 9, 2014

ನಮ್ಮ ಭಾರತ



ಬಿಸಿ ರಕ್ತದ ಭಾರತೀಯ ಯುವಕರು ಜಾಗೃತರಾಗಿ ಪ್ರತಿಜ್ಞೆ ಗೈದರೆ ಎಲ್ಲವೂ ಸಾಧ್ಯವಿದೆ ನಮ್ಮ ಭಾರತದಲ್ಲಿ. ಅಂತಹ ಒಂದು ಕ್ರಾಂತಿ ಆದಷ್ಟು ಬೇಗ ಬರುತ್ತೆ. ಈ ಕೊಲೆಗಾರರು ಮತ್ತು ಬೃಷ್ಟ ರಾಜಕಾರಣಿಗಳು ಹೇಳ ಹೆಸರಿಲ್ಲದೆ ಮಣ್ಣಾಗುವ ದಿನ ಇನ್ನು ದೂರವಿಲ್ಲ.

ರೇಪ್ ..


ಭಾರತ



ಕಸ ಮುಕ್ತ ಭಾರತ ನನ್ನ ಕನಸು
ಅದು ಯಶಸ್ವಿಯಾಗುವುದೋ ಗೊತ್ತಿಲ್ಲ
ಆದರೂ ಹೊಸ ನಿರೀಕ್ಷೆ ಬಿಟ್ಟಿಲ್ಲ...


ದ್ವೇಷ ಮುಕ್ತ ಭಾರತ ಕೂಡ ನನ್ನ ಕನಸು
ಅದು ನನಸಾಗುವುದೋ ಗೊತ್ತಿಲ್ಲ
ಆದರೂ ಪ್ರೀತಿ ಹಂಚೋದ ಬಿಟ್ಟಿಲ್ಲ...

- ದೇಶಪ್ರೇಮಿ.


https://www.facebook.com/BlueWavesPage

***** ಬದುಕು *****



ಹೊಟ್ಟೆ ತುಂಬ 
ತಿನ್ನುವಾಗ 
ತಿನ್ನದವರ ಬಗ್ಗೆ 

ಚಿಂತೆಯಿರಲಿಲ್ಲ.


ಹೊಟ್ಟೆ
ಖಾಲಿಯಾದಾಗ
ತಿನ್ನುವವರ್ಯಾರು
ನನ್ನತ್ತ
ಮುಖ
ಮಾಡಲೇ ಇಲ್ಲ



https://www.facebook.com/BlueWavesPage

ನಿಮ್ಮಗಳ ಜಗತ್ತೊಂತರಾ ವಿಚಿತ್ರ

ನಿಮ್ಮಗಳ ಜಗತ್ತೊಂತರಾ ವಿಚಿತ್ರ
ಅಲ್ಲಿ ಆ ಪರ ಇಲ್ಲಿ ಈ ಪರ
ಸ್ವಹಿತಾಸಕ್ತಿಗಳೆದುರು ನ್ಯಾಯ ತತ್ತರ
ಕೆಲವೊಮ್ಮೆ ನಿಲುವಿಲ್ಲದ ಬರೇ ಮತ್ಸರ.
ಬಿಸಿ ಬಿಸಿ ವಿಷಗಳ ಸಿಹಿ ರಸವೆನ್ನುವ ಪವಾಡ ತರ.

ರಕುತಕ್ಕೆ ಅನರ್ಹನ ಕತ್ತು ಕುಯ್ಯಬೇಡಿಯೆಂದೇ
ಕತ್ತು ಕಡಿದವನ ಉಳಿಸಲು ಸಭೆ ಸೇರಿದ್ದೀರಿ.
ಕಾನೂನು ಗೌರವಿಸದವನ ಧಿಕ್ಕಾರಿಯೆಂದೇ

ಕೈಗೆತ್ತಿಕ್ಕೊಂಡವನ ರಕ್ತಸಾಕ್ಷಿಯೆಂದಿದ್ದೀರಿ
ಕಲೆಯುಳಿಸದೆ ಕುಡಿವ ನಾಜೂಕು ರಕ್ತದಾಹ??

ಬಲಿಯಾದ ನಿರ್ಭಯಳಿಗೆ ಸಂತಾಪ ಕೊಟ್ಟವರು
ನಿರ್ಲಜ್ಜ ನರ ಮೃಗಗಳಿಗೆ ಗಲ್ಲುಗಳು ನಿರ್ದಯವೆಂದಿದ್ದೀರಿ
ಬೇಧಗಳು ನಮಗಿಲ್ಲ,ನಾವೆಂದೂ ಬೇರಲ್ಲವೆಂದವರು
ಮರೆಯಲ್ಲಿ ನಿಂತು ಕೊಳ ಕೊಳಕು ಆರೋಪಿಸಿದ್ದೀರಿ
ಥೂ ನಿಮ್ಮೊಳಗಿನ ನಿಲುವುಗಳೇಕೋ ನನಗೆ ವ್ಯಂಗ್ಯ

ಹಸಿದವನಿಗೆ ನಾವೆಲ್ಲ ನೆರವಾಗಬೇಕೆನ್ನುತಲೇ
ಅವ ದುಡಿದ ಅನ್ನವನು ಕದ್ದು ತಿಂದಿದ್ದೀರಿ
ವರ್ಗಗಳು ಇಲ್ಲಿಲ್ಲ ಮನುಕುಲಕ್ಕಿಂತ ಮಿಗಿಲಲ್ಲವೆಂದೇ
ಮನೆಯೊಳಗೆ ಕೂತು ಅವರಿವರ ಮಲ ತಿಂದಿದ್ದೀರಿ 
ನಾಲಗೆಯಲೊಂದು ಹೃದಯದಲ್ಲೊಂದು 
ವಿಷಸರ್ಪಗಳಿಗಿಂತಲೂ ಘೋರ ನೀವು..

ಸಂತ್ರಸ್ಥರ ಗಲ್ಲಿಗಳಿಗೆ ಪೈಪೋಟಿಯಲೋಡಿದವರು
ಮರೆಯಲ್ಲಿ ಪ್ರಭಾವಿಗಳೆದುರು ಮಂಡಿಯೂರಿದ್ದೀರಿ
ನ್ಯಾಯದ ಹೋರಾಟಕ್ಕೆ ಕಲೆಕ್ಷನ್ ಬೇಕೆನ್ನುವಷ್ಟು
ಅವರಿವರ ಬೂಟುಕಾಲಿಗೆ ನಾಲಗೆ ಹಾಕಿದ್ದೀರಿ
ನಿಮಗಿಂತ ಮಿಗಿಲಾದ ಭಯವಿಲ್ಲವೆನಗೆ.ಥರಗುಟ್ಟುತ್ತೇನೆ.

ನಿಮ್ಮಗಳ ಜಗದಲ್ಲಿ ನನ ಶಬ್ಧ ಕೇಳಲ್ಲ
ಕೇಳಲು ಬಿಟ್ಟರೆ ನಾಳೆ ವ್ಯಾಪಾರಕ್ಕೆ ಸರಕಿಲ್ಲ
ನ್ಯಾಯದ ತಕ್ಕಡಿಗೂ ಶಾಂತಿಗೂ ಸಂಬಂಧ
ಮಿಕ್ಕವುಗಳೆಲ್ಲವೂ ಸ್ವಾರ್ಥದ ಅಕ್ರಮ ಹಾದರ
ಸಾವೆನಗೆ ಭಯ ಕೈಕಟ್ಟಿ ಕೂತ ತಪ್ಪುಗಳಿವೆ.
ಸಾವೆನಗೆ ಖುಷಿ ನಿಮ್ಮ ಜಗತ್ತಿನಿಂದ ಬಿಡುಗಡೆಯಿದೆ.

Team Blue Waves