ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಏಪ್ರಿಲ್ 4, 2015

ಮಾಧ್ಯಮ- ಪೂರ್ವಾಗ್ರಹ ಮತ್ತು ನೈತಿಕತೆ





     ಮಂಜುಳಾ ಮಾಸ್ತಿಕಟ್ಟೆ, ನ್ಯೂಸ್ ಆ್ಯಂಕರ್, ರಾಜ್‍ ನ್ಯೂಸ್ ಕನ್ನಡ, ಬೆಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ ಪಡೆದ ಲೇಖನ

ಮಾಧ್ಯಮ ಎಂಬುದು ಪೂರ್ವಾಗ್ರಹ ಮತ್ತು ನೈತಿಕತೆ ಎಂಬ ಎರಡು ಅಂಚಿನ ಕತ್ತಿಯನ್ನು ತನ್ನಲ್ಲಿ ಹುಡುಗಿಸಿಟ್ಟುಕೊಂಡಿರುವ ಅಪೂರ್ವವಾದ ಕ್ಷೇತ್ರ. ಇಲ್ಲಿದ್ದಷ್ಟು ಪೂರ್ವಾಗ್ರಹಗಳು ಹಾಗೂ ನೈತಿಕ ಪ್ರಜ್ಞೆಯ ಕನವರಿಕೆಗಳು ಜಗತ್ತಿನ ಇನ್ಯಾವುದೇ ಉದ್ಯಮದಲ್ಲಿ, ಸಮುದಾಯದಲ್ಲಿ ಕಂಡುಬರುವುದಿಲ್ಲ. ವೈಯುಕ್ತಿಕ ನೆಲೆಯಿಂದ ಆರಂಭವಾಗಿ, ವೃತ್ತಿಪರ ನೀತಿಗಳವರೆಗೆ ಪೂರ್ವಾಗ್ರಹಗಳು ಇಲ್ಲಿ ಕೆಲಸ ಮಾಡುತ್ತವೆ. ಅಷ್ಟೆ ತೀವ್ರವಾಗಿ ನೈತಿಕ ಪ್ರಜ್ಞೆ ಎಲ್ಲವಕ್ಕೂ ಒಂದು ತಾತ್ವಿಕ ಸಮಜಾಯಿಷಿಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ.

ಇದೊಂದು ಅತ್ಯಂತ ಸಂಕೀರ್ಣವಾದ, ಕಳೆದ ಕೆಲವು ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಚರ್ಚೆಯಲ್ಲಿರುವ ವಿಚಾರ. ಕಾಲ ಬದಲಾಗುತ್ತಿದ್ದಂತೆ, ತಂತ್ರಜ್ಞಾನ ಬೆಳೆಯುತ್ತ ಬರುತ್ತಿದ್ದಂತೆ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಾಣಿಸಿಕೊಂಡವು. ಅವುಗಳು ಸುದ್ದಿಯ ಸ್ವರೂಪ, ತಲುಪುವ ರೀತಿ, ಸಂವಹನ ಕ್ರಮ ಹೀಗೆ ನಾನಾ ಆಯಾಮಗಳಲ್ಲಿ ಆದಂತಹ ಬದಲಾವಣೆಗಳು. ಇಂತಹ ಬದಲಾವಣೆಗಳು ಆದಂತೆಲ್ಲ, ಅವುಗಳು ಹೊರಡಿಸುವ ಧ್ವನಿಯಲ್ಲೂ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕಾದ ಅನಿರ್ಯಾತೆ ಎದುರಾಯಿತು. ಇಂತಹ ಸಮಯದಲ್ಲಿ, ಅಂದರೆ, 90ರ ದಶಕದಲ್ಲಿ ಮಾಧ್ಯಮಗಳ ನೈತಿಕತೆ ಕುರಿತು ಜಾಗತಿಕ ಸಂಸ್ಥೆಗಳು ನೈತಿಕತೆಯ ವಿಚಾರದಲ್ಲಿ ನಿಯಮಾವಳಿಗಳನ್ನು ರೂಪಿಸಲು ಮುಂದಾದವು. ಆದರೆ, ಅದರಲ್ಲಿ ಕೆಲವು ಪೂರ್ವಾಗ್ರಹಗಳು ಕೆಲಸ ಮಾಡಿವೆ ಎಂಬ ಕಾರಣಕ್ಕೆ, ಈ ಕರಡು ಮಾಧ್ಯಮ ನೈತಿಕತೆಯ ಪರ ಮತ್ತು ವಿರೋಧದ ದನಿಗಳು ಕೇಳಿಬಂದವು. ಅಲ್ಲಿಂದ ಆಚೆಗೆ ನಿರ್ದಿಷ್ಟವಾಗಿ ಮಾಧ್ಯಮಗಳ ನೈತಿಕತೆ ಎಂಬುದು ಲಿಖಿತ ರೂಪ ಇಲ್ಲ. ಆದರೆ, ಪರಿಭಾವಿಸುವಿಕೆಯಲ್ಲಿ ಪ್ರತಿಯೊಂದು ಮಾಧ್ಯಮವೂ ತನ್ನದೇ ಆದ ನೈತಿಕ ಮಿತಿಗಳನ್ನು ದಾಟಬಾರದು ಎಂಬುದನ್ನು ಜನಸಾಮಾನ್ಯರೂ ಒಪ್ಪುತ್ತಾರೆ. ಹೀಗಾಗಿ, ಮಾಧ್ಯಮ ಸಂಸ್ಥೆಗಳು ತಮ್ಮನ್ನು ತಾವು ನಿರ್ಭಂಧಿಸಿಕೊಳ್ಳುವ ಅಗತ್ಯ ಇತ್ತು ಮತ್ತು ಇದೆ.

ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಕೆಲವೊಂದು ವಾಸ್ತವದ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ನ್ಯೂಸ್‍ ರೂಂ ಗಜಿಬಿಜಿಯ ನಡುವೆ ಪುಟ್ಟ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾದ ಸುದ್ದಿ ಬರುತ್ತದೆ. ಬ್ರೇಕಿಂಗ್‍ ನ್ಯೂಸ್ ಧಾವಂತ ಹೇಗಿರುತ್ತದೆ ಎಂದರೆ, ಬಾಲಕಿಯ ಅತ್ಯಾಚಾರದ ಸುದ್ದಿ ನಮ್ಮಲ್ಲಿಯೇ ಮೊದಲು ‘ಆನ್ ಏರ್’ ಆಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ, ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ ಅದು ಟಿವಿ ಪರದೆಯ ಮೇಲೆ ಮೊದಲು ಅಕ್ಷರ ರೂಪದಲ್ಲಿ, ನಂತರ ಆಕೆ ಭಾವಚಿತ್ರ ಸಮೇತ ಭಿತ್ತರಗೊಳ್ಳುತ್ತದೆ. ನಂತರ ಸ್ಥಳದಲ್ಲಿರುವ ವರದಿಗಾರನಿಗೆ ಕರೆ ಮಾಡಿ, ಇನ್ನಷ್ಟು ಮಾಹಿತಿ ನೀಡುಲು ಕೋರಲಾಗುತ್ತದೆ. ಆತ ಅತ್ಯಾಚಾರ ನಡೆದ ಸ್ಥಳ, ದಿನಾಂಕ ಮತ್ತಿತರ ಮಾಹಿತಿ ಜತೆಗೆ ಆಕೆಯ ಹೆಸರು, ವಿಳಾಸ ಎಲ್ಲವನ್ನೂ ತಿಳಿಸಿಬಿಡುತ್ತಾನೆ. ಕೊನೆಗೆ, ಅದು ಚಾನಲ್‍ನ ಉನ್ನತ ಹುದ್ದೆಯಲ್ಲಿ ಇದ್ದವರ ಕಣ್ಣಿಗೆ ಬಿದ್ದು, ಅವರಿಗೆ ಆ ಕ್ಷಣದಲ್ಲಿ ಅರ್ಥವಾದರೆ, ಸದರಿ ಸುದ್ದಿಗೆ ಬ್ರೇಕ್‍ ನೀಡಿ ಮುಂದಿನ ಸುದ್ದಿಗೆ ಹೋಗುತ್ತಾರೆ. ಅಷ್ಟೊತ್ತಿಗೆ ಮಾಧ್ಯಮವಾಗಿ ಪಾಲಿಸಬೇಕಾದ ನೈತಿಕ ವಿಚಾರವೊಂದು ಗಾಳಿಗೆ ತೂರಿ ಹೋಗಿರುತ್ತದೆ. ಇದು ಸದ್ಯದ ಕನ್ನದ ನ್ಯೂಸ್‍ ಚಾನಲ್‍ಗಳಲ್ಲಿ ಕಂಡು ಬರುತ್ತಿರುವ ನಿತ್ಯದ ಪರಿಪಾಟಲುಗಳು. ಹಾಗಂತ ಸುದ್ದಿ ನೀಡಿದ ವರದಿಗಾರನಿಗೆ ಕಾಳಜಿ ಇಲ್ಲ ಅಂತ ಅನ್ನಲೂ ಸಾಧ್ಯವಿಲ್ಲ. ಆದರೆ, ನಾವೇ ಮೊದಲು ನೀಡಿದರೆ, ಸುದ್ದಿ ರೇಟಿಂಗ್‍ನಲ್ಲಿ ನಾವೇ ಮುಂದೆ ಇರುತ್ತೇವೆ ಎಂಬ ಧಾವಂತದ ಪೂರ್ವಾಗ್ರಹವೊಂದು ಆತನ ವೃತ್ತಿನಿಷ್ಟ ವರದಿಗಾರಿಕೆಯಿಂದ ಹೆಜ್ಜೆ ಹಿಂದಿಡುವಂತೆ ಮಾಡಿರುತ್ತದೆ.

ನೈತಿಕತೆ ಹಾಗೂ ಪೂರ್ವಾಗ್ರಹಳು ಪ್ರತಿ ದಿನ ಮಾಧ್ಯಮಗಳ ಕೆಲಸದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಇದನ್ನು ಇನ್ನಷ್ಟು ಆಳದಲ್ಲಿ ಅರ್ಥಮಾಡಿಕೊಳ್ಳುವ ಮುನ್ನ ಇಂದಿನ ಮಾಧ್ಯಮಗಳು ಸಾಗುತ್ತಿರುವ ಹಾದಿಯ ಕುರಿತು ಮೊದಲು ಗಮನ ಹರಿಸಬೇಕಿದೆ. ಸಾಮಾನ್ಯವಾಗಿ ಜಾಗತಿಕ ಮಾಧ್ಯಮಗಳು ಹಾಗೂ ರಾಷ್ಟ್ರೀಯ ನ್ಯೂಸ್‍ ಮೀಡಿಯಾಗಳಿಗೆ ಹೋಲಿಸಿದರೆ ಸ್ಥಳೀಯ ಸುದ್ದಿ ವಾಹಿನಿಗಳ ಪ್ರಭಾವ ಜನಸಾಮಾನ್ಯರ ಮಟ್ಟದಲ್ಲಿ ಹೆಚ್ಚಿರುತ್ತದೆ. ಇವುಗಳನ್ನು ನೀತಿ ನಿರೂಪಕರು, ಜನ ಪ್ರತಿನಿಧಿಗಳು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಇರುವವರು ನೋಡುತ್ತಾರೆ, ಆದರೆ ಜನರು ಇದರ ಗ್ರಾಹಕರಾಗಿರುತ್ತಾರೆ. ಹೀಗಾಗಿಯೇ, ಸ್ಥಳೀಯ ಸುದ್ದಿ ವಾಹಿನಿಗಳು ಅಥವಾ ಪ್ರಾದೇಶಿಕ ಭಾಷೆಯ ಪತ್ರಿಕೆಗಳು ಸಾಮಾನ್ಯ ಜನರ ಅಭಿರುಚಿಯನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ತಮ್ಮನ್ನು ತಾವು ಸ್ಫರ್ದೆಯಲ್ಲಿ ಉಳಿಯಲು  ಪ್ರಯತ್ನಿಸುತ್ತವೆ. ಎಲ್ಲವೂ ಮಾರುಕಟ್ಟೆ ಕೇಂದ್ರಿತವಾಗಿರುವ ಇವತ್ತು ಮಾಧ್ಯಮ ಕೂಡ ಅದರಿಂದ ಹೊರತಾಗಿ ಇರಲು ಸಾಧ್ಯವಿಲ್ಲ; ಬಯಸುವುದೂ ಕಷ್ಟ. ಶಿಕ್ಷಣ, ಆರೋಗ್ಯದಂತಹ ಸೇವಾ ಕ್ಷೇತ್ರಗಳೇ ಇವತ್ತು ಮಾರುಕಟ್ಟೆಯಲ್ಲಿ ಸರಕಾಗಿ ಗ್ರಾಹಕರಿಗಾಗಿ ಕಾಯುತ್ತಿರುವ ದಿನಗಳಿವು. ಹೀಗಿರುವಾಗ ಮಾಧ್ಯಮವನ್ನು ಮಾತ್ರ ಸೇವೆಯ ರೀತಿಯಲ್ಲಿ ನೋಡಲು ಹೇಗೆ ಸಾಧ್ಯವಾಗುತ್ತದೆ? ಅದು ಸದ್ಯದ ಪ್ರಶ್ನೆ. ಇಂತಹ ಔದ್ಯಮಿಕ ಒತ್ತಡಗಳಿರುವ ಕ್ಷೇತ್ರವೊಂದರಲ್ಲಿ ಸಹಜವಾಗಿಯೇ ಹಲವು ರೀತಿಯ ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಅವುಗಳದ್ದೇ ಆದಂತಹ ರಾಜಕೀಯ, ಆರ್ಥಿಕ ಪೂವ್ರಾಗ್ರಹಗಳು ಸುದ್ದಿಯ ರೂಪದಲ್ಲಿ ಜನ ಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಇದನ್ನು ನೈತಿಕತೆ ಎಂಬ ಚರ್ಚೆಯಿಂದ ಹೊರಗಿಟ್ಟರೆ ಮಾತ್ರವೇ ಇಂತಹ ಕ್ಷೇತ್ರದ ಗೌರವಾನ್ವಿತ ಮಾನವ ಸಂಪನ್ಮೂಲ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ನಮ್ಮ ದೇಶದ ಮಾಧ್ಯಮಗಳಿಗೆ ವಿಶೇಷ ಹಿನ್ನೆಲೆಯಿದೆ. ಇದು ವಸಹಾತುಶಾಹಿ ವಿರುದ್ಧ ಹೋರಾಟ ಮಾಡಿದ ಆಫ್ರಿಕನ್‍ ಹಾಗೂ ಲ್ಯಾಟಿನ್‍ ಅಮೆರಿಕಾ ದೇಶಗಳ ಮಾಧ್ಯಮಗಳಿಗೆ ಇರುವಂತಹ ಹಿನ್ನೆಲೆ. ಒಂದು ಕಡೆ ರಾಷ್ಟ್ರೀಯ ಚಳವಳಿ ಮತ್ತೊಂದು ಕಡೆ ಪ್ರಬಲ ಆರ್ಥಿಕ ಹಿತಾಸಕ್ತಿಯನ್ನು ಹೊಂದಿದ್ದ ಬ್ರಿಟಿಷ್‍ ಈಸ್ಟ್‍ ಇಂಡಿಯಾ ಕಂಪನಿ. ಇವುಗಳ ನಡುವೆ ಮಾಧ್ಯಮ ಎಂಬುದು ಯಾವತ್ತಿಗೂ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿಯೇ ಇತ್ತು. ಹಾಗಂತ ಹೇಳುತ್ತದೆ ಭಾರತದ ಪತ್ರಿಕೋದ್ಯಮದ ಇತಿಹಾಸ. ಸ್ವಾತಂತ್ರ್ಯ ನಂತರವಂತೂ ಹೊಸ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮಗಳ ಒಂದು ಅಂಚಿನವರೆಗೂ ನಿರ್ವಹಿಸಿದ ಪಾತ್ರ ದೊಡ್ಡದಿತ್ತು. ಆದರೆ, 90ರ  ದಶಕದ ನಂತರ ಆದ ಮಹತ್ವದ ಬದಲಾವಣೆಯಲ್ಲಿ ಮಾಧ್ಯಮಗಳು ಅನಿವಾರ್ಯವಾಗಿ ತಮ್ಮನ್ನು ತಾವು ಮುಕ್ತ ಆರ್ಥಿಕ ನೀತಿಗಳಿಗೆ ಒಗ್ಗಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಯಿತು. 

ಇಲ್ಲಿನ ಮಾಧ್ಯಮ ಕ್ಷೇತ್ರ ಸಹಜವಾಗಿಯೇ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿತು. ಅದು ಮೊದಲು ಮನೋರಂಜನೆಯ ರೂಪದಲ್ಲಿ, ನಂತರ ಸುದ್ದಿಯ ರೂಪದಲ್ಲಿ ವಿದೇಶಿ ಮಾಧ್ಯಗಳ ವಿಶೇಷವಾಗಿ ಅಮೆರಿಕನ್ ಮಾಧ್ಯಮಗಳ ಯಥಾವತ್ ನಕಲು ಮೂಡಿಬರಲು ಶುರುವಾಯಿತು. ಮನೋರಂಜನೆ ಹೆಸರಿನಲ್ಲಿ ಅಮದು ಮಾಡಿಕೊಂಡ ಪರಿಕರಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ ಎಂಬ ಪೂರ್ವಾಗ್ರಹ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೂ ಇದೆ. ಆದರೆ, ಅದಕ್ಕಿಂತಹಲೂ ಮುಖ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಜನ ನೋಡುತ್ತಿದ್ದಾರೆ ಎಂಬುದಕ್ಕೆ ‘ರೇಟಿಂಗ್’ ಎಂಬ ಪಟ್ಟ ಕಟ್ಟುವ ಕೆಲಸ ನಡೆಯಿತು. ಯಾವುದು ಹೆಚ್ಚು ರೇಟಿಂಗ್ ಪಡೆಯುತ್ತದೆಯೋ, ಅದೇ ಸರ್ವಶ್ರೇಷ್ಠ ಎಂಬ ಭಾವನೆ ಬರುವಂತೆ ನೋಡಿಕೊಳ್ಳಲಾಯಿತು. ಅಂತಹ ಸರ್ವಶ್ರೇಷ್ಠತೆಗಳಿಗೆ ಜಾಹೀರಾತು ರೂಪದಲ್ಲಿ ಹಣ ಹರಿದುಬರುವಂತೆ ಮಾಡಲಾಯಿತು. ಈ ಶ್ರೇಷ್ಠತೆ, ರೇಟಿಂಗ್, ಜಾಹೀರಾತು ಎಂಬ ವಿಷಚಕ್ರವನ್ನು ಅತ್ಯಂತ ಸಮರ್ಪಕವಾಗಿ ಸ್ಥಾಪಿಸಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದ ಪೂವ್ರಾಗ್ರಹಗಳು ಎಂಥದ್ದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಲಾರದು. ಯಾಕೆಂದರೆ, ಇವತ್ತು ಜಾಗತಿಕ ಮುಕ್ತ ಮಾರುಕಟ್ಟೆಯ ಪರಿಭಾಷೆಯೂ ಇದೇ ಆಗಿರುವುದರಿಂದ ಹಿಂದಿನಂತೆ ಅಪರಿಚಿತ ಪದಗಳು ಇವಾಗಿಲ್ಲ ಎಂಬುದನ್ನೂ ಗಮನಿಸಬೇಕಿದೆ.

ಮುಕ್ತ ಮಾರುಕಟ್ಟೆ ಎಂಬುದನ್ನು ಹೀಗೀಗೆ ಎಂದು ನಿರೂಪಿಸಲು ಸಾಧ್ಯವಾಗದೇ ಹೋಗಬಹುದು. ಸುಮಾರು ಮುನ್ನೂರು ವರ್ಷಗಳಷ್ಟು ಇತಿಹಾಸ ಇರುವ ‘ವಾಲ್‍ಸ್ಟ್ರೀಟ್‍’ನಂತಹ ಶೇರು ಮಾರುಕಟ್ಟೆಯ ಹೃದಯದ ಬಡಿತವನ್ನು ಅಳೆಯುವುದು ಕಷ್ಟವಾಗಬಹುದು. ಆದರೆ, ಅದು ಸಾಮಾಜಿಕವಾಗಿ ಮಾಡಿರುವ ಪರಿಣಾಮ ಎಂಥದ್ದು ಎಂಬುದು ಕಣ್ಮುಂದೆ ಇದೆ. ಇಲ್ಲಿ ಸಂಸ್ಥೆ, ದೇಶ ಅಥವಾ ಸಮುದಾಯಗಳಲ್ಲಿ ನೈತಿಕ ಅಧಃಪತನ ಕಾಣುತ್ತಿದ್ದೇವೆ. ನಿತ್ಯ ಜೀವನದ ಕುರಿತೇ ಪೂರ್ವಾಗ್ರಹಗಳು ಬೆಸೆದುಕೊಂಡಿವೆ. ಇದು ಮಾಧ್ಯಮಗಳಲ್ಲೂ ಇದೆ ಎನ್ನಬಹುದಿತ್ತು. ಆದರೆ, ವಿಸ್ತಾರವಾಗಿ ಆಲೋಚಿಸಿದರೆ, ಹೀಗೊಂದು ನೈತಿಕ ಅದಃಪತನಕ್ಕೆ ಮಾಧ್ಯಮಗಳ ಕೊಡುಗೆಯೂ ಎದ್ದು ಕಾಣುತ್ತದೆ. ಅದು ವೈಯುಕ್ತಿಕ ನೆಲೆಯ ನೈತಿಕ ವಿಚಾರಗಳಿಂದ ಶುರುವಾಗಿ, ಸಾಂಸ್ಕೃತಿಕ ವಿಚಾರಗಳವರೆಗೂ ಮಾಧ್ಯಮಗಳ ಪ್ರೇರಣೆಯಿಂದ ಆಗಿರುವ ಬದಲಾವಣೆ ಕುರಿತು ಇವತ್ತು ಆಳವಾದ ಅಧ್ಯಯನಗಳ ಅಗತ್ಯವಿದೆ. ಸಾಮಾನ್ಯವಾಗಿ ಅನುಭವದ ಆಧಾರದ ಮೇಲೆ ಕೆಲವು ವಿಚಾರಗಳನ್ನು ಗುರುತು ಮಾಡಬಹುದಾದರೂ, ಅಂತಿಮವಾಗಿ ಸ್ಪಷ್ಟರೂಪದಲ್ಲಿ ಬದಲಾಗಿರುವ ಚಿತ್ರಣವನ್ನು ಕಟ್ಟಿಕೊಳ್ಳುವುದು ಇಂದಿನ ಅಗತ್ಯವಾಗಿದೆ.  
ಸುದ್ದಿ ವಿಚಾರದಲ್ಲಿ ನೈತಿಕತೆ
ಇನ್ನು, ಮಾಧ್ಯಮದ ಹೃದಯಭಾಗ ಸುದ್ದಿಗಳ ವಿಚಾರಕ್ಕೆ ಬರುವುದಾರೆ ನಿಖರತೆ, ಸ್ಪಷ್ಟತೆ ಹಾಗೂ ನಿಷ್ಪಕ್ಷಪಾತವಾಗಿರುವುದು ‘ಮಾಧ್ಯಮ ನೈತಿಕತೆ’ ಎಂದು ಕರೆಸಿಕೊಳ್ಳುತ್ತದೆ. ಅದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಗುರುತನ್ನು ಗೌಪ್ಯವಾಗಿಡುವ, ಎಚ್‍ಐವಿ ಪೀಡಿತರ ಕುರಿತು ಸುದ್ದಿ ಮಾಡುವಾದ ಸೂಕ್ಷ್ಮತೆಗಳನ್ನು ಹೊಂದಿರುವ ಹಾಗೂ ಅಶ್ಲೀಲ ದೃಶ್ಯ ಅಥವಾ ಚಿತ್ರಗಳನ್ನು ಬಳಸದಿರುವ ಸಾಮಾನ್ಯ ವಿಚಾರಗಳಿಂದ ಆರಂಭವಾಗಿ ಯಾವುದೇ ಸುದ್ದಿಯನ್ನು ಸುದ್ದಿಯಾಗಿ ಮಾತ್ರವೇ ಜನರಿಗೆ ತಲುಪಿಸುವವರೆಗೂ ನೈತಿಕತೆಯ ನೆರಳು ಕಾಯುತ್ತದೆ. 1970ರಲ್ಲಿಯೇ ‘ನ್ಯೂ ವರ್ಡ್‍ ಇನ್ಫೊಮೇಷನ್‍ ಅಂಡ್‍ ಕಮ್ಯುನಿಕೇಷನ್‍ ಆರ್ಡರ್’ ಎಂಬ ಸಂಸ್ಥೆ ಇಂತಹ ಕೆಲವು ನಿಯಮಾವಳಿಗಳನ್ನು ಪಟ್ಟಿ ಮಾಡಿತ್ತು. ಮುಂದೆ, ಅದಕ್ಕೆ ವಿರುದ್ಧವಾಗಿ ಮತ್ತೊಂದಿಷ್ಟು ಜಾಗತಿಕ ಸಂಸ್ಥೆಗಳು ಮಾಧ್ಯಮಗಳ ನೈತಿಕತೆ ಎಂದರೇನು ಎಂದು ತಿಳಿಸಲು ಮುಂದಾದವು. ಹೀಗೆ ಎರಡು ದಶಕಗಳವರೆಗೂ ಈ ವಿಚಾರ ಚರ್ಚೆಯಲ್ಲಿ ಇತ್ತಾದರೂ, ಕೊನೆಗೆ ‘ಮಾಧ್ಯಮ ನೈತಿಕತೆ’ ಎಂಬುದು ಹಳಸಲು ಪದದ ರೀತಿ ಧ್ವನಿಸಲು ಶುರುವಾಯಿತು. ಸದ್ಯ ಮೆಕ್ಸಿಕೋದಂತಹ ದೇಶಗಳಲ್ಲಿ ಪತ್ರಕರ್ತರು ಕೊಲೆಯಾಗುವುದು ಸಾಮಾನ್ಯ ಎಂಬಂತೆ ಆಗಿದೆ. ಅಲ್ಲಿನ ಡ್ರಗ್‍ ಲಾಭಿಯ ವಿರುದ್ಧ ಬರೆಯುವ ಅಥವಾ ಚಿತ್ರೀಕರಿಸುವ ಪ್ರತಿ ಪತ್ರಕರ್ತನೂ ಸಾವಿನ ಅಂಚಿನಲ್ಲಿದ್ದುಕೊಂಡೇ ಕೆಲಸ ಮಾಡುತ್ತಾನೆ. ಇಂತಹ ಸ್ಥಿತಿ ಇರಾಕ್‍, ಈಜಿಪ್ಟ್‍, ಚೆಚೆನ್ಯಾ, ಮಂಗೋಲಿಯಾ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ಇದೆ. ಇದಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ವೃತ್ತಪರ ಪತ್ರಿಕೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ನಿರ್ಭೀತವಾಗಿರುವ ಪತ್ರಿಕೋದ್ಯಮದ ಸಾಧ್ಯತೆಗಳಿವೆ. ಆದರೆ ಇಲ್ಲಿರುವ ಸಮಸ್ಯೆ ವೈಯುಕ್ತಿಕ ಮಿತಿಗಳದ್ದು. ಒಂದು ಕ್ಷೇತ್ರವಾಗಿ ಭಾರತದ ಪತ್ರಿಕೋದ್ಯಮಕ್ಕೆ ಒಂದಷ್ಟು ಚೌಕಟ್ಟುಗಳು ಇದ್ದಿರಬಹುದು. ಒಂದು ಸಮುದಾಯವಾಗಿ ಇಲ್ಲಿನ ಪತ್ರಕರ್ತರಿಗೆ ಕೆಲವು ಸಮಸ್ಯೆಗಳು ಇದ್ದಿರಬಹುದು. ಆದರೆ ವೈಯುಕ್ತಿಕ ಆಲೋಚನೆಯಲ್ಲಿ ಅಂತಹ ಎಲ್ಲಾ ಚೌಕಟ್ಟುಗಳನ್ನು ಮೀರುವ, ಮಿತಿಗಳನ್ನು ದಾಟುವ ಸಾಧ್ಯತೆಯಂತೂ ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತದೆ. ಆದರೆ, ಇಲ್ಲಿ ಸ್ವಯಂ ಮಿತಿಗಳನ್ನು ಹಾಕಿಕೊಳ್ಳುವ ಸ್ಥಿತಿ ಇದೆ. ಇದರಿಂದಾಗಿ ನೈತಿಕತೆ ಎಂಬುದು ಹೆಚ್ಚು ಕಾಡುವ ಅಂಶವಾಗಿ ಉಳಿಯುವುದಿಲ್ಲ. ‘ಭ್ರಷ್ಟಾಚಾರ ಎಲ್ಲಾ ಕಡೆಗೂ ಇದೆ. ಇವತ್ತು ದುಡ್ಡಿದ್ದರೆ ಮಾತ್ರ ಬದುಕು,’’ ಎಂಬ ಜನಪ್ರಿಯ ಮಾತುಗಳು ಇಲ್ಲೂ ಧ್ವನಿಸುತ್ತಿವೆ. ಹೀಗಿರುವಾಗ ನೈತುಕತೆ ಎಂಬುದು ಸುದ್ದಿಯ ವಿಚಾರಕ್ಕೆ ಅನ್ವಯಿಸಿಕೊಳ್ಳಬೇಕಾ? ಪತ್ರಿಕೋದ್ಯಮದ ಪಠ್ಯಗಳಲ್ಲಿ ಇರುವಂತೆ ಯಾಂತ್ರಿಕ ಪಟ್ಟಿಯನ್ನು ಮಾಡಬೇಕಾ ಅಥವಾ ಬದಲಾದ ಕಾಲದಲ್ಲಿ ಹೊಸ ಪರಿಭಾಷೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಆದರೆ, ಇಂತಹ ಪ್ರಶ್ನೆಗಳಿಗೆ ಇಲ್ಲಿ ಹೆಚ್ಚಿನ ಅವಕಾಶ ಇಲ್ಲ. ಅಥವಾ ಇಂತಹ ಪ್ರಶ್ನೆಗಳು ಅಪ್ರಸ್ತುತ ಎಂಬ ಭಾವನೆ ಇದೆ. ಒಂದು ವೇಳೆ ಹೀಗೆ ಪ್ರಶ್ನೆಗಳು ಹುಟ್ಟುವ ಅವಕಾಶ ಸೃಷ್ಠಿಯಾದರೆ ನಿತ್ಯದ ಬದುಕಿಗೆ ಸಮಸ್ಯೆಯಾಗುತ್ತದೆ ಎಂಬ ಪೂರ್ವಾಗ್ರಹವೂ ಇದೆ.  ಇದರಿಂದಾಗಿಯೇ ಒಂದು ರೀತಿಯ ಕಂಫರ್ಟ್‍ ಆಗಿರುವ ಭಾವನೆ ಇಲ್ಲಿನ ಪತ್ರಿಕೋದ್ಯಮದಲ್ಲಿ ಕಾಪಾಡಿಕೊಂಡು ಬರುತ್ತಿರುವುದು ಗೋಚರಿಸುತ್ತದೆ. ನೈತಿಕ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸದಿದ್ದರೆ, ಸುಲಭವಾಗಿ ಬದುಕು ಬದಲಾಗಿ ಬಿಡುವ ಅವಕಾಶಗಳು ಇಲ್ಲಿ ಸಿಗುತ್ತಿದೆ. ಇದರಿಂದಾಗಿಯೇ ಮಾಧ್ಯಮ ನೈತಿಕತೆ ತನ್ನ ನಿಜ ಅರ್ಥವನ್ನು ಕಳೆದುಕೊಂಡಿದೆ. ಜತೆಗೆ ಇವತ್ತಿಗೆ ಮಾಧ್ಯಮ ನೈತಿಕತೆ ಎಂಬುದನ್ನು ವ್ಯಾಖ್ಯಾನಿಸುವ ಪರಿಭಾಷೆಯೂ ಬದಲಾಗಬೇಕಾದ ಅಗತ್ಯವಿದೆ.

ಪೂರ್ವಾಗ್ರಹದ ಸುತ್ತ
ನೈತುಕ ಪ್ರಜ್ಞೆ ಕಳೆದುಕೊಂಡ ಸಮಾಜ ಹೆಚ್ಚು ಪೂರ್ವಾಗ್ರಹಕ್ಕೆ ಒಳಗಾಗುತ್ತದೆ. ಅದಕ್ಕೆ ಇತಿಹಾಸಕ್ಕೆ ಹೇರಳ ಉದಾಹರಣೆಗಳು ಸಿಗುತ್ತದೆ. ಆದರ್ಶಗಳು ಶಾಂತಿಯುತವಾಗಿರುತ್ತವೆ, ಆದರೆ ಇತಿಹಾಸ ಎಂಬುದು ಹೆಚ್ಚು ಭೀಕರ. ಶಾಂತಿ ಮತ್ತು ಭೀಕರತೆಗಳ ನಡುವೆ ಒಂದು ನಿರ್ಲಿಪ್ತ ಕಾಲಘಟ್ಟ ಇರುತ್ತದೆ. ಅದರೊಳಗೆ ಎಲ್ಲವೂ ಸಂತುಷ್ಟಗೊಂಡಂತೆ ಲೇಪನ ಹಚ್ಚಿ ಇಡಲಾಗುತ್ತದೆ. ಅಂತಹದೊಂದು ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ. ಅಂತಹದೊಂದು ವಾತಾವರಣೆ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಅದರ ಪ್ರತಿಫಲವನ್ನು ಕೆಲವು ಪಡೆಯುವ ಪತ್ರಕರ್ತ ಸಹಜವಾಗಿಯೇ ಹೆಚ್ಚು ಸಂತುಷ್ಟನಾಗಿ ಬದುಕುವ ಹಾದಿ ಕೊಂಡುಕೊಳ್ಳುತ್ತಾನೆ. ಇದು ಈತನನ್ನು ಇನ್ನಷ್ಟು ಪೂರ್ವಾಗ್ರಹ ಪೀಡಿತನನ್ನಾಗಿ, ಯಾವುದೋ ಒಂದು ವಿಚಾರದ ಪರ ಅಥವಾ ವಿರೋಧಿಯನ್ನಾಗಿ ಬದಲಾಯಿಸಿಬಿಟ್ಟಿರುವ ಸಾಧ್ಯತೆಯೂ ಇದೆ. ಒಬ್ಬ ನಿರ್ಧಿಷ್ಟ ಶತ್ರು ಇಲ್ಲ ಅಂತಾದರೆ, ಒಂದು ಸಾಮಾನ್ಯವಾಗಿರುವ ಗುರಿ ಇಲ್ಲ ಅಂತಾದರೆ ಎದುರಾಗುವ ಸಮಸ್ಯೆ ಸಮಷ್ಠಿಯದ್ದು. ಸಾಮುದಾಯಿಕ ಹಿತಾಸಕ್ತಿ ಕಳೆದು ಹೋಗಿರುವುದು ಇವತ್ತಿನ ಮಾಧ್ಯಮ ಜಗತ್ತಿನ ಸಮಸ್ಯೆ ಕೂಡ. ಇಲ್ಲಿ ಯಾರೂ ಶತ್ರುಗಳೂ ಅಲ್ಲ, ಯಾರು ಮಿತ್ರರೂ ಅಲ್ಲ. ಕೇಳುವುದಕ್ಕೆ ಇದು ವಸ್ತುನಿಷ್ಟತೆಯ ಧ್ವನಿಯಂತೆ ಕಂಡರೂ, ಇದರ ಹಿಂದೆ ಅಡಗಿರುವುದು ಪೂರ್ವಾಗ್ರಹ ಪೀಡಿತ, ಸ್ವ ಹಿತಾಸಕ್ತಿ ಇವತ್ತಿನ ಪತ್ರಿಕೋದ್ಯಮವನ್ನು ಬಲಿ ತೆಗೆದುಕೊಳ್ಳುತ್ತಿದೆ.
ಸಾಮಾನ್ಯವಾಗಿ ಪತ್ರಿಕೋದ್ಯಮ ಅಥವಾ ಮಾಧ್ಯಮ ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ಅದರಲ್ಲೂ ಭಾರತದಂತಹ ದೇಶಗಳಲ್ಲಿ ಧಾರ್ಮಿಕತೆ ಎಂಬುದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯದಂತಹ ಆಯಾಮಗಳನ್ನು ಪಡೆದುಕೊಳ್ಳುವ ಸಮಯದಲ್ಲಿ ಮಾಧ್ಯಮ ಹೆಚ್ಚು ಸಂಯಮದಿಂದ ಹಾಗೂ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಆದರೆ, ಸದ್ಯ ಧರ್ಮದ ಪರ ಮತ್ತು ಕಡು ವಿರೋಧ ಎಂಬ ಎರಡು ವಿರುದ್ಧಾರ್ಥಕ ಪದಗಳ ನಡುವೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ತಮ್ಮ ಗ್ರಾಹಕರು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿಕೊಂಡಂತೆ ಇದೆ. ಇದರ ನಡುವೆ ಇರಬಹುದಾದ ಸೂಕ್ಷ್ಮ ಎಳೆ ಕಳೆದುಹೋಗುತ್ತಿದೆ. ಇದು ರಾಜಕೀಯ ಪಕ್ಷಗಳ ವಿಚಾರದಲ್ಲೇ ಆಗಿರಬಹುದು ಅಥವಾ ಒಬ್ಬ ನಾಯಕನ ಪರ ಮತ್ತು ವಿರೋಧದ ವಿಚಾರದಲ್ಲೇ ಆಗಿರಬಹುದು. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಹ, ಮುಕ್ತ ಚರ್ಚೆಗೆ ಅವಕಾಶ ಇಲ್ಲದಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಮಾಧ್ಯಮದಲ್ಲಿ ಕೆಲಸ ಮಾಡುವವರ ಪೂರ್ವಾಗ್ರಹಕ್ಕೆ ಸಂಬಂಧಿಸಿದ ಅಂಶಗಳು.

ಮುಂದಿರುವ ಸವಾಲು ಮತ್ತು ಸಾಧ್ಯತೆಗಳು
ಇವತ್ತು ಮಾಹಿತಿ ಎಂಬುದು ಬೆರಳ ತುದಿಯಲ್ಲಿದೆ. ವಿಕಿಪೀಡಿಯಾದಂತಹ ವೆಬ್‍ಸೈಟ್‍ಗೆ ಹೋಗಿ ‘ಮೀಡಿಯಾ ಎಥಿಕ್ಸ್‍’ ಎಂಬ ಎರಡು ಪದಗಳನ್ನು ನೀಡಿದರೆ ಸಾಕು, ಮಾಹಿತಿ ಪುಟಗಳು ಹೇರಳವಾಗಿ ತೆರೆದುಕೊಳ್ಳುತ್ತವೆ. ಒಬ್ಬ ಪತ್ರಕರ್ತನಿಗೆ ಇರುವು ಚೌಕಟ್ಟುಗಳೇನು? ಅವನು ವೃತ್ತಿಯಲ್ಲಿ ಪಾಲಿಸಬೇಕಾದ ನೀತಿಗಳೇನು ಎಂಬ ವಿಚಾರಗಳು ಸಿಗುತ್ತವೆ. ಆದರೆ, ಈ ಮಾಹಿತಿ, ಕೇವಲ ಮಾಹಿತಿಯಾಗಿ ಅಷ್ಟೆ ಉಳಿದುಬಿಡುತ್ತಿವೆ. ಅದು ಜ್ಞಾನವಾಗಿ ಬದಲಾಗುತ್ತಿಲ್ಲ. ನಿತ್ಯ ಜೀವನ ಸರಕಾಗಿಯೂ ಅದು ಬಳಕೆಗೆ ಯೋಗ್ಯವಾಗಿಲ್ಲ. ಇದಕ್ಕೆ ಇರುವ ಸಮಸ್ಯೆ, ಬದಲಾದ ಕಾಲದಲ್ಲಿ ನೈತಿಕತೆ ಎಂಬುದೂ ಬದಲಾಗಿರುತ್ತದೆ. ಪೂರ್ವಾಗ್ರಹಗಳೂ ಕೂಡ ತಮ್ಮ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡಿರುತ್ತವೆ. ಹೀಗಾಗಿ ಇವುಗಳನ್ನು ಅರ್ಥೈಸುವ ರೀತಿಯೂ ಬದಲಾಗಬೇಕಿರುತ್ತದೆ. ಅದು ಮುಂದಿನ ತಲೆಮಾರಿಕೆ ಪಠ್ಯವಾಗಿ ಬಂದರೆ ಮಾತ್ರವೇ, ಶಿಕ್ಷಣದ ಕಲಿಕೆಗೂ ನಿತ್ಯ ಜೀವನಕ್ಕೂ ಬಂಧವೊಂದು ಬೆಳೆಯುತ್ತದೆ. ಮಾಹಿತಿ ಜ್ಞಾನವಾಗಿ, ಜ್ಞಾನ ಬಳಕೆಯ ವಸ್ತುವಾಗಿ ಕಾಣಿಸುತ್ತದೆ. ಅದರಲ್ಲೂ ಪತ್ರಿಕೋದ್ಯಮವನ್ನು ಕನಸಾಗಿ ಇಟ್ಟುಕೊಂಡು ಬಂದವರು ಇನ್ನೂ ಹೆಚ್ಚು ಮುತುವರ್ಜಿಯಿಂದ ಈ ಕೆಲಸವನ್ನು ಮಾಡಬೇಕಿದೆ. ತಮಗೆ ಲಭ್ಯ ಮಾಹಿತಿ ಇಟ್ಟುಕೊಂಡು, ಮಾಧ್ಯಮಗಳು ಸಾಗುತ್ತಿರುವ ಹಾದಿ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಹುಡುಕಬೇಕಿದೆ. ಜತೆಗೆ ತಮ್ಮ ಇತಿಮಿತಿಗಳ ನಡುವೆಯೇ ಪರಿಹಾರದ ಹಾದಿಗಳನ್ನೂ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ.

ಇಲ್ಲವಾದರೆ, ‘ಮೀಡಿಯಾ ಎಥಿಕ್ಸ್’ ಎಂಬುದು ವಿಕಿಪೀಡಿಯಾ ಪೇಜ್‍ ರೀತಿಯಲ್ಲಿ ಕೇವಲ ಒಣ ಸಿದ್ಧಾಂತದಂತೆ ಮುಂದಿನ ತಲೆಮಾರಿಗೆ ಭಾಸವಾಗುವ ಅಪಾಯವೂ ಇದೆ. ಇವತ್ತು ಅಮೆರಿಕಾದಂತಹ ದೇಶಗಳ ಆರ್ಥಿಕತೆಯ ನೆರಳಿನಲ್ಲಿಯೇ ‘ಪ್ರೊ ಪಬ್ಲಿಕಾ’ದಂತಹ ವೆಬ್‍ಸೈಟ್‍ಗಳು ತಮ್ಮ ವಸ್ತುನಿಷ್ಟ ಪತ್ರಿಕೋದ್ಯಮವನ್ನು ನಡೆಸಿಕೊಂಡು ಬರುತ್ತಿವೆ. ಸುದ್ದಿಯ ವಿಚಾರದಲ್ಲಿ ನೈತಿಕತೆಯ ಮಹತ್ವವನ್ನು ಇಂತಹ ಕೆಲವು ಪರ್ಯಾಯ ಮಾಧ್ಯಮಗಳು ಮಾದರಿ ರೀತಿಯಲ್ಲಿ ಮುಂದಿಟ್ಟಿವೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇವುಗಳು ಮುಂದಿಡುತ್ತಿರುವ ಸುದ್ದಿಗಳು ಹಾಗೂ ವಿಚಾರಗಳು ಪ್ರಭಾವ ಬೀರುತ್ತಿವೆ. ಇದಕ್ಕೆ ಬೆನ್ನುಲುಬಾಗಿ ನಿಂತಿರುವರ ಮತ್ತದೇ ಜನಸಾಮಾನ್ಯರು ಎಂಬುದು ಅಲ್ಲಿನ ಸಾಮಾಜಿಕ ಮನಸ್ಥಿತಿಯನ್ನು ಬಿಂಬಿಸುತ್ತದೆ. ಆದರೆ, ನಮ್ಮಲ್ಲಿ ಇಂತಹದೊಂದು ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳು ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ಸಾಮಾಜಿಕ ಎಚ್ಚರಿಕೆ ಮೂಡದ ಹೊರತು ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ, ತಮಗೆ ತಾವೇ ಹಾಕಿಕೊಂಡುವ ನಿರ್ಭಂಧಗಳಿಂದ ಹೊರಬರುವುದು ಕಷ್ಟ. ಜತೆಗೆ, ಪೂರ್ವಾಗ್ರಹ ಪೀಡಿತ ಸಮಾಜ ಮನಸ್ಥಿತಿ, ಮೀಡಿಯಾದ ಮನಸ್ಥಿತಿಯಾಗಿಯೂ ಕಾಣುತ್ತಿರುವಾಗ, ಬರೀ ಮಾಧ್ಯಮ ಮಾತ್ರ ಬದಲಾವಣೆ ಆಗಬೇಕು ಎಂದು ಬಯಸುವುದು ವಾಸ್ತವ ಅಲ್ಲ. ಹೀಗಾಗಿ, ಎದುರಿಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಒಂದು ಸಮಗ್ರವಾದ ಚಿಂತನೆಯ ಅಗತ್ಯವಂತೂ ಇವತ್ತಿಗೆ ಇದೆ.  


ಕೊನೆಯದಾಗಿ, ಸಮಾಜದ ಪಾಲಿಗೆ ಮಾಧ್ಯಮ ಎಂಬುದು ಅತ್ಯಂತ ಅಗತ್ಯವಾದ ಕ್ಷೇತ್ರ. ಸಾಕಷ್ಟು ಮಿತಿಗಳು ಮತ್ತು ಸಮಸ್ಯೆಗಳ ಹೊರತಾಗಿಯೂ ಇಲ್ಲಿರುವ ಸಾಧ್ಯತೆಗಳು ಅಪಾರವಾಗಿವೆ. ಸದ್ಯಕ್ಕೆ ಮಾಧ್ಯಮಗಳನ್ನು ಕಾಡುತ್ತಿರುವ ಪೂರ್ವಾಗ್ರಹಗಳು ಮತ್ತು ನೈತಿಕ ವಿಚಾರಗಳನ್ನು ವೈಯುಕ್ತಿಕ ನೆಲೆಯಿಂದ ಸಾಮುದಾಯಿಕ ನೆಲೆಗೆ ವಿಸ್ತರಿಸಕೊಂಡು ನೋಡುವ ಮತ್ತು ಅದಕ್ಕೆ ಕಡಿವಾಣ ಹಾಕಲು ಮತ್ತೆ ಸಮುದಾಯ ನೆಲೆಯಿಂದ ವೈಯುಕ್ತಿಕ ನೆಲೆಯವರೆಗೆ ಪರಿಹಾರಗಳನ್ನೂ ಕಂಡುಕೊಳ್ಳುವುದು ಇವತ್ತಿನ ಅಗತ್ಯವಾಗಿದೆ. ಈ ಮೂಲಕ ಜಗತ್ತಿನ ಅತ್ಯುತ್ತಮ ವೃತ್ತಿಗಳಲ್ಲಿ ಒಂದಾದ ಪ್ರತಿಕೋದ್ಯಮವನ್ನು ಅಥವಾ ಇವತ್ತಿನ ಮಾಧ್ಯಮ ಎಂಬ ವಿಸ್ತಾರ ರೂಪವನ್ನು ವಿಶಾಲ ನೆಲೆಗೆ ಕೊಂಡೊಯ್ಯುವ ಸಾಧ್ಯವಾಗುತ್ತದೆ. ಮಾಧ್ಯಮ ಜಗತ್ತಿನಲ್ಲಿ ಕಡಿಮೆ ಪೂರ್ವಾಗ್ರಹಗಳು ಹಾಗೂ ಹೆಚ್ಚು ನೈತಿಕತೆ ಅಂಶಗಳು ಬೆಳೆದಷ್ಟು ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ. ಅಷ್ಟರ ಮಟ್ಟಿಗೆ ಮಾಧ್ಯಮಗಳ ಪ್ರಭಾವ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. 

ಸೋಮವಾರ, ಮಾರ್ಚ್ 30, 2015

ಭಾರತದಲ್ಲಿ ಭಯೋತ್ಪಾದನೆ ಮೂಲಗಳು ಹಾಗೂ ನಿಗ್ರಹ ಮಾರ್ಗಗಳು



ಕ್ರತಿಕಾ.ಕೆ. ಮಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ತ್ರತೀಯ ಬಹುಮಾನ ಪಡೆದ ಲೇಖನ

“ಭಯೋತ್ಪಾದನೆ” ಎಂಬ ಶಬ್ದವೇ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುವ ಚಿತ್ರಣವೆಂದರೆ ಅರಾಜಕತೆ, ಭೀತಿ, ಹಿಂಸೆ ಮತ್ತು ಸಾವುನೋವಿನದ್ದಾಗಿದೆ. ಅದು ಜನ ಸಾಮಾನ್ಯರ ಒಪ್ಪಿಗೆ ಇದ್ದು ಅಥವಾ ಇಲ್ಲದೆಯೋ ನಡೆಯುವ ಒಂದು ಅನಧಿಕೃತವಾದ ಹಿಂಸಾ ಪ್ರವೃತ್ತಿ. ಇಂದು ಜಗತ್ತಿನ ಎದುರು ತಲೆ ಎತ್ತಿ ನಿಂತಿರುವ ಅತೀ ದೊಡ್ಡ ಸಮಸ್ಯೆಯೇ ಭಯೋತ್ಪಾದನೆ. ಆದರೆ ದುರಂತವೇನೆಂದರೆ ಇದರ ನಿಗ್ರಹಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಅದು ಇನ್ನೂ ಮತ್ತೂ ಕಳೆ ಬೆಳೆದಂತೆ ದೈತ್ಯಾಕಾರವಾಗಿ ಬೆಳೆಯುತ್ತಿದೆ. ಎಷ್ಟೇ ಬೇಡವೆಂದು ದೂರವಿಟ್ಟರೂ ಅದು ಮತ್ತೆ ಮತ್ತೆ ಅಪ್ಪಳಿಸುತ್ತಿದೆ. ಭಯೋತ್ಪಾದನೆಯ ಇರುವಿಕೆ ಇಲ್ಲದ ಯಾವುದೊಂದು ದೇಶವೂ ಇಲ್ಲವೆನ್ನಬಹುದೇನೋ! ಇದೆಲ್ಲದರ ಕಾರಣ ಏನೇ ಇರಬಹುದು ಆದರೆ ಇದರ ನೇರ ಪರಿಣಾಮವಾಗುವುದು ಮಾತ್ರಾ ಅಮಾಯಕ ಜನಸಾಮಾನ್ಯರ ಮೇಲೆ.

ಭಯೋತ್ಪಾದನೆಯಲ್ಲಿ ವಿಮಾನ ಅಪಹರಣ, ಜೈವಿಕ ಭಯೋತ್ಪಾದನೆ, ಒತ್ತೆಸೆರೆ, ಸೈಬರ್ ಭಯೋತ್ಪಾದನೆ, ಕಾರ್ ಬಾಂಬಿಂಗ್, ಪರಮಾಣು ಭಯೋತ್ಪಾದನೆ, ಕಡಲ್ಗಳ್ಳತನ, ಆತ್ಮಾಹುತಿ ದಾಳಿ, ಮಾನವ ಬಾಂಬ್ ಇವೆಲ್ಲವೂ ಸೇರಿವೆ. ರಾಷ್ಟ್ರೀಯತವಾದ, ಅರಾಜಕತವಾದ, ಎಡಪಂಥೀಯ, ಬಲಪಂಥೀಯ, ಕೇಸರಿ ಭಯೋತ್ಪಾದನೆ ಮತ್ತು ಡ್ರಗ್ಸ್ ದಂಧೆ ಎಲ್ಲವೂ ಭಯೋತ್ಪಾದನೆಯ ವಿವಿಧ ರೂಪಗಳಾಗಿವೆ. ಭಯೋತ್ಪಾದನೆ ಎಂದರೆ ಅದು ಕೇವಲ ಧರ್ಮದ ವಿಚಾರಕ್ಕಷ್ಟೇ ಸಿಮಿತವಾಗಿಲ್ಲ, ಅದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿ ಪ್ರಸ್ತುತ ಇರುವ ಭಯೋತ್ಪಾದನೆಗೆ ಕೆಲವು ಧಾರ್ಮಿಕ ಪಂಗಡಗಳು ಮತ್ತು ನಕ್ಸಲ್ ಸಂಘಟನೆಗಳು ಇಂಬು ನೀಡುತ್ತಿವೆ.

ಉತ್ತರದ ಜಮ್ಮು – ಕಾಶ್ಮೀರ ಹಾಗೂ ಪೂರ್ವದಲ್ಲಿರುವ ರಾಜ್ಯಗಳು ಅತಿಯಾದ ಭಯೋತ್ಪಾದನೆಯ ವಿಷವ್ಯೂಹಕ್ಕೆ ಒಳಗಾದ ಭಾಗಗಳಾಗಿವೆ. ಜಮ್ಮು – ಕಾಶ್ಮೀರದಲ್ಲಿ ಇರುವ ದಂಗೆಗಳ ಕಾರಣಗಳು ಹಲವು ಹಾಗೂ ಮೀರಲಾಗದಂಥವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಅದಕ್ಕೆ ಅತಿ ಮುಖ್ಯವಾದ ಕಾರಣ ಪಾಕಿಸ್ತಾನದ ಐ.ಎಸ್.ಐ ಅದು ಭಾರತೀಯ ಯುವಕರನ್ನು ತನ್ನ ಮುಜಾಹಿದ್ದೀನ್ ಸಂಘಟನೆಗೆ ಸೇರಿಸಲು ತರಬೇತಿ ನೀಡುತ್ತಿದೆ. ಇದರ ಫಲವಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅಪಾರ ಸಾವು ನೋವು ಸಂಭವಿಸುತ್ತಿದೆ. ಇದಲ್ಲದೆ ಮಿಲಿಟರಿಯವರಿಂದ ಮುಗ್ಧ ಜನರು ಅನುಭವಿಸಿದ ಶೋಷಣೆಯು ಜಮ್ಮು – ಕಾಶ್ಮೀರದಲ್ಲಿನ ಅರಾಜಕತೆಯ ಕಾರಣಗಳಾಗಿವೆ. ಇದರ ಪಾತ್ರದಿಂದಾಗಿ ಕಾಶ್ಮೀರದ ಸ್ವಾತಂತ್ರ್ಯದ ಬಗೆಗಿನ ಬೆಂಬಲ ಮತ್ತು ಅದನ್ನು ಪಾಕಿಸ್ತಾನದ ಭಾಗವಾಗಿ ಮಾಡುವ ರಾಜಕೀಯ ಹುನ್ನಾರ, ಮುಜಾಹಿದ್ದೀನ್ ಪ್ರಭಾವದಿಂದಾಗಿ ಸಂಭವಿಸುವ ಧಾರ್ಮಿಕ ಸಂಘರ್ಷಗಳು ಇವೆಲ್ಲಾ ಕಾಶ್ಮೀರಿ ಜನರ ನಿದ್ದೆ ಕೆಡಿಸಿವೆ. 

ಭಾರತದ ಪಶ್ಚಿಮ ಭಾಗದ 7 ಸೋದರ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ, ಮಿಜೋರಂ, ಮತ್ತು ನಾಗಾಲ್ಯಾಂಡ್ ಎಷ್ಟೋ ವರ್ಷಗಳಿಂದ ಇಲ್ಲಿನ ಬುಡಕಟ್ಟು ಹಾಗೂ ಸರಕಾರದ ನಡುವಿನ ಸಂಘರ್ಷದಿಂದ ಬಸವಳಿದು ಹೋಗಿವೆ. ಇಲ್ಲಿ ನಡೆಯುವ ಘೋರ ಹಿಂಸಿಗಳಿಂದಾಗಿ ಅವುಗಳಿಗೆ ಅತಿ ಸೂಕ್ಷ್ಮ ಪ್ರದೇಶಗಳೆಂಬ ಹಣೆಪಟ್ಟಿಯನ್ನು ಹೊಂದಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ನಡೆದಿರುವ ಸಾವಿರಾರು ಹತ್ಯೆಗಳನ್ನು ನಾವು ಪತ್ರಿಕೆ ಹಗೂ ದೂರದರ್ಶನದಲ್ಲಿ ನೋಡಿದ್ದೇವಷ್ಟೆ, ಇದಕ್ಕೆ ಮುಖ್ಯ ಕಾರಣ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿರುವ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ, ನೆರೆ ರಾಷ್ಟ್ರಗಳ ಹಾವಳಿ ಅಥವ ಸಾರ್ವತ್ರಿಕ ಚುನಾವಣೆಯ ಸಂದರ್ಭ ಹೊರತುಪಡಿಸಿ ಈ ರಾಜ್ಯಗಳು ನಮ್ಮ ದೇಶದ ಭಾಗವೇ ಅಲ್ಲವೇನೋ ಎಂಬಂತೆ ವರ್ತಿಸುವುದು. ಅಷ್ಟು ಸಾಲದೆಂಬಂತೆ ಬಾಂಗ್ಲಾ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಯಾದ ಉಲ್ಫದ ಸಹಕಾರದಿಂದ ಈ ರಾಜ್ಯಗಳಲ್ಲಿ ದಂಗೆ ಎಬ್ಬಿಸುತ್ತಿರುವ ಅಕ್ರಮ ವಲಸಿಗ ಬಾಂಗ್ಲಾದೇಶಿಯರೂ ಕಾರಣ.

ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಭಯೋತ್ಪಾದನೆಯ ಪ್ರಭಾವ ಅಷ್ಟಾಗಿ ಕಾಣಬರುವುದಿಲ್ಲ. ಕರ್ನಾಟಕದಲ್ಲಿ ನಕ್ಸಲರ ಹೆಜ್ಜೆಯ ಗುರುತು ಕಂಡುಬಂದರೂ ಸಹ ರಾಜ್ಯ ಸರಕಾರವು ಅದನ್ನು ನಿಗ್ರಹಿಸುವಲ್ಲಿ ಬಹುಪಾಲು ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಹೊರತಾಗಿ ಬೇರೆ ಯಾವುದೇ ಅಂತಹ ಅಹಿತಕರ ಘಟನೆ ನಡೆದಿರುವ ಪ್ರಸಂಗ ಬೇರೆ ಇಲ್ಲ. ಶ್ರೀಲಂಕದ ಎಲ್.ಟಿ.ಟಿ.ಇ ಉಗ್ರರು ಪ್ರಮುಖವಾಗಿ ದಾಳಿಮಾಡಿದ ಪ್ರದೇಶ ತಮಿಳುನಾಡು ಆದರೆ ಅದರ ನಾಯಕರ ಹತ್ಯೆಯ ನಂತರ ಅದರ ಪ್ರಭಾವ ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಉಗ್ರರ ದಾಳಿಗೆ ಪದೇ ಪದೇ ಬಲಿಯಾಗುವ ಪ್ರದೇಶವೆಂದರೆ ಅದು ನಮ್ಮ ದೇಶದ ಪ್ರಮುಖ ವಾಣಿಜ್ಯ ನಗರಿಯಾದ ಮುಂಬಯಿ. 1993 ರ ಸರಣಿ ಬಾಂಬ್ ಸ್ಪೋಟದಿಂದ ಹಿಡಿದು ಇತ್ತೀಚಿನ ತಾಜ್ ಮಹಲ್ ಹೋಟೇಲಿನ ತನಕ ಪ್ರಮುಖ ದಾಳಿಗಳಿಗೆ ಪ್ರಮುಖ ಗುರಿ ಮುಂಬಯಿ ನಗರಿಯೇ.

ಭಯೋತ್ಪಾದನೆಗೆ ಎಷ್ಟೇ ಕಾರಣಗಳನ್ನು ಹುಡುಕುತ್ತಾ ಹೋದರೂ ಮುಖ್ಯವಾಗಿ ಮುಖ್ಯವಾಗಿ ಕಂಡು ಬರುವುದೇ ಧಾರ್ಮಿಕ ಭಯೋತ್ಪಾದನೆ. ಇದು ಇಡೀ ಪ್ರಪಂಚವನ್ನೇ ಆವರಿಸಿದರೂ ಇದರ ಪ್ರಭಾವ ಮತ್ತು ಪರಿಣಾಮ ಭಾರತದಲ್ಲಿ ಇತರೆಡೆಗಳಿಗಿಂತ ತುಸು ಜಾಸ್ತಿಯೇ ಎನ್ನಬಹುದು. ಕೆಲವು ಧರ್ಮಾಂಧರ ಧರ್ಮದ ಬಗೆಗಿನ ಕುರುಡು ವ್ಯಾಮೋಹವೇ ಕಾರಣವಾಗಿ ಇಡೀ ದೇಶಕ್ಕೆ ದೇಶವೇ ಭಯೋತ್ಪಾದನೆಗೆ ಸಿಕ್ಕಿ ನರಳುತ್ತಿದೆ. ಇತರೆ ದೇಶಗಳ ಬಗೆಗಿನ, ಅನ್ಯ ಧರ್ಮಗಳ ಬಗೆಗಿನ, ಅಸಹನೆ, ತಿರಸ್ಕಾರ ಮನೋಭಾವವೇ “ಜಿಹಾದ್” ಎಂಬ ಧರ್ಮವಲ್ಲದ ಧರ್ಮಯುದ್ಧದ ಹಾದಿ ಹಿಡಿದು ಅಮಾಯಕರನ್ನು ಕೊಲ್ಲುವುದರ ಜೊತೆಗೆ ಇತರೆ ಅಮಾಯಕರನ್ನು ಹಾದಿ ತಪ್ಪಿಸಿ ತಮಗೆ ಬೇಕಾದ ಹಾಗೆ ಸಿದ್ಧಗೊಳಿಸಿ ಇನ್ನಷ್ಟು ಮಂದಿಯನ್ನು ಕೊಲ್ಲುವಂತೆ ಪ್ರೇರೇಪಿಸುತ್ತದೆ. ತಮ್ಮ ಧರ್ಮವನ್ನೇ ಇತರರ ಮೇಲೂ ಹೇರಬೇಕೆಂಬ ಹುಚ್ಚು ಅಭಿಮಾನದಿಂದ ಅವರ ಧರ್ಮವನ್ನು ಉಳಿಸುವುದರ ಬದಲು ಅದರ ಮೂಲ ಮೌಲ್ಯಗಳಿಗೆ ಚ್ಯುತಿ ತರುತ್ತಿದ್ದಾರೆ. ಪ್ರತಿಯೊಂದು ಧರ್ಮದ ಮೂಲವೂ ಶಾಂತಿಯ ಪ್ರತಿಪಾದನೆ ಎಂಬುದನ್ನು ಮರೆತು ಹಿಂಸಾ ಮಾರ್ಗ ಹಿಡಿದು ವಿಕೃತ ಮನಸ್ಕರಾಗಿ ಮಿಥ್ಯ ಸಮರದ ಮೂಲಕ ಕಿರುಕುಳ ನೀಡುವ ಇದು ಹೇಡಿತನವಲ್ಲದೆ ಮತ್ತೇನೂ ಅಲ್ಲ. ಧಾರ್ಮಿಕ ಭಯೋತ್ಪಾದನೆ ಎಂದರೆ ಕೇವಲ ಇಸ್ಲಾಂ ಧರ್ಮಾಂಧರಿಂದಾದ ಭಯೋತ್ಪಾದನೆ ಮಾತ್ರವಲ್ಲ, ಅದರಲ್ಲಿ ಕೇಸರಿ ಭಯೋತ್ಪಾದನೆಯೂ ಸೇರಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆ ಎಂಬ ಮನೋಸ್ಥಿತಿಯೇ ಇದಕ್ಕೆ ಮುಖ್ಯ ಕಾರಣ. ಅನ್ಯ ಧರ್ಮದ ಮೇಲಿರುವ ಅಸಹಿಷ್ಣುತೆ, ಭಾರತೀಯ ಸಂಸ್ಕೃತಿಯ ಕುರಿತ ಅಜ್ಞಾನ ಎಲ್ಲಾವೂ ಸೇರಿ ಒಂದು ಧರ್ಮವು ಇನ್ನೊಂದು ಧರ್ಮವನ್ನು ಕಂಡರಾಗದೆಂಬಂತ ಪತಿಸ್ಥಿತಿಯನ್ನು ನಾವಿಂದು ತಲುಪಿದ್ದೇವೆ.

ನಮ್ಮ ದೇಶದ ಮಣ್ಣಿನಲ್ಲಿಯೇ ಹುಟ್ಟಿದ ಇನ್ನೊಂದು ರೀತಿಯ ಭಯೋತ್ಪಾದನೆ ಎಂದರೆ ಅದು ನಕ್ಸಲಿಸಂ ಸಮಾನತೆಗಾಗಿ ಹೋರಾಟ ಮಾಡುವ ಸಮಾಜವು ವಿಕೃತಗೊಂಡು ಹಿಂಸಾ ವಾದಕ್ಕೆ ಇಳಿದ ರೀತಿ ನಿಜವಾಗಿಯೂ ನಿರಾಶಾದಾಯಕ. ಜನರ ಒಳಿತಿಗಾಗಿ ಹುಟ್ಟಿದ ಗುಂಪೆÇಂದು ಅಂತಹ ಸಮಾನ ಮನಸ್ಕರ ಸೇರುವಿಕೆಯಿಂದ ಬಲಿಷ್ಠಗೊಂಡು ಕ್ರಮೇಣ ಹಾದಿ ತಪ್ಪಿ ಹಿಂಸಾ ಪ್ರವೃತ್ತಿ ಹಿಡಿದಿರುವುದು ನಿಜಕ್ಕೂ ದುರಾದೃಷ್ಟಕರ. ಇತ್ತ ಜನಪರವೂ ಅಲ್ಲದೆ ಅತ್ತ ಸಿದ್ಧಾಂತಪರವೂ ಅಲ್ಲದೆ ಸಿಕ್ಕ ಸಿಕ್ಕವರನ್ನು ಹಿಂಸಿಸುತ್ತಾ ತಮ್ಮ ನೈಜ ಧ್ಯೇಯವನ್ನೇ ಕಳೆದುಕೊಂಡು ಭಯೋತ್ಪಾದಕರು ಎಂಬ ಹಣೆಪಟ್ಟಿಯೊಂದಿಗೆ ಆರಕ್ಷಕರ ಕಣ್ಣು ತಪ್ಪಿಸಿ ದಟ್ಟ ಅರಣ್ಯಗಳಲ್ಲಿ ಓಡಾಡುತ್ತಾ ಜನಪರ ಎಂಬ ಭ್ರಮೆಯೊಂದಿಗೆ ಜನರಿಗೆ ಇನ್ನಿಲ್ಲದ ಹಿಂಸೆ ನೀಡುವುದೇ ನಕ್ಸಲ್ ಭಯೋತ್ಪಾದನೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದ ಮೇಲೆಯೂ ನಾವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಬಹು ಮುಖ್ಯ ಸಂಗತಿ ಎಂದರೆ ಧಾರ್ಮಿಕ, ಸಾಮಾಜಿಕ ಕಾರಣ ಏನೇ ಇರಲಿ, ಮುಖ್ಯವಾದ ಮತ್ತು ಅತಿ ಸೂಕ್ಷ್ಮವಾದ ಕಾರಣವೇನೆಂದರೆ ಅದು ಬಡತನ ಹಾಗೂ ಅನಕ್ಷರತೆ. ಬಡವನು ಹಣದ ಆಸೆಗಾಗಿ ಇಂತಹ ತಪ್ಪು ಹೆಜ್ಜೆ ಇಟ್ಟರೆ ಅನಕ್ಷರಸ್ತನು ತನಗೆ ಅರಿವಿಲ್ಲದೆ ಇಂತಹ ಜಾಲದಲ್ಲಿ ಸಿಲುಕುತ್ತಾನೆ. ಹಣದ ಆಸೆ ತೋರಿಸುವವನು ಬಡವನ ಇಡೀ ಸಂಸಾರವನ್ನು ಕಷ್ಟ ಬಾರದ ಹಾಗೆ ನೋಡಿಕೊಳ್ಳುವೆ ಎಂದಾಗ ಸಹಜವಾಗಿಯೇ ನಿಷ್ಠೆಯಿಂದ ಅವನು ಒಪ್ಪಿಸಿದ ಕೆಲಸ ಸರಿಯೋ ತಪೆÇ್ಪೀ ಎಂಬ ವಿವೇಚನೆ ಇಲ್ಲದೆ ಅದನ್ನು ಮಾಡಲು ಸಿದ್ಧನಾಗುತ್ತಾನೆ. ಒಬ್ಬ ವಿದ್ಯೆ ಇಲ್ಲದವನನ್ನು ಪಳಗಿಸುವುದು ಇನ್ನೂ ಸುಲಭ. ಪ್ರಪಂಚದ ಜ್ಞಾನವಿಲ್ಲದ ಒಬ್ಬ ವ್ಯಕ್ತಿಯನ್ನು ತನ್ನೆಡೆಗೆ ಸೆಳೆಯುವುದು ಒಬ್ಬ ಬುದ್ಧಿವಂತನಿಗೆ ಕಣ್ಣು ಮಿಟುಕಿಸಿದಷ್ಟೇ ಸಲೀಸು. ಅನಕ್ಷರತೆ, ಬಡತನ, ಹಾಗೂ ನಿರುದ್ಯೋಗಗಳು ಯಾವ ರೀತಿ ದೇಶದ ಸುರಕ್ಷತೆಗೆ ಇಂದಿನ ಕಾಲದಲ್ಲಿ ಮಾರಕ ಎಂದರೆ ಈ ಎಲ್ಲಾ ಅನಿಷ್ಟಗಳು ನಿದ್ರಿಸುತ್ತಿರುವ ಟೈಂ ಬಾಂಬ್‍ಗಳಂತಹವು. ನಿರುದ್ಯೋಗಿ, ಅನಕ್ಷರಸ್ತ, ಹಾಗೂ ಬಡವನಿಗೆ ಒಂದು ಹೊತ್ತಿನ ಊಟ, ಅವನ ಕುಟುಂಬಕ್ಕೊಂದಿಷ್ಟು ಆರ್ಥಿಕ ಭದ್ರತೆ ದೊರೆಯುವುದೆಂದರೆ ಆತ ಎಂತಹ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ಧನಿರುತ್ತಾನೆ. ಪ್ರಪಂಚದಾದ್ಯಂತ ಅಕ್ಟೋಪಸ್‍ಗಳಂತೆ ತಮ್ಮ ಕಬಂಧಬಾಹುಗಳನ್ನು ಚಾಚಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ಈ ರೀತಿಯ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡುತ್ತವೆ. ಇಂತಹ ಅತೃಪ್ತ ಸಮುದಾಯಕ್ಕೆ ಕೈಗೊಂದಿಷ್ಟು ಕಾಸು ಕೊಟ್ಟು ಅವರ ಪಾಲಿಗೆ ದೇವರಂತೆ ಕಂಡು ಅವರನ್ನು ತಮ್ಮ ವಿಕೃತ ಕೃತ್ಯಗಳಿಗೆ ಬಳಸುವ ಕೈಗೊಂಬೆಗಳನ್ನಗಿಸುತ್ತವೆ.

ವಿಪರ್ಯಾಸವೆಂದರೆ ಕೇವಲ ಈ ರೀತಿಯ ಅನಕ್ಷರಸ್ತ ನಿರುದ್ಯೋಗಿ ಬಡ ಸಮುದಾಯ ಮಾತ್ರವಲ್ಲ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಲಕ್ಷಾಂತರ ಸಂಬಳತರುವ ಉದ್ಯೋಗದಲ್ಲಿರುವವರೂ ಕೂಡಾ ಈ ವಿಷಜಾಲಕ್ಕೆ ಬಲಿ ಬೀಳುತ್ತಾರೆ. ಇಲ್ಲಿ ಈ ರೀತಿಯ ಗುಂಪನ್ನು ಆಕರ್ಷಿಸಲು ಬಳಸುವ ಏಕಮೇವ ಆಮಿಷವೆಂದರೆ ಅದು ಧರ್ಮದ ಅಫೀಮು. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಇರಾಕ್ ದೇಶದ ನಂತರ ಸಾಮೂಹಿಕ ಹತ್ಯೆಗಳಿಂದಾಗಿ ಎರಡನೇ ಸ್ಥಾನದಲ್ಲಿರುವ ದೇಶ ಭಾರತ! ಈ ರೀತಿಯ ಭಯೋತ್ಪಾದನೆಯ ನೇರ ಪರಿಣಾಮವಾಗುವುದು ದೇಶದ ಎಲ್ಲಾ ವರ್ಗದ ನಾಗರಿಕರ ಮೇಲೆ. ಇದರಿಂದಾಗಿ ಅವರು ಯಾವಾಗಲೂ ತಮ್ಮ ಜೀವಕ್ಕೆ ಎಂದು ಏನಾಗುವುದೋ ಎಂಬ ಆತಂಕದಿಂದಲೇ ಜೀವಿಸಬೇಕಾಗುತ್ತದೆ. ಇದರ ದೀರ್ಘಾವದಿ ಪರಿಣಾಮವು ದೇಶದ ಆರ್ಥಿಕತೆ. ವಾಣಿಜ್ಯ – ವ್ಯವಹಾರ ಹಾಗೂ ಮುಖ್ಯವಾಗಿ ಪ್ರವಾಸೋದ್ಯಮದ ಮೇಲಾಗುತ್ತದೆ. ನಾವು ಹಲವಾರು ಸಂದರ್ಭಗಳಲ್ಲಿ ಕೇಳಿರಬಹುದು ಅಥವಾ ಓದಿರಬಹುದು ಅಮೇರಿಕ ಇಂಗ್ಲೆಂಡ್‍ಗಳಂತಹ ದೇಶಗಳು ತಮ್ಮ ಪ್ರಜೆಗಳಿಗೆ ಕೆಲವು ದೇಶಕ್ಕೆ ಭೇಟಿ ನೀಡುವುದರ ಬಗ್ಗೆ ಎಚ್ಚರಿಸುತ್ತಿರುತ್ತದೆ. ಇದಕ್ಕೆ ಕಾರಣ ಅವರಿಗೆ ಅವರ ಪ್ರಜೆಗಳ ರಕ್ಷಣೆಯ ಬಗ್ಗೆ ಇರುವ ಚಿಂತೆ ಇವೆಲ್ಲದರ ಪರಿಣಾಮವಾಗಿ ಆ ದೇಶದ ಪ್ರವಾಸೋದ್ಯಮದಿಂದ ಹಿಡಿದು ಆರ್ಥಿಕ, ವ್ಯಾಪಾರ ವಹಿವಾಟು ಸೇರಿ ನೆರೆ ದೇಶಗಳೊಂದಿಗಿನ ಸಂಭಂದಕ್ಕೂ ಹಾನಿಯುಂಟಾಗುತ್ತದೆ.

ಈಗ ಎಲ್ಲರಲ್ಲಿ ಮೂಡುವ ಪ್ರಶ್ನೆಯೆಂದರೆ ಭಯೋತ್ಪಾದನೆಯ ಗುರಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಭಯೋತ್ಪಾದನೆಯನ್ನೇ ನಿಗ್ರಹಿಸುವುದು ಹೇಗೆ? ಭಯೋತ್ಪಾದನೆಯನ್ನು ಎಂದೂ ಭಯೋತ್ಪಾದನೆಯಿಂದ ನಾಶ ಮಾಡಲು ಸಾಧ್ಯವಿಲ್ಲ. ಕಣ್ಣಿಗೆ ಪ್ರತಿಯಾಗಿ ಕಣ್ಣು ಎಂಬ ಹಮುರಾಬ್ಬಿಯ ತತ್ವವನ್ನು ಪಾಲಿಸಿದರೆ ಇಡೀ ಲೋಕವೇ ಬೆಂಕಿಗೆ ಆಹುತಿಯಾಗುತ್ತದೆ. ಏಕೆಂದರೆ ಭಯೋತ್ಪಾದನೆ ಬಡವರ ಯುದ್ಧವಾದರೆ, ಯುದ್ಧವು ಉಳ್ಳವರ ಭಯೋತ್ಪಾದನೆಯಾಗಿದೆ. ಇದರಿಂದ ನಾಶವಾಗುವುದು ಮುಗ್ಧರು ಮಾತ್ರ. ಇಂತಹ ಉಗ್ರರನ್ನು ಕೊಲ್ಲುವುದರಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ. ಏಕೆಂದರೆ ಅವರು ವಿವಿಧ ಕಾರಣಗಳಿಂದ ಸಾವಿಗೆ ಸಿದ್ಧರಾಗಿಯೇ ಬಂದಿರುತ್ತಾರೆ. ಯಾವ ಕಡೆಯೇ ಸಾವು ನೋವಾದರೂ ಅದು ಸಾಮಾನ್ಯನ ಧೃತಿಗೆಡಿಸುತ್ತದೆಯೇ ವಿನಃ ಭಯೋತ್ಪಾದಕರದಲ್ಲ. ಒಬ್ಬ ಉಗ್ರ ಸತ್ತರೆ ಅಂತಹ ಹತ್ತು ಮಂದಿ ಕ್ಷಣಾರ್ಧದಲ್ಲಿ ಹುಟ್ಟಿ ಬರುತ್ತಾರೆ. ಇವೆಲ್ಲವನ್ನು ಗಮನಿಸಿದರೆ ನಮ್ಮ ಮೊದಲ ಆದ್ಯತೆಯು ಅಪರಾಧಿಯನ್ನು ಕೊಲ್ಲುವುದಕ್ಕಿಂತ ಅಪರಾಧವನ್ನು ಕೊಲ್ಲುವುದಾಗಬೇಕು. ನೊಯಮ್ ಚೋಮ್ಸ್ ಹೇಳುವ ಪ್ರಕಾರ ಇದನ್ನು ತಡೆಯುವ ಸುಲಭ ವಿಧಾನವೆಂದರೆ ಇದರಲ್ಲಿ ಭಾಗವಹಿಸದಿರುವುದು ನಿಜವಾಗಿಯೂ ಮಾಡಬೇಕಾದದ್ದು ಒಂದು ಶಾಂತಿಯುತ ಪ್ರತಿಭಟನೆ. ಭಯೋತ್ಪಾದನೆಯ ಕಡೆಗೆ ಸೆಳೆಯಲ್ಪಟ್ಟ ಯುವಕರನ್ನು ಇದರ ಕಡೆಗೆ ವಿಮುಖರನ್ನಾಗಿಸುವ ಪ್ರಯತ್ನಗಳು ಸರಕಾರದ ಕಡೆಯಿಂದ ಆಗಬೇಕು. ತಮ್ಮ ಇಡೀ ಸಮಯ ಹಾಗೂ ಹಣವನ್ನು ಇಂತಹ ಉಗ್ರ ಸಂಘಟನೆಗಳ ನಾಶಕ್ಕಾಗಿಯೇ ವ್ಯಯಿಸುವುದರ ಬದಲು ಇದರ ಮೂಲವನ್ನೇ ನಿಗ್ರಹಿಸುವಂತಹ ಪ್ರಚಾರ ಕಾರ್ಯಗಳನ್ನು ಹೆಚ್ಚುಗೊಳಿಸಬೇಕು ಏಕೆಂದರೆ “ಉಪಶಮನಕ್ಕಿಂತ ಪ್ರತಿಬಂಧವೇ ಲೇಸು” ಸರಕಾರಕ್ಕೆ ಈ ನಿಟ್ಟಿನಲ್ಲಿ ಸಹಕರಿಸುವವರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು. ಇದು ಇನ್ನಷ್ಟು ಮಂದಿಯನ್ನು ಪ್ರೇರೇಪಿಸುತ್ತದೆ. ಕಡೆಯದಾಗಿ ಹಗೂ ಮುಖ್ಯವಾದ ಸಂಗತಿ ಎಂದರೆ ಪ್ರತಿಯೊಬ್ಬನ ಆದ್ಯ ಕರ್ತವ್ಯವೂ ಆಗಿರುವುದು ತನ್ನ ಆತ್ಮ ಸಾಕ್ಷಿ ಹೇಳಿದಂತೆ ನಡೆದುಕೊಂಡು ಸರಿ ತಪ್ಪುಗಳ ವಿಮರ್ಶೆ ಮಾಡುವುದು ಇದರಿಂದಾಗಿ ಇಡೀ ಸಮಾಜವು ಒಟ್ಟಾಗಿ ಈ ಭಯೋತ್ಪಾದನಾ ದೈತ್ಯವನ್ನು ದಮನಿಸಬಹುದು.

ಧಾರ್ಮಿಕ ಭಯೋತ್ಪಾದನಾ ಸಂಘಟನೆಗಳು ಪರಲೋಕದ ಬಗೆಗಿನ ಇಲ್ಲ ಸಲ್ಲದ ವೈಭೋಗಗಳನ್ನು ವೈಭವೀಕರಿಸಿ ಮನಸ್ಸನ್ನೇ ವಶೀಕರಿಸಿ ಸುಶಿಕ್ಷಿತ ಯುವ ಜನಾಂಗವನ್ನು ಅಡ್ಡದಾರಿಗೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೊಟ್ಟೆ ಪಾಡಿಗೆ ಭಯೋತ್ಪಾದಕರೆನಿಸಿಕೊಳ್ಳುವ ಅಶಿಕ್ಷಿತ ಭಯೋತ್ಪಾದಕರಿಗಿಂತ ಈ ರೀತಿಯ ಸುಶಿಕ್ಷಿತ ಭಯೋತ್ಪಾದಕರು ಹೆಚ್ಚು ಅಪಾಯಕಾರಿಗಳು. ಆಧುನಿಕ ಜಗತ್ತಿಗೆ ಅನಿವಾರ್ಯವೆನಿಸಿದ ಮುಂದುವರೆದ ತಂತ್ರಜ್ಞಾನವು ಈ ವರ್ಗದ ಕೈಯಲ್ಲಿರುವ ಮಾರಕ ಅಸ್ತ್ರವಾಗಿದೆ. ಇವುಗಳ ನೆರವಿನಿಂದಲೇ ಈ ಮಂದಿ ನಾಗರಿಕ ರಕ್ಷಣಾ ವ್ಯವಸ್ತೆಗೆ ಸಡ್ಡುಹೊಡೆಯುತ್ತಾರೆ. ತಮ್ಮದೇ ದೇಶದ ಸವಲತ್ತುಗಳನ್ನು ಪಡೆದುಕೊಂಡು ಶಿಕ್ಷಿತರಾಗಿ ಆ ಶಿಕ್ಷಣವನ್ನು ಅದೇ ದೇಶದ ವಿನಾಶಕ್ಕಾಗಿ ಬಳಸುವುದು ಅತ್ಯಂತ ಹೇಯ ದುರಂತ ಮಾತ್ರವಲ್ಲ, ಎದೆಹಾಲುಣಿಸಿ ಬೆಳೆಸಿದ ತಾಯಿಯ ಎದೆಗೇ ಚಾಕು ಹಾಕುವ ನೀಚ ಕೃತ್ಯ.

ಆದರೆ ಭಯೋತ್ಪಾದನೆಯ ಕಪ್ಪು ಮೋಡದ ನಡುವೆಯೂ ನಮ್ಮ ಭಾರತದಂತಹ ದೇಶಗಳಿಗೆ ಬೆಳ್ಳಿ ರೇಖೆಗಳಂತೆ ಗೋಚರಿಸುತ್ತಿರುವುದು ಸಾವಿರಾರು ವರ್ಷಗಳಿಂದ ನಾವು ಪಾಲಿಸಿಕೊಂಡು ಬರುತ್ತಿರುವ “ವಿವಿಧತೆಯಲ್ಲಿ ಏಕತೆ” ಎಂಬ ತಾರಕ ಮಂತ್ರ. ಭಾರತದಂತಹ ದೇಶದಲ್ಲಿ ವಾಸಿಸುತ್ತಿರುವ ವಿವಿಧ ಜಾತಿ, ಮತ, ಪಂಥಗಳ ಕೋಟ್ಯಾಂತರ ಮಂದಿಯ ಹೃದಯದಲ್ಲಿ ಅಂತರ ಗಂಗೆಯಂತೆ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಭಾರತೀಯ ಸಂಸ್ಕೃತಿ, ಸಾಮರಸ್ಯಗಳ ಜೀವನದಿ. ಇಂದು ಕೂಡಾ ಭಾರತದಲ್ಲಿ ಮಹಮ್ಮದನ ಮನೆಯ ಮಗು ಅನಾರೋಗ್ಯಕ್ಕೀಡಾದರೆ ಪಕ್ಕದ ಮನೆಯ ರಾಮಣ್ಣ ತನ್ನ ಕಾರಿನಲ್ಲಿ ಆಸ್ಪತ್ರೆಗೊಯ್ಯುತ್ತಾನೆ. ಯಾರೂ ಇಲ್ಲದ ರಾಮಣ್ಣನ ಮನೆಯ ದನ ಕರುಗಳಿಗೆ ಲೂಯಿಸ್ ಡಿ`ಸೋಜಾ ಹುಲ್ಲು ನೀರಿತ್ತು ಸಾಕುತ್ತಾನೆ. ವೆಂಕಪ್ಪನ ಹೆಂಡತಿ ಕಮಲಳಿಗೆ ಹೆರಿಗೆ ಕಷ್ಟವಾದರೆ ಊರಿನ ಹಿರಿಯಜ್ಜಿ ಬೀಪಾತುಮ್ಮ ಸುಸೂತ್ರ ಹೆರಿಗೆ ಮಾಡಿಸುತ್ತಾರೆ. ಇದು ನಮ್ಮ ಸಂಸ್ಕೃತಿ, ಇದು ನಮ್ಮ ಭಾರತೀಯ ಸಮಾಜದ ರೀತಿ ನೀತಿ. ಇಂತಹ ಸುಭದ್ರ ಸಾಮರಸ್ಯವನ್ನು ಹೊಂದಿದ ನಮ್ಮ ದೇಶದಲ್ಲಿ ಎಂದೆಂದಿಗೂ ದ್ರೋಹಿಗಳ, ಪಿತೂರಿಗಾರರ ಬೇಳೆ ಬೇಯದು. ಯಾವುದೇ ರೀತಿಯ ಆಟ ನಡೆಯದು ಪ್ರಕರ ಸೂರ್ಯನಿಗೂ ಕೂಡಾ ಒಮ್ಮೊಮ್ಮೆ ಕರಿಮೋಡ ಮುಸುಕಿರಬಹುದು ಆದರೆ ಎಷ್ಟಿದ್ದರೂ ಅದು ತಾತ್ಕಾಲಿಕ, ಮೋಡ ಸರಿಯಲೇಬೇಕು, ಬೆಳಕು ಬರಲೇಬೇಕು, ಸೂರ್ಯ ಪ್ರಕಾಶಿಸಲೇಬೇಕು. ಇದು ಜಗದ ನಿಯಮ, ಭಾರತೀಯ ಸಂಸ್ಕೃತಿಯ ವಿಕ್ರಮ.

ಭಾನುವಾರ, ಮಾರ್ಚ್ 29, 2015

ನನ್ನ ಕನಸಿನ ಭಾರತ



ಸುಹಾನ ಫಾತಿಮ     ಹೇಂತಾರ್
ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #3#


ಪ್ರಸಕ್ತ ನನ್ನ ದೇಶದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಕಾರಣ ನಾನು ಜನ್ಮ ಕಳೆದಂತಹ ಭೂಮಿಯು ಇದಾಗಿದೆ. ಜನನೀ ಜನ್ಮ ಭೂಮಿ ಸ್ವರ್ಗದಪಿಗರೀಯಸಿ ಎಂಬುದೊಂದು ಶ್ಲೋಕವನ್ನು ನಾವು ರಾಮಾಯಣದಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಜನ್ಮ ಭೂಮಿಯನ್ನು ಪ್ರೀತಿಸದವನು ಸತ್ಯ ವಿಶ್ವಾಸಿಯಲ್ಲವೆಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ನವರ ವರನುಡಿಯಾಗಿದೆ.

ಆದರೆ ನನ್ನ ಭಾರತವು ಪರಕೀಯರ ಆಡಳಿತಕ್ಕೊಳಪಟ್ಟು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ದೇಶ ಪ್ರೇಮಿಗಳು ತನ್ನ ತನು, ಮನ, ಧನ, ಪ್ರಾಣಗಳನ್ನು ಅರ್ಪಿಸಿದ ಚರಿತ್ರೆಯು ಕಾಲಚಕ್ರದಲ್ಲಿ ಅಡಗಿದೆ. ಆದರೆ ಪ್ರಸಕ್ತ ರಾಷ್ಟ್ರವನ್ನು ಪರಿಶೀಲಿಸಿದರೆ, ತ್ಯಾಗವು ಮರೆಯಾಗಿ ಭೋಗದ ಜೀವನ ಶೈಲಿಯನ್ನು ಕಾಣಬಹುದಾಗಿದೆ. ಅಂದು ದೇಶಕ್ಕೆ ಎಲ್ಲವನ್ನೂ ಕೊಟ್ಟವರು ಹಲವರು. ಇಂದು ದೇಶದ ಸಂಪತ್ತನ್ನೇ ಲೂಟಿ ಮಾಡುವವರು ಸಾವಿರಾರು ಜನರು.

ಭಾರತ ದೇಶವು ಜಗತ್ತಿನಲ್ಲಿಯೇ ಶೋಭಿತವಾಗಬೇಕು. ಜಗತ್ತಿನ ಎಲ್ಲಾ ಜನರು ನನ್ನ ಭಾರತವನ್ನೂ ಕಂಡು ಕಲಿಯಬೇಕು. ಯಾಕೆಂದರೆ ಪುರಾತನ ಕಾಲದಲ್ಲೇ ಭಾರತವು ಜ್ಞಾನ ಭೂಮಿಯಾಗಿತ್ತು. ಕಗೋಲ ಶಾಸ್ತ್ರ. ಶೂನ್ಯದ ಬಳಕೆ, ಆಯುರ್ವೇದ ಚಿಕಿತ್ಸಾ ಕ್ರಮ, ಶಿಲ್ಪಕಲೆ, ಜಗತ್ತಿಗೆ ನಾವು ಕೊಟ್ಟಿದ್ದೇವೆ.

ಭಾರತೀಯ ಜನರಿಗೆ ಆರೋಗ್ಯವು ದೊರಕುವಂತಾಗಬೇಕು. ಸ್ವಚ್ಚ ಆಹಾರದ ತಯಾರಿಕೆಯು ನಮ್ಮದಾಗಿದ್ದು ಹೃದಯ ಕಾಯಿಲೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮೊದಲಾದ ರೋಗಗಳಿಂದ ಮುಕ್ತರಾಗುವಂತೆ ನನ್ನ ಕನಸಾಗಿದೆ.
ಸ್ತ್ರೀಯರ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಪಡದಂತೆ, ಜಾಗೃತರಾಗಿರಬೇಕು. ಪುರುಷ ವರ್ಗವು ಸಚ್ಚಾರಿತ ಹಾಗೂ ನೀತಿಯುತವಾಗಿ ಬದುಕುವ ಕಲೆ ಹಾಗೂ ಸ್ತ್ರೀ ಗೌರವದ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಚಾರದ ಮೂಲೋತ್ಪಾದನೆಯಾಗಬೇಕು. ಮಧ್ಯ ರಾತ್ರಿಯಲ್ಲಿ ಮಾಲಿನಿಯರು ಯಾವುದೇ ಮಾರ್ಗದಲ್ಲಿ ಧೈರ್ಯವಾಗಿ ನಡೆಯುವಂತಹ ಸಮಯವೇ ಸಂಪೂರ್ಣ ಸ್ವಾತಂತ್ರ್ಯದ ಅನುಭವಾಗಿದೆ. ಖಲೀಪ ಉಮರರ ರಾಜ್ಯಾಡಳಿತ ಕಾಲದಲ್ಲಿ ಸ್ತೀಯರು ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೇ, ನಡೆದಾಡುತ್ತಿದ್ದಾರೆಂದು ಚರಿತ್ರೆಯಾಗಿದೆ. ಇದೇ ಕನಸನ್ನು ಮಾಹಾತ್ಮಾಜಿಯವರು ಕಂಡಿದ್ದರು.

ಯುವ ಶಕ್ತಿಯು ಮಾದಕ ದ್ರವ್ಯಗಳ ಗುಲಾಮರಾಗಿ, ತನ್ನ ಜೀವನವನ್ನು ದುಃಖಮಯಗೊಳಿಸುತ್ತಿದ್ದಾರೆ. ಆದುದರಿಂದ ಎಲ್ಲಾ ಮಾದಕ ದ್ರವ್ಯ ಹಾಗೂ ಮದ್ಯಪಾನ ಮುಕ್ತವಾದ ಭಾರತವು ನನ್ನ ಕನಸಿನದ್ದಾಗಿದೆ.ಇನ್ನೊಂದು ರಾಷ್ಟ್ರೀಯ ಸಮಸ್ಯೆಯೆಂದರೆ ಕೋಮುವಾದ ಜಾತಿ ಧರ್ಮಗಳಲ್ಲಿ ಪರಸ್ಪರ ದ್ವೇಷ, ಅಸೂಯೆ, ಹಿಂದೂ ಮುಸ್ಲಿಮರೆಂಬ ಬೇಧ ಭಾವದ ಕಲಹ ಎಲ್ಲಯೂ ಅಳಿಯಬೇಕು. ಎಲ್ಲ ಭಾರತೀಯರೂ ಏಕೋದರ ಸಹೋದರರಂತೆ ವರ್ತಿಸಿ, ರಾಷ್ಟ್ರೀಯ ಕಾರ್ಯದಲ್ಲಿ ಮಗ್ನರಾಗಬೇಕು.

ಭಾರತೀಯರಿಗೆ ಸರಿಯಾದ ವಿದ್ಯಾಭ್ಯಾಸವು ದೊರಕುವಂತೆ ಆಗಬೇಕು. ಆರ್ಥಿಕ ತೊಡಕಿನಿಂದಾಗಿ ಯಾವುದೇ ಭಾರತೀಯರಿಗೆ ವಿದ್ಯಾವಂಚನೆಯಾಗಬಾರದು ಹಾಗೂ ಜನ ಶಕ್ತಿಯನ್ನೂ ದೇಶದ ಸೇವೆಗಾಗಿ ಉಪಯೋಗಿಸಿಕೊಳ್ಳುವಂತಾಗಬೇಕು. ವೈಜ್ಞಾನಿಕ ರಂಗದಲ್ಲಿ ದೇಶವು ಪ್ರಗತಿಯನ್ನು ಕಾಣಬೇಕು. ಹಾಗೂ ಯುವ ವಿಜ್ಞಾನಿಗಳನ್ನು ತಯಾರು ಮಾಡುವಂತೆ ಆದಷ್ಟು ಪ್ರೋತ್ಸಾಹಿಸಬೇಕು. ಭಾರತೀಯರಲ್ಲಿ ಪರಸ್ಪರ ಐಕ್ಯಮತ್ಯ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸಿ, ಜಗತ್ತಿನಲ್ಲಿ ಶ್ರೇಷ್ಠ ಭಾರತದ ಕನಸು ನನ್ನದಾಗಿದೆ.


 ಕವನ
ಪ್ರಸಕ್ತ ನನ್ನ ಕನಸಿನ ಭಾರತ|
ನೀನು ಜಗದ ಮುಕುಟು ಮಣಿ ಎನ್ನುತ|
ನಿನ್ನ ಒಡಲಲ್ಲಿ ಬೆಳೆದು ಬಂದ ಜ್ಞಾನ|
ಜಗಕೆ ನೀನೆಂದೂ ಸತ್ಯವೆಂಬ ಪ್ರಾಣ|
ಸಕಲ ಜನರೆಲ್ಲಾ ಒಂದಾಗಿ ಕಳೆದು|
ದ್ವೇಷ ರೋಶ ಭಾವನೆಯು ತೊರೆದು|
ಸೋದರತೆಯ ಚಿಂತನೆಯು ಮೂಡಿಬರಲಿ|
ಜಾತಿ, ಕೋಮು ಭಾವನೆಯು ಅಳಿದು ಹೋಗಲಿ|
ಎಲ್ಲ ಯುವ ಜನತೆಗೆ ಸರಿಯಾದ ಉದ್ಯೋಗ|
ಭರತ ಭೂಮಿಯಲಿ ಇರಲಿ ದೇಶಕ್ಕಾಗಿ ತ್ಯಾಗ|
ಅಳಿದು ಹೋಗಲಿ ಸ್ತ್ರೀ ಮೇಲಾಗುವ ಅತ್ಯಾಚಾರ|
ಬೆಳೆದು ಬರಲಿ ಮಹಿಳಾ ಗೌರವ ಆದರ|
ಕಳ್ಳತನ ಕೊಲೆ ಸುಲಿಗೆಗಳು ಅಳಿದು|
ಸತ್ಯಾ ಸಚ್ಚಾರಿತ್ರ್ಯ ನೀತಿಯೆಲ್ಲಾ ತುಂಬಿ ಬೆಳೆದು|
ಸತ್ವಯುತ ಅನ್ನವನು ನಾವೆಲ್ಲಾ ಮಾಡಿ|
ಭಾರತೀಯ ಜನಕೆ ಸ್ವಚ್ಚಾ ಆಹಾರವ ನೀಡಿ|
ರೋಗ ಮುಕ್ತ ರಾಷ್ಟ್ರ ನಮ್ಮದಾಗಬೇಕು|
ಮದ್ಯ ದಿನಗಳು ಜನರಿಗೆ ಬರಲೇಬೇಕು|
ವಿಜ್ಞಾನ ಕಲೆಗಳು ನಮ್ಮ ಬದುಕಿನ ಅಂಗ|
ಭಾರತೀಯರೆಲ್ಲಿ ಒಂದಾಗಿ ಬದುಕುವ ರಂಗ|
ಸರ್ವೇಜನಾಃ ಸುಖಿನೋ ಭವಂತು ಎಂದು|
ವಿಶ್ವಾಕುಟುಂಬದ ಕನಸು ಮೂಡಲಿ ಇಂದು


ಗುರುವಾರ, ಫೆಬ್ರವರಿ 12, 2015

ಭವಿಷ್ಯದಲ್ಲಿ ಭಾರತ




ಭಾರತವು ಬಹು ಸಂಕೀರ್ಣತೆಯ ಮತ್ತು ಬಹು ಸಮಾಜದ ಗೊಂದಲಮಯ ದೇಶವಾಗಿದೆ. ಹಾಗೆಯೇ ವಿಶ್ವ ದಲ್ಲಿಯೇ ಅತಿ ಹೆಚ್ಚಿನ ಧರ್ಮಗಳನ್ನು ಹೊಂದಿದೆ. ನಮ್ಮ ದೇಶದ ನಿಜವಾದ ಸಮಸ್ಯೆ ಶಿಕ್ಷಣ, ನಿರುದ್ಯೋಗ, ಬಡತನವೇ ಹೊರತು ಮಂದಿರ, ಮಸೀದಿ, ಗೋವು ,ಹಂದಿ ಅಲ್ಲ ಅಂತ ಎಲ್ಲಿವರೆಗೆ ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವ್ರದ್ದಿ ಮರೀಚಿಕೆ ಮಾತ್ರ. ಧರ್ಮ, ಬಟ್ಟೆ , ಆಹಾರ ವೈಯುಕ್ತಿಕವಾದವುಗಳೇ ಹೊರತು ಸಾರ್ವತ್ರಿಕವಾಗಿ ಹೇರಲ್ಪಡುವಂತದ್ದು ಅಲ್ಲ.

ನಮ್ಮ ವೋಟು ಪಡೆದವರು ತಮ್ಮ ತೀಟೆಗಳಿಗೆ ಜನರ ನಡುವೆ ದ್ವೇಷ ಏರ್ಪಡಿಸಿ ಕೋಮು ದಳ್ಳುರಿಗೆ ಪ್ರಚೋದಿಸುತ್ತಿರುವಾಗ, ನಮ್ಮ ದೇಶದ ಇಂಚು ಇಂಚನ್ನು ಹಂತ ಹಂತವಾಗಿ ನಮಗೆ ಗೊತ್ತೇ ಆಗದ ಹಾಗೆ ಮಾರುತ್ತಿರುವಾಗ ನಾವು ಕುರುಡ ರಂತೆ ಅವರನ್ನು ಅಪ್ಪಿಕೊಂಡರೆ ನಮ್ಮ ನಾಶ ಖಂಡಿತ .ಹೀಗಾಗಿ ನಮ್ಮಲ್ಲಿನ ವಿವಿದತೆಯನ್ನು ಬದಿಗಿಟ್ಟು ಭಾರತ ರಕ್ಷಣೆಗೆ ನಾವೆಲ್ಲಾ ಒಂದಾಗಿ ನಮ್ಮ ಶಕ್ತಿಯನ್ನು ದುಪ್ಪ
ಟ್ಟು ಗೊಳಿಸಿಕೊಳ್ಳಳು ಪ್ರಯತ್ನಿಸದಿದ್ದರೆ ಭವಿಷ್ಯದಲ್ಲಿ ಅಧಃಪತನಕೀಡಾಗುವ ಅಪಾಯವಿದೆ.

ನಮ್ಮ ನಡೆ-ನುಡಿ, ವೇಷ -ಭೂಷಣ, ಆಚಾರ-ವಿಚಾರ, ಆಹಾರ-ವಿಹಾರದ ವಿವಿಧತೆಯಲ್ಲಿಯೂ ಕೂಡ ಏಕತೆಯನ್ನು ಒಪ್ಪಿಕೊಂಡಿರುವ ನಾವು ಸಂಕುಚಿರಾಗದೆ, ನಮ್ಮ ಅನನ್ಯತೆಯನ್ನು ಮೆಚ್ಚಿಕೊಂಡು ಮುನ್ನಡೆದರೆ ಮಾತ್ರ ದೇಶ ವಿಕಾಶದ ಕನಸು ನನಸಾಗಲು ಸಾದ್ಯ. ಭವಿಷ್ಯದ ಭಾರತದ ಅಬಿವ್ರದ್ದಿಗೆ ಹೊಸ ದೃಷ್ಟಿಕೋನದ ಅಗತ್ಯವಿದ್ದು ಅಂತ ಹೊಸ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ.ಎಲ್ಲ ಧರ್ಮದವರೂ ಸಮಾನವಾಗಿ ಎದುರಿಸಬೇಕಾದ ಸಮಸ್ಯೆಗಳಾದ ಶಿಕ್ಷಣ, ನಿರುದ್ಯೋಗ, ಬಡತನದ ವಿರುದ್ದ ಹೋರಾಡಬೇಕೆ ಹೊರತು ಪರಸ್ಪರ ಗುದ್ದಾಡುವುದು ಅಲ್ಲ. ದೇಶದ ಹಿತಾಶಕ್ತಿಯಿಂದ ನಮ್ಮೊಳಗಿನ ವೈಷಮ್ಯ ತೊರೆದು ಒಂದಾಗಬೇಕಿದೆ. ತನ್ಮೂಲಕ ಸಾಮಾನ್ಯ ಭಾರತೀಯರ ಹೆಬ್ಬಯಕೆಗಳನ್ನು ಈಡೇರಿಸಲು ಮತ್ತು ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಚಿಂತಕರು ,ಸಮಾಜ ಸುದಾರಕರು ಮುಂದೆ ಬರಬೇಕಾಗಿದೆ.

ಅಭಿವ್ರದ್ದಿಯ ಕಡೆಗೆ ನಡೆಸಬಲ್ಲ ಅಂಥ ನಡೆಯನ್ನು ವಿಶಾಲ ಮನಸ್ಸಿನಿಂದ ಒಪ್ಪಿಕೊಂಡರೆ ಭವಿಷ್ಯದಲ್ಲಿ ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

- ಉಫಾಕು

ದಯೆಯಿಲ್ಲದೆ ಯಾವ ಧರ್ಮವೂ ಇಲ್ಲ .




 ಧರ್ಮದ ಮರ್ಮ ಅರಿಯದ ಅಧಮಿಗಳು ಮಾಡಿದ ಕುತಂತ್ರಕ್ಕೆ ಧರ್ಮ ಹೊಣೆಯಲ್ಲ. ಧರ್ಮ ಆತ್ಮ ಬೆಳಗುವ ಬೆಳಕೇ ಹೊರತು,ಇತರರನ್ನು ಉರಿಸಿ ಬೂದಿ ಮಾಡಿಸಬಲ್ಲ ಜ್ವಾಲೆಯಲ್ಲ. ಧರ್ಮದಿಂದ ಶಾಂತಿ ನೆಲೆ ನಿಲ್ಲಬೇಕೆ ಹೊರತು ಅಶಾಂತಿಯ ಕಿಡಿ ಹೊತ್ತಿ ಉರಿಯಬಾರದು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ .ಉದ್ರೇಕಿತ ಮನಸ್ಸುಗಳು ನೆಮ್ಮದಿ ಹಾಳು ಮಾಡಬಲ್ಲವೇ ಹೊರತು ಶಾಂತಿ ನೀಡಲಾರದು . ಸರ್ವಧರ್ಮೀಯರು ಇದನ್ನು ಅರ್ಥ ಮಾಡಿ ಕೊಂಡರೆ ಮಾತ್ರ ಸರ್ವರಿಗೂ ಒಳಿತು.

ಶಾಂತಿ ಮತ್ತು ಅಹಿಂಸೆಯ ತತ್ವಗಳ ಮೂಲಕ ಯುದ್ಧವನ್ನು ಗೆಲ್ಲಲು ಸಾಧ್ಯವೇ?ಎಂದು ಯಾರಾದರೂ ಕೇಳಿದರೆ . ಗಾಂಧೀಜಿಯವರು ಇದಕ್ಕೆ ಉತ್ತಮ ಉತ್ತರವನ್ನು ಕೊಟ್ಟಿದ್ದಾರೆ.."ಶಾಶ್ವತವಾದ ಶಾಂತಿಯ ಸಾಧ್ಯತೆಯನ್ನು ನಂಬದೇ ಇರುವುದು ಮಾನವೀಯತೆಯ ಒಳಗೆ ದೈವತ್ವ ಅಡಗಿದೆ ಎಂಬುದನ್ನು ನಂಬದೇ ಇರುವಂತೆಯೇ ಆಗಿದೆ. ಅಂದರೆ ಮಾನವರಲ್ಲಿ ಅಂಥ ಸದ್ಗುಣ ಸಂಪತ್ತು ಇದೆ ಮತ್ತು ಅದರೊಂದಿಗೆ ಅವರು ಬಾಳಿ ಬದುಕಬೇಕು."ಈ ನಂಬಿಕೆಯು ಗ್ರಹಿಸಿ ಪಡೆಯುವಂತಹದ್ದಲ್ಲ. ಬೆಳೆದು ಗಳಿಸಬೇಕಾದದ್ದು ಮತ್ತು ಇಂಥ ಬೆಳೆಯುವಿಕೆ ಆಂತರ್ಯದಿಂದ ಬಂದರೆ ಮಾತ್ರ ಶಾಂತಿ ನೆಲೆಸುತ್ತದೆ.

ಶಾಂತಿಯ ಸದಾಶಯದೊಂದಿಗೆ

ಟೀಂ ಬ್ಲೂ ವೇವ್ಸ್

ಜಾಗ್ರತೆ..... ನಿಮ್ಮವರು ಕಾಯುತ್ತಿದ್ದಾರೆ


ಗೆಳೆಯರೇ..

ಎಂದಿನಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನನ್ನ ವಾಹನದಲ್ಲಿ ಸಾಗುತ್ತಿರುವಾಗ, ಆಗಷ್ಟೇ ಆದ ವಾಹನ ಅಫಘಾತ ಕಂಡು ನನ್ನ ವಾಹನವನ್ನು ಬದಿಗೆ ನಿಲ್ಲಿಸಿ ಅತ್ತ ಧಾವಿಸಿದೆ. ಅದು ಅಷ್ಟೇನೂ ದೊಡ್ಡ ಪ್ರಮಾಣದ ಭೀಕರ ಅಫಘಾತ ವಾಗಿರಲಿಲ್ಲ. ಆದರೆ ಸ್ಥಳದಲ್ಲೇ ಮೃತ ಪಟ್ಟ, ಮದುವೆಯಾಗಿ ಎರಡು ದಿನದ ಮದುಮಗನ ಮೃತ ದೇಹ ಕಂಡು ಒಂದು ಕ್ಷಣ ಮೂಕವಿಸ್ಮಿತನಾದೆ. ರಸ್ತೆಯ ತಡೆಗೋಡೆಗೆ ಬಡಿದ ರಭಸಕ್ಕೆ ಕಾರಿನ ಸ್ಟಿಯರಿಂಗ್ ವ್ಹೀಲ್ ನ ಮೇಲೆ ಮೃತ ದೇಹ ಬಿದ್ದಿತ್ತು. ಅಲ್ಲಿ ನೆರೆದಿದ್ದ ಜನರ ಪ್ರಕಾರ " ಸೀಟ್ ಬೆಲ್ಟ್ ಧರಿಸಿದ್ದರೆ ಬಹುಶಃ ಜೀವ ಉಳಿಯುವ ಸಂಭವವಿತ್ತು". ತನ್ನ ಮೇಲೆರಗಿ ಬಂದ ವಾಹನವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ತಡೆಗೋಡೆಗೆ ಅಪ್ಪಳಿಸಿಟ್ಟು. ಜನರಾಡಿಕೊಳ್ಳುತಿದ್ದ ಮಾತಿನಲ್ಲೂ ಸತ್ಯಾಂಶವಿತ್ತು. ಸ್ಟಿಯರಿಂಗ್ ವ್ಹೀಲ್ ಮತ್ತು ಸೀಟ್ ನ ಮಧ್ಯೆ ಸಾಕಷ್ಟು ಅಂತರವಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಅವನ ಇಡೀ ದೇಹವು ಸ್ಟಿಯರಿಂಗ್ ವ್ಹೀಲ್ ಗೆ ಅಪ್ಪಳಿಸಿ ಕಿಡ್ನಿಯ ಭಾಗಕ್ಕೆ ಬಡಿದಿತ್ತು. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿರುತ್ತಿದ್ದರೆ ಪ್ರಾಣಾಪಾಯದಿಂದ ಪಾರಾಗ ಬಹುದಿತ್ತೇನೋ...

ಹಾಗೇನೆ ಕಳೆದ ಒಂದೇ ವರ್ಷದಲ್ಲಿ ಆದಂತಹ ಅಫಘಾತಗಳ ಪಟ್ಟಿ ಮಾಡಿದ್ದೇನೆ.
ಅಂಕಿ ಅಂಶಗಳ ಪ್ರಕಾರ ಕಳೆದ ಒಂದೇ ವರ್ಷದಲ್ಲಿ (2013) ಕೇವಲ ಕರ್ನಾಟಕದಲ್ಲಿ 42107 ಅಪಘಾತಗಳಾಗಿವೆ. 8145 ಪುರುಷರು, 1365 ಮಹಿಳೆಯರು ಸೇರಿ 9510 ಜನರು ಮೃತಪಟ್ಟಿದ್ದಾರೆ. ಹಾಗೂ 13656 ಮಂದಿ ಗಾಯಾಳುವಾಗಿದ್ದಾರೆ.


2013 ರ ಒಂದೇ ವರ್ಷದಲ್ಲಿ ಇಡೀ ಭಾರತದಲ್ಲಿ ಆದ ರಸ್ತೆ ಅಪಘಾತಗಳ ವಿವರ ಈ ರೀತಿ ಇದೆ.
ಒಟ್ಟು ಅಪಘಾತಗಳು - 4,43,001
ಮೃತರಾದವರ ಸಂಖ್ಯೆ- 1,37,423
ಮಹಿಳೆಯರು - 15%
ಪುರುಷರು - 85%
ಗಾಯಾಳುಗಳು - 4,69,882
ಅಪಘಾತದಲ್ಲಿ ಅತೀ ಹೆಚ್ಚು ಗಾಯಾಳುಗಳಾದ 3 ರಾಜ್ಯಗಳು
ತಮಿಳುನಾಡು - 75,681
ಕರ್ನಾಟಕ - 52,793
ಅಂದ್ರ ಪ್ರದೇಶ - 52,522
ಅಪಘಾತದಲ್ಲಿ ಅತೀ ಹೆಚ್ಚು ಮರಣ ಸಂಭವಿಸಿದ ರಾಜ್ಯಗಳು
ಉತ್ತರ ಪ್ರದೇಶ -15,630
ತಮಿಳುನಾಡು - 15,563
ಆಂಧ್ರಪ್ರದೇಶ - 14,647
ಅತೀ ಹೆಚ್ಚು ಗಾಯಾಳುಗಳಾದ ಪಟ್ಟಣಗಳು
ಚೆನ್ನೈ- 8700
ದಿಲ್ಲಿ - 5637
ಬೆಂಗಳೂರು- 4334
ಅತೀ ಹೆಚ್ಚು ಮರಣ ಸಂಭವಿಸಿದ ಪಟ್ಟಣಗಳು.
ದಿಲ್ಲಿ - 1530
ಚೆನ್ನೈ - 1247
ಜೈಪುರ - 783
ಮೇಲಿನ ಅಂಕಿ ಅಂಶಗಳನ್ನೂ ನೋಡುವಾಗ ನಮ್ಮನ್ನೇ ನಾವು ಪ್ರಶ್ನಿಸ ಬೆಕಾಗಿದೆ. ಮುಂದಿನ ವರ್ಷದಲ್ಲಿ ಈ ಸಂಖ್ಯೆಯೊಂದಿಗೆ ನಾವು ಕೂಡ ಸೇರ್ಪಡೆ ಯಾಗಲಿದ್ದೆವೆಯೇ ?
ಹಾಗಾಗಿ ಪ್ರತಿಸಲ ನಾವು ವಾಹನ ಚಲಾಯಿಸುವಾಗ "ನನ್ನ ಮಡದಿ ಮಕ್ಕಳು ನನಗಾಗಿ ಕಾದಿರುವರು. ಕನಿಷ್ಠ ಪಕ್ಷ ಅವರಿಗಾಗಿಯಾದರೂ ವಾಹನವನ್ನು ಜಾಗರೂಕತೆಯಿಂದ ಚಲಾಯಿಸುವೆ" ಎಂಬುದನ್ನು ಮನದಲ್ಲಿಟ್ಟು ಕೊಂಡಿರಬೆಕು. ಒಮ್ಮೆ ಕಳೆದು ಹೋದ ಜೀವ, ಸಮಯ ಹಿಂತಿರುಗಿ ಬರಲಾರದು.
ವಾಹನ ಚಲಾಯಿಸುವಾಗ ಕೆಲವೊಂದು ಅಂಶಗಳನ್ನೂ, ನಮಗಲ್ಲದ್ದಿದ್ದರೂ, ನಮ್ಮ ಮನೆಯವರಿಗಾಗಿ ಗಮನದಲ್ಲಿಟ್ಟು ಕೊಂಡಿರಬೆಕು.
# ಸೀಟ್ ಬೆಲ್ಟ್ ಭಧ್ರ ಪಡಿಸಿ ಕೊಂಡಿರ ಬೇಕು.
# ದ್ವಿಚಕ್ರ ವಾಹನದಲ್ಲಿ ಕಡ್ಡಾಯಾ ಹೆಲ್ಮೆಟ್ ಧರಿಸಿರಬೇಕು.
# indicator ಕ್ಲಪ್ತ ಸಮಯದಲ್ಲಿ ಉಪಯೋಗಿಸಬೇಕು.
# ವಾಹನವನ್ನು ಅನಿರೀಕ್ಷಿತವಾಗಿ ನಿಲ್ಲಿಸುವಾಗ, ರಸ್ತೆಯಿಂದ ಸಾಧ್ಯವಾದಷ್ಟು ಬದಿಗೆ ಸರಿಸಿ ನಿಲ್ಲಿ.
# ನಿಮ್ಮನ್ನು Overtake ಮಾಡುವಂತಹ ವಾಹನದ ಜಿದ್ದಿಗೆ ಬೀಳದೆ ಹಾಗೂ ಎದುರಿನಿಂದ ಬರುವ ವಾಹನಗಳಿಗೆ ದಾರಿ ಮಾಡಿಕೊಡಿ.
# ಸಣ್ಣ ಮಕ್ಕಳನ್ನು ಯಾವತ್ತೂ ಮುಂದಿನ ಸೀಟ್ ಗಳಲ್ಲಿ ಕುಳ್ಳಿರಿಸಬೇಡಿ.
# ತಮ್ಮ ವಾಹನದ ಸ್ಥಿತಿಯನ್ನು ತಿಂಗಳಿಗೊಮ್ಮೆಯಾದರೂ ಪರೀಕ್ಷಿಸಿಕೊಳ್ಳಿ.
# ವಾಹನ ಚಲಾಯಿಸುವಾಗ ಮೊಬೈಲ್ ಬಳಸ ಬೇಡಿ.
# ತೀರ ಅಗತ್ಯ ಕರೆಗಳನ್ನು ವಾಹನವನ್ನು ಬದಿಗೆ ನಿಲ್ಲಿಸಿ ಮಾತಾಡಿ ಮುಂದುವರೆಯಿರಿ. ಸಾಧ್ಯವಾದರೆ ನಿಮ್ಮ ಕರೆಗಳನ್ನು ನಿಮ್ಮ ಸಹ ಪ್ರಯಾಣಿಕರಿಗೆ ಉತ್ತರಿಸಲು ಹೆಳಿ. ಚಾಲನಾ ಸಮಯದಲ್ಲಿ Bluetooth ಅಥವಾ earphone ಬಳಸಿ.
# ಚಾಲನಾ ಸಮಯದಲ್ಲಿ ಯಾವತ್ತೂ SMS ಅಥವಾ Whatsapp ಖಂಡಿತವಾಗಿಯೂ ಬಳಸ ಬೇಡಿ.
ಇಂತಹ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ನಿಮ್ಮನ್ನೂ ಮತ್ತು ನಿಮ್ಮ ಕುಟುಂಬದವರ ಬಗ್ಗೆ ಚಿಂತಿಸಿ, ಸುಂದರ ಭವಿಷ್ಯವನ್ನು ಸಾಕಾರ ಗೊಳಿಸಿ ಎಂಬ ವಿನಂತಿಯೊಂದಿಗೆ

ಇಂತಿ

Team Blue Waves

ಬುಧವಾರ, ಫೆಬ್ರವರಿ 11, 2015

ಯುವ ಜನತೆ- ಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ




ಮಹಮ್ಮದ್ ಕಾಸಿಂ. ಕೆ
 ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #2# 

ಹಿಂದೊಂದು ಕಾಲವಿತ್ತು. ಸುಮಾರು 10 ವರ್ಷಗಳ ಹಿಂದೆ ತನ್ನ ಪುಟ್ಟ ಮಗುವಿಗೆ ಚಂದಾ ಮಾಮನನ್ನು ತೋರಿಸಿ ಊಟ ಉಣಿಸುತಿದ್ದ ಕಾಲ. ಮಕ್ಕಳೆಲ್ಲಾ ಅಜ್ಜನ ಮೀಸೆಯನ್ನು ಊದಿ ಮೇಲೆ ಮೇಲಕ್ಕೆ ಏರಿಸುತಿದ್ದರು. ಮದುವೆಗೆ ಗಂಡು ಅಥವ ಹೆಣ್ಣು ಹುಡುಕುತಿದ್ದರೆ ಅವರ ಅಕ್ಕ ಪಕ್ಕದಲ್ಲಿರುವವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಅವರ ಗುಣಗಳ ಬಗ್ಗೆ ವಿಚಾರಿಸುತ್ತಿದ್ದರು. ದುಬಾಯಿಯಲ್ಲಿರುವ ಮಗ ತನ್ನ ತಂದೆಗೆ ಪ್ರೀತಿಯಿಂದ ಪತ್ರ ಬರೆಯುತಿದ್ದರೂ, ತಂದೆ ತನ್ನ ಮಗನ ಫೊನ್ ಗಾಗಿ ಕಾಯುತಿದ್ದರು. ಬೆಳಗೆದ್ದು ಹಲ್ಲುಜ್ಜಿ ಮುಖ ತೊಳೆದು ಕನ್ನಡಿ ಮುಂದೆ ತನ್ನ ಮುಖಕ್ಕೆ ಫೊಸ್ ಕೊಡದಿದ್ದರೆ ಅಂದು ಬೆಳಗಾದಂತೆಯೆ ಅನ್ನಿಸುತ್ತಿರಲಿಲ್ಲ. ಕಿತ್ತೊಗಿರೊ ರೇಡಿಯೊವನ್ನು ಮೇಲೆ ಹಿಡಿದು ಅದರ ಆಂಟೆನವನ್ನು ಕಿಟಕಿಯ ಪಕ್ಕ ಹಿಡಿದು ಆಕಾಶವಾಣಿ ಕೇಳದಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ. ವಾರಕ್ಕೊಂದು ಸಾರಿಯಾದರೂ ಅತ್ತ ಅತ್ತೆ ಮನೆಗಾದರೂ, ಇತ್ತ ಮಾವನ ಮನೆಗೊಮ್ಮೆ ಹೋಗುಯತ್ತಿದ್ದ. ಇದೆಲ್ಲವೂ ಈ ಆಧುನಿಕ ಯುಗದಲ್ಲಿ ಬರೀ ನೆನಪುಗಳಾಗಿ ಕಂಡ ಯಾವುದೋ ಕನಸಿನಂತೆ ಮಾಯವಾಗುತ್ತಿವೆ. ಈ ಆಧುನಿಕತೆಯ ಮಂದೆ ಚಂದಾ ಮಾಮನಿಗೆ ಬೆಲೆಯೇ ಇಲ್ಲದಾಗಿದೆ. ಮಗುವಿಗೆ ಸಾಂಗು ಹಾಕಿದರೇನೆ ಊಟ. ಅದಕ್ಕೂ ತಿಳಿದಿದೆ ಯಾವುದೂ ಟೇಪು ಯಾವುದು ಲೊಕಲ್ ಎಂದು.ಅಜ್ಜನ ಮೀಸೆಯು ಬರೀ ಅಜ್ಜನ ಕಾಲಕ್ಕೆ ಸೀಮಿತವಾಗಿದೆ. ಎಲ್ಲೊ ಕಂಡ ಹುಡುಗಿ ಜೊತೆ ಚಾಟ್ ಆಗಿ, ಫ್ರೆಂಡ್ ಆಗಿ, ಕೊನೆ ಲವ್ವು ಆಗಿ ಲವ್ವು ಮ್ಯಾರೇಜ್ ನಡೆಯುತ್ತಿರುವ ಈ ಕಾಲದಲ್ಲಿ ಹೆಣ್ಣು ಹುಡುಕುವುದು ವ್ಯರ್ಥವಲ್ಲವೇ...? ಹಿಂದೆ ಕನ್ನಡಿ ಮುಂದೆ ತನ್ನ ಮುಖವನ್ನು ನೋಡುತ್ತಿದ್ದರೆ, ಇಂದು ಮುಖ ಪುಸ್ತಕ (Facebook) ತೆರೆದು ತನ್ನ ಮುಖದ ಅಂದವನ್ನು ಅಳೆಯುತ್ತಾರೆ. ಹತ್ತು ವರ್ಷದ ಹಿಂದಿನ ದನಕ್ಕೂ, ಇಂದಿನ ದನಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಆದರೆ ಹಿಂದಿನ ಜನಕ್ಕೂ, ಇಂದಿನ ಜನಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ಅದಕ್ಕೆ ಪ್ರಮುಖ ಕಾರಣವು ಆಧುನಿಕವಾಗಿತ್ತಿರುವ ಪ್ರಪಂಚ ಮತ್ತು ಆಧುನಿಕವಾಗುತ್ತಿರುವ ಮಾನವ.

ಇದು ಸ್ಮಾರ್ಟ್ ಫೊನ್ ಯುಗ. ಎಲ್ಲಿ ನೊಡಿದರೂ ಸ್ಮಾರ್ಟ್ ಫೊನ್ ಗಳೇ ಎದ್ದು ಕಾಣುತ್ತವೆ. ಇಂದಿನ ಮಾನವನ ಎಲ್ಲದಕ್ಕೂ ಸ್ಮಾರ್ಟ್ ಫೊನ್ ಬೇಕೇ ಬೇಕು. ಅವನ ಉಡುಗೆ ತೊಡುಗೆಗಳ ಹಾಗೆ ಸ್ಮಾರ್ಟ್ ಫೊನ್ ಕೂಡ ಅನಿವಾರ್ಯವಾಗಿದೆ. ಇಂದಿನ ಅಂತರ್ಜಾಲದ ಬಳಕೆಯೂ ಸ್ಮಾರ್ಟ್ ಫೊನ್ ನಿಂದಲೇ ಆಗುತ್ತಿದೆ. ಹದಿ ಹರೆಯದವನಿಂದ ಹಿಡಿದು ಮುದುಕರವರೆಗೂ ಸ್ಮಾರ್ಟ್ ಫೊನ್ ಬಳಕೆಯಾಗುತ್ತಿದೆ. ಯುವಕರು ಅದೆಷ್ಟು ಸ್ಮಾರ್ಟ್ ಆದರೂ ಕೂಡಾ ಸ್ಮಾರ್ಟ್ ಫೊನ್ ಒಂದು ಇರಲೇ ಬೇಕು.ಅದು ಲೆಟೆಸ್ಟ್ ಆಗಿದ್ದರೆ ಅದೇ ಈ ಪೀಳಿಗೆಯ ಫ್ಯಾಷನ್. ಹೊಸ ಹೊಸ ಅಪ್ಪ್ಲಿಕೇಷನ್ ಗಳು ಅವನ ಆಸಕ್ತಿಯನ್ನು ದಿನೆ ದಿನೆ ಹೆಚ್ಚಿಸುತ್ತಲೇ ಇರುತ್ತವೆ. ಹೊಟ್ಟೆಗೆ ಹಸಿದಿದ್ದರೂ ನೆಟ್ ಕಾರ್ಡ್ ಗಳು ಅವನ ಹಸಿವನ್ನು ನೀಗಿಸುತ್ತವೆ. ಊಟ ಮಾಡಿಲ್ಲದಿದ್ದರೂ ಫ್ಲಿಪ್ ಕವರ್ ಹೊಸದೆ ಇರಬೇಕು. ದಿನ ಕಳೆದಂತೆ ಸ್ಮಾರ್ಟ್ ಫೊನ್ ಬಳಕೆ ಹೆಚ್ಛುತ್ತಲೇ ಇದೆ. ಪ್ರತಿಗಳಿಗೆ ಸ್ಮಾರ್ಟ್ ಫೊನ್ ತನ್ನ ಕೈಯಲ್ಲಿರ ಬೇಕೆನ್ನುವ ಮಟ್ಟಿಗೆ ಇಂದಿನ ಮಾನವ ಮಾರು ಹೋಗಿದ್ದಾನೆ ಎನ್ನುವುದೇ ವಿಶಾದನೀಯ.
ಸಾಮಾಜಿಕ ತಾಣದಲ್ಲಿ ಸಿಂಹಪಾಲು ಯುವಕರದ್ದೇ ಸದ್ದು. ಭಾರತ ರಾಷ್ಟ್ರವನ್ನು ಒಂದು ಯುವ ರಾಷ್ಟ್ರ ಎಂದು ಕರೆಯುತ್ತಾರೆ. ಏಕೆಂದರೆ ಭಾರತದಲ್ಲಿ ಶೇ 60 ಕ್ಕಿಂತಲೂ ಹೆಚ್ಚು ಯುವಕರಿದ್ದಾರೆ. ಪ್ರತಿಯೊಬ್ಬನ ಜೀವನದ ಪ್ರಮುಖ ಘಟ್ಟವಾಗಿದೆ ಯೌವ್ವನ. ಕುದಿಯುತ್ತಿರುವ ರಕ್ತ, ದಷ್ಟ ಪುಷ್ಟವಾದ ಶರೀರ, ಶರೀರವನ್ನೆ ನಿಯಂತ್ರಿಸಲಾಗದ ಸಮಯ, ಕೆಟ್ಟ ಚಟಗಳು ಮೊಳಕೆಯೊಡೆಯುವ ಸುಸಂಧರ್ಭ. ಇಂತಹ ಯುವತ್ವವನ್ನು ಬರೀ ಮೋಜಿಗಾಗಿ ವ್ಯಯಿಸದೆ, ಸತ್ಯ, ನೀತಿ, ನಿಯಮ, ಕ್ರಾಂತಿ ಇತ್ಯಾದಿ ಒಳ್ಳೆಯ ಕೆಲಸಗಳಲ್ಲಿ ಸೇರಿ ನಾಳೆಯ ಯುವಕ್ಕೆ ಮಾದರಿಯಾಗ ಬೇಕು. ಆದರೆ ಪ್ರಸ್ತುತ ಯುವಕರು ಕರ್ತವ್ಯಗಳೇನು? ಅವರು ಮಾಡ ಬೇಕಾದ ಕೆಲಸಗಳೆನು? ಆಧುನಿಕ ಶೈಲಿಯನ್ನು ಸಂಪೂರ್ಣವಾಗಿ ತಿರಸ್ಕರಿಸ ಬೇಕೆಂದಲ್ಲ. ನವನಾವಿನ್ಯತೆಯ ಆವಿಷ್ಕಾರವಾಗಿದ್ದ ಆಧುನಿಕತೆಯೂ ಬೇಕು. ಇತ್ತ ಸಂಪ್ರದಾಯಯುತ ಜೀವನ ಶೈಲಿಯೂ ಬೇಕು.
ಸಾಮಾಜಿಕ ತಾಣ ಅಂದ ಕೂಡಲೇ ನೆನಪಿಗೆ ಬರುವುದು ಫೇಸ್ಬುಕ್, ವಾಟ್ಸಪ್, ಗೂಗಲ್, ಟ್ವಿಟರ್, ಜೀ ಮೇಲ್ ಇತ್ಯಾದಿ. ಆದರೆ ಇದೆಲ್ಲಕ್ಕೂ ಮುಂಚಿತವಾಗಿ ಸಮಾಜಿಕ ತಾಣ ಎಂದರೇನು? ಅದರಿಂದ ಇರುವ ಉಪಕಾರಗಳೇನು? ಇದನ್ನು ಉಪಯೋಗಿಸ ಬೇಕಾದ ರೀತಿ ಯಾವುದು ? ಇಂದು ಅದು ದುರುಪಯೋಗವಾಗುತ್ತಿರುವುದು ಹೇಗೆ. ಎನ್ನುವಂತಹ ಪ್ರೆಶ್ನೆಗಳ ಉತ್ತರಗಳು ತಿಳಿದಿರಲೇ ಬೇಕು.
ನಮ್ಮಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸುವ ಅದಕ್ಕೆ ಪ್ರತಿಕ್ರಿಯಿಸಲು ಅವಕಾಶವಿರುವ ಪ್ರತಿಯೊಂದು ತಾಣವು, ಸಾಮಾಜಿಕ ತಾಣವಾಗಿದೆ. ಸಾಮಾಜಿಕ ತಾಣಗಳ ಕುರಿತು, ಅದರ ಬಳಕೆಯ ರೀತಿಯನ್ನು ಸ್ಪಷ್ಟವಾಗಿ ತಿಳಿದಿರುವ ಒಬ್ಬ ಅದನ್ನು ಸರಿಯಾಗಿ ಉಪಯೋಗಿಸುವಲ್ಲಿ ವಿಫಲನಾಗುತ್ತಾನೆ ಎನ್ನುವುದೇ ಖೇದಕರ. ಇತ್ತ ಕುರ್ಚಿಯಲ್ಲಿ ಕೂತು ವಾಟ್ಸಪ್ ವೀಕ್ಷಿಸುತ್ತಿದ್ದ ನನ್ನಲ್ಲಿ ಆಚೆ ಮನೆಯ ಅಜ್ಜ ನಗುತ್ತಾ ಕೇಳಿದರು "ಏನೋ ಪುಟ್ಟ, ಯಾವಾಗಲೂ ಆ ಮೊಬೈಲನ್ನು ಆ ಕಡೆ ಈ ಕಡೆ ಒತ್ತುತ್ತಾ ಇರುತ್ತಿಯಲ್ಲೋ. ಅಷ್ಟು ಚಿಕ್ಕ ಮೊಬೈಲ್ನಲ್ಲಿ ಹಾಗೆ ನೋಡಲಿಕ್ಕೇನಿದೆ?" ನಾನು ಸ್ವಲ್ಪ ಸುಮ್ಮನಿದ್ದು ಹೇಳಿದೆ" ನೀವು ಯಾವಾಗ ನೋಡಿದರೂ ಎಲೆ ಅಡಿಕೆ ಜಗಿಯುತ್ತಿರುತ್ತೀರಲ್ಲಾ? ಹಾಗೆ ಇಂದಿನ ಈ ಜನರಿಗೆ ಅಂತರ್ಜಾಲ ವ್ಯಸನವಾಗಿ ಬಿಟ್ಟಿದೆ. ಒಂದು ಹೊತ್ತು ಅದು ಇಲ್ಲದಿದ್ದರೆ ಅದು ಬೊರ್ ಎನಿಸುತ್ತದೆ.ದಿನಕ್ಕೊಂದು ಹೊಸತು ಅಪ್ಡೇಟ್ ಮಾಡಿ ಇನ್ನಷ್ಟು ಆಕರ್ಷಣೀಯವಾಗುತ್ತದೆ" ಎನ್ನುತ್ತಾ ನಾನು ಚಾಟಿಂಗ್ ಮುಂದುವರೆಸಿದೆ.

ಸರ್ಚ್ ಎಂಜಿನ್ ಅಂತರ್ಜಾಲದ ಬಳಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮಲ್ಲಿರುವ ಒಂದು ವಿಷಯದ ಕುರಿತು ಶೋಧಿಸಲು, ಮಾಹಿತಿ ಸಂಗ್ರಹಿಸಲು ಸರ್ಚ್ ಎಂಜಿನ್ ಅತ್ಯಾವಶ್ಯಕವಾಗಿದೆ. ಸಮಾಜಿಕ ತಾಣವಾದ ಗೂಗಲ್ ಒಂದು ಅಧ್ಬುತ ಸರ್ಚ್ ಎಂಜಿನ್ ಆಗಿದೆ. ಪ್ರಪಂಚದ ಅತೀ ವಿಷಾಲವಾದ, ಸರಳವಾದ ವಿಶ್ವವ್ಯಾಪಿಯಾಗಿರುವ ಅಮೇರಿಕಾದ ಕಂಪನಿಯಾಗಿದೆ. ಎಲ್ಲಾ ದೇಶಗಳ ವಿಸ್ಮಯಗಳನ್ನು ಶೇಖರಿಸಿ, ಲಭಿಸುವಂತೆ ಮಾಡುವುದೇ ಅದರ ಪ್ರಮುಖ ಕೆಲಸವಾಗಿದೆ. ಅದರ ಎಲ್ಲಾ ವಿಧಾನಗಳಿಂದ 20 ಕೋಟಿಗಳಿಗಿಂತಲೂ ಮಿಕ್ಕ ವಿಷಯಗಳು ಪ್ರತಿದಿನ ಗೂಗಲ್ ಕೈ ಸೇರುತ್ತದೆ. ಸರ್ಚ್ ಎಂಜಿನ್ ಗಾಗಿ ಮಾತ್ರ ಪ್ರಾರಂಭಿಸಿದ ಗೂಗಲ್ ಇಂದು ನ್ಯೂಸ್, ವಿಡಿಯೊ, ಆನ್ ಲೈನ್ ವ್ಯಪಾರಗಳು ಮಾಡುತ್ತದೆ. ಆದರೆ ಕೆಲವರ ಭಾವನೆಯಂತೆ ಅಂತರ್ಜಾಲವೆ ಗೂಗಲ್ ಎನ್ನುವುದು ತಪ್ಪು. ಗೂಗಲ್ ಅಂತರ್ಜಾಲವಾಗಿದೆಯೆ ವಿನಹ, ಅಂತರ್ಜಾಲವು ಗೂಗಲ್ ಅಲ್ಲ. ಭಾರತದಲ್ಲಿ ಕರ್ನಾಟಕವೆಂಬಂತೆ, ಗೂಗಲ್ ಅಂತರ್ಜಾಲದ ಚಿಕ್ಕ ಭಾಗವಾಗಿದೆ.ನಮಗೆ ಜಾಲಾಡಲು ಹಲವು ಸರ್ಚ್ ಎಂಜಿನ್ಗಳಿವೆ. ಅದರಲ್ಲಿ ಗೂಗಲ್ ಎತ್ತಿದ ಕೈ. ಎಲ್ಲಾ ಸರ್ಚ್ ಎಂಜಿನ್ ಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಗೂಗಲ್, ಯಹೂ, ಬಿಂಗ್ ಇವೆಲ್ಲವೂ ಡಾಟಾ ಹುಡುಕುವ ವಿಧಾನವು ಬೇರೆ ಬೇರೆಯಾಗಿದೆ. ಕೆಲವೊಮ್ಮೆ ಒಂದೇ ವಿಷಯವನ್ನು ಈ ಮೂರೂ ಸರ್ಚ್ ಎಂಜಿನ್ಗಳಲ್ಲಿ ಹುಡುಕಿದರೂ ಶೋಧಿಸಿದರೆ ಮೊದಲ ಪುಟದಲ್ಲಿ ಬೇರೆ ಬೇರೆ ಫಲಿತಾಂಶ ಸಿಗುವ ಸಾಧ್ಯತೆವಿದೆ. 

 www.dogpile.comwww.zapmeta.comwww.search.com ಮೊದಲಾದ ಸರ್ಚ್ ಎಂಜಿನ್ ಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಮಾಹಿತಿಗಳನ್ನು ನೀಡುತ್ತದೆ. ಸಮಾಜಿಕ ತಾಣವಾದ ಫೇಸ್ಬುಕ್, ಟ್ವಿಟರ್, ಯಹೂ, ಬ್ಲಾಗ್ ಮುಂತಾದುವುಗಳಿಲ್ಲಿರುವ ಮಾಹಿತಿಯನ್ನುwww.icerocket.com ಎಂಬ ತಾಣದಲ್ಲಿ ಜಾಲಾಡ ಬಹುದು. ಸ್ವಭಾಷೆಯಲ್ಲಿರುವ ಮಾಹಿತಿಗಳನ್ನು ಪಡೆಯಲು ಕೆಲವೊಮ್ಮೆ ಗೊಂದಲಗಳಿರುತ್ತವೆ. ಅದಕ್ಕಾಗಿ www.ask.com ನಿಂದ ಪ್ರೆಶ್ನೆ ರೂಪದಲ್ಲೂ ಕೇಳ ಬಹುದು. ಅಂತರ್ಜಾಲದಲ್ಲಿ ಜಾಲಾಡುವಾಗ ಕೆಲವೊಮ್ಮೆ ನಮ್ಮನ್ನು ಅಶ್ಲೀಲ ತಾಣಗಳಿಗೆ ಕರೆದೊಯ್ಯಬಹುದು. ಅದನ್ನು ತಪ್ಪಿಸಲು www.kidrex.com ಅನ್ನು ಉಪಯೋಗಿಸ ಬಹುದು. ಇದು ಮಕ್ಕಳಿಗೆ ಅತ್ಯಾವಶ್ಯಕವಾದ ವಿಷಯಗಳನ್ನು ಹುಡುಕಿ ತರುತ್ತದೆ. ವೈದಕೀಯಶೋಧಗಳಿಗಾಗಿ  www.imedisearch.com  ಉಪಯೋಗಿಸ ಬಹುದು. ಇಂತಹಾ ಸರ್ಚ್ ಎಂಜಿನ್ಗಳಿಂದ ನಮಗೆ ಬೇಕಾದ ವಿಷಯಗಳನ್ನು ಶೋಧಿಸಿ ಬೇಕಾದ ಪುಟಗಳಿಗೆ ಹೋಗಬಹುದು.ಅವಶ್ಯಕವಾದ ಚಿತ್ರಗಳನ್ನು ನೋಡ ಬಹುದು. ಹೀಗೆ ಎಲ್ಲದಕ್ಕೂ ಅವಕಾಶವಿರುತ್ತದೆ.

ದಿನದಿಂದ ದಿನಕ್ಕೆ ಹೆಚ್ಚಾಗಿ ಬೆಳೆಯುತ್ತಿರುವ ಆಕರ್ಷಣೀಯ ತಾಣವಾಗಿದೆ ಫೇಸ್ಬುಕ್. ಇದರಲ್ಲಿ 300 ಮಿಲಿಯನ್ ಗಿಂತಲೂ ಹೆಚ್ಚು ಸಕ್ರೀಯ ಬಳಕೆದಾರರಿದ್ದಾರೆ. ಇಂದು ಇದು ಎಲ್ಲರಿಗೂ ಚಿರ ಪರಿಚಯ. ತನ್ನಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸಲು, ಅವರ ಅಭಿಪ್ರಾಯಗಳನ್ನು ತಿಳಿದು ಅದಕ್ಕೆ ಪ್ರತಿಕ್ರಿಯೀಸಲು ಸಹಾಯಕವಾಗಿದೆ. ನಮ್ಮಲ್ಲಿರುವ ಪ್ರೆಶ್ನೆ, ವಿಷಯ, ವಿಸ್ಮಯ, ಚಿಂತನೆ, ಮನೋರಂಜನೆಗಳನ್ನು ಜನರಿಗೆ ತಿಳಿಯಪಡಿಸಲು. ಆಗು ಹೋಗುಗಳನ್ನು ಮನುಕುಲಕ್ಕೆ ಎಟಕಿಸುವ ಉತ್ತಮ ಮಾಧ್ಯಮವಾಗಿದೆ. ಇಂದಿನ ಮಾಧ್ಯಮಗಳು ಬರೀ ಧರ್ಮ ಸಂಘಟನೆಗಾಗಿ ಸಂಘಟನೆಗೊಂಡ ಪತ್ರಿಕೆಯಂತೆ ಕೋಮು ಪ್ರಚೋದನೆ ಮಾಡುತ್ತಲೂ, ದ್ವನಿಗೆ ಪ್ರತಿದ್ವನಿಯಾಗಿ ಪ್ರತಿಸ್ಪರ್ಧಿಸುವಾಗ ಜಾಹಿರಾತು ಕೀರ್ತಿ ಕಾಮನೆಗಳಿಗಾಗಿ ಹಣದ ಹಿಂದೆ ಸಾಲು ನಿಲ್ಲುತ್ತಿರುವಾಗ ಇಂತಹಾ ಸಾಮಾಜಿಕ ತಾಣಗಳು ಉಪಯುಕ್ತವಾಗಿದೆ. ಇದೇ ರೀತಿ ಟ್ವಿಟರ್ ಕೂಡ ಜನಪ್ರಿಯವಾಗಿದೆ. ಹ್ರಸ್ವ ಸಂದೇಶಗಳಂತಹ ಚಿಕ್ಕ ಮಾತುಗಳಿಂದ ವಿವರಗಳನ್ನು ಜನರಿಗೆ ತಲುಪಿಸಲು ಇನ್ನೊಬ್ಬರು ಅಪ್ಡೇಟ್ ಮಾಡಿದ ಸಂದೇಶಗಳನ್ನು ವೀಕ್ಷಿಸಲೂ ಬಹುದು. ನೀವು ಪ್ರಸ್ತುತ ಮಾಡುತ್ತಿರುವ ಕೆಲಸಗಳನ್ನು 140 ಅಕ್ಷರಗಳನ್ನು ಒಳಗೊಂಡ ಪದಗಳನ್ನು ತಮ್ಮ ಸ್ನೇಹಿತರಿಗೆ ಟ್ವೀಟ್ಸ್ ಮೂಲಕ ತಿಳಿಸಬಹುದು. ಅದೇ ರೀತಿ ಇತ್ತೀಚಿನ ಕಾಲದಲ್ಲಿ ಮಾಯವಾಗುತ್ತಿರುವ ಲಿಂಕ್ಡ್ ಇನ್, ಗೂಗಲ್ ಪ್ಲಸ್, ಯಾಹೂ ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ನಮ್ಮೆಲ್ಲರ ಆಪ್ತ ಮಿತ್ರ ಫೇಸ್ಬುಕ್ ಕೂಡಾ ಒಂದು ದಿನ ಮರೆಯಾಗಲಿಕ್ಕಿದೆ. ದಿನದಿಂದ ದಿನಕ್ಕೆ ಆಧುನಿಕ ಆವಿಶ್ಕಾರವಾಗುತ್ತಿರುವಾಗ ಹೊಸತೊಂದು ತಾಣಕ್ಕೆ ಜಿಗಿಯಲಿದ್ದಾರೆ. ಇದು ಪ್ರಕ್ರತಿ ನಿಯಮ. ಪತ್ರ ಬರೆಯುತ್ತಿದ್ದ ಕೈಗಳು ಇಂದು ಟೈಪ್ ಮಾಡುತ್ತಿವೆ. ಇಂದು ನಮ್ಮ ಜೀವನದ ಒಂದು ಭಾಗವಾಗಿರುವ ಫೇಸ್ಬುಕ್ ಗಿಂತಲೂ ಮುಂಚೆ ಒಂದು ಕಾಲವಿತ್ತು. ಆರ್ಕುಟ್ ಎನ್ನುವ ಜನಪ್ರೀಯ ತಾಣ. ಅದರಲ್ಲೂ ಇದೇ ರೀತಿ ಪ್ರತಿದಿನ ಸಂದೇಶ ಕಳುಹಿಸುತಿದ್ದರು. ಆದರೆ ಫೇಸ್ಬುಕ್ ಬಂದ ಕೂಡಲೇ ಆರ್ಕುಟ್ ಕಣ್ಮರೆಯಾಯಿತು. ಮತ್ತೊಂದು ಜನಪ್ರಿಯ ತಾಣವೆಂದರೆ "ಯೂಟ್ಯೂಬ್". ಅದರಲ್ಲಿ ಜನರಿಗೆ ಬೇಕಾದಂತಹ ವಿಡಿಯೋಗಳನ್ನು ವೀಕ್ಷಿಸ ಬಹುದು. ಅಪ್ಲೋಡ್ ಮಾಡ ಬಹುದು. ಲೈಕ್ ಕಾಮೆಂಟ್ಸ್ ಮಾಡುತ್ತಲೂ ಸಬ್ ಸ್ಕ್ರೈಬ್ ಮಾಡ ಬಹುದಾಗಿದೆ. ಆದರೇ ವಾಟ್ಸಪ್ ಫೇಸ್ಬುಕ್ ಗಳಂತಹಾ ತಾಣಗಳು ಬಂದ ನಂತರ ಅದರ ವ್ಯಾಲ್ಯು ಕಡಿಮೆಯಾಗುತ್ತಲಿದೆ. ಅದೇ ರೀತಿ ವಿಡಿಯೊಗಳನ್ನು ಡೌನ್ ಲೋಡ್ ಮಾಡಲು ವಿಯು ಕ್ಲಿಪ್, ಟುಬಿಡಿ ಮುಂತಾದುವುಗಳನ್ನು ಬಳಸುವವರೂ ಇದ್ದಾರೆ.
ಇನ್ನೂ ತ್ವರಿತ ಸಂದೇಶಗಳನ್ನು ಕಳಿಸಬಲ್ಲ ಅಪ್ಲಿಕೇಶನ್ಗಳು ಆಕರ್ಷಣೀಯವಾಗಿದೆ. ವಾಟ್ಸಪ್ ...ಅದೊಂದು ಜನಪ್ರೀಯ ತಾಣ. ಇದರ ಹೆಸರು ಕೇಳದವರು ಯಾರೂ ಇಲ್ಲ.ಇದರಲ್ಲಿ 500 ಮಿಲಿಯನ್ ಗಿಂತಲೂ ಅಧಿಕ ಬಳಕೆದಾರರಿದ್ದಾರೆ. ಇದರಲ್ಲಿ 400 ಮಿಲಿಯನ್ ಭಾರತೀಯರಿದ್ದಾರೆ. ಇದು ಸಂದೇಶಗಳನ್ನು ಬರೆಯಲು, ಕಳುಹಿಸಲು ಸರಳ ಮತ್ತು ಸುಲಭವಾಗಿದ್ದರಿಂದ ಹೆಚ್ಚು ಜನ ಮುಗಿ ಬೀಳುತ್ತಾರೆ. ಇದನ್ನು ಬಳಸಲು ಹೆಚ್ಚು ಜ್ನಾನದ ಅವಶ್ಯಕತೆ ಇಲ್ಲದಿದ್ದರಿಂದ ಫೇಸ್ಬುಕ್ ಬಳಸದವರೂ ಕೂಡ ವಾಟ್ಸಪ್ ಬಳಸುತ್ತಾರೆ. ಹೆಚ್ಚು ಜನಪ್ರಿಯವಾಗದ ಭಾರತೀಯವಾದ "ಹೈಕ್" "ಇನ್ಸಾಂಟ್" ಇದೇ ರೀತಿ ಕರೆಗಳೂ, ವಿಡಿಯೋ ಕರೆಗಳನ್ನು ಮಾಡಬಲ್ಲ "ಸ್ಕೈಪ್" "ವಿಚಾಟ್" "ಲೈನ್" "ಇಮೊ" "ನಿಂಬಝ್" ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಲಿವೆ.

ಇದೇ ಸಮಾಜಿಕ ತಾಣಗಳ ನೈಜ ಮುಖಗಳು. ಇದಕ್ಕೆ ಮಸಿ ಬಳಿಯುತ್ತಿರುವವರೂ ನಾವೇ. ಪೌಡರ್ ಹಚ್ಚ ಬೇಕಾದವರೂ ನಾವೇ. ಅದೊಂದು ಚಕ್ರವಿದ್ದಂತೆ. ನಾವು ಕಳುಹಿಸಿದ ಸಂದೇಶಗಳು ಕೆಲವೊಮ್ಮೆ ಫಾರ್ವರ್ಡ್ ಮುಖಾಂತರ, ಶೇರ್ ಮೂಲಕ ನಮಗೇ ರಿಪೀಟ್ ಹೊಡೆಯಬಹುದು. ಇದರಲ್ಲಿ ಮುಳ್ಳಿನ ಹಾದಿಗಳೇ ಹೆಚ್ಚು. ಸಂಚರಿಸುವಾಗ ತುಂಬಾ ಜಾಗರೂಕರಾಗಿರಬೆಕು. ಗಲ್ಲಕ್ಕೆ ಕೈ ಇಟ್ಟು ಚಿಂತಿಸ ಬೇಕಾದ ವಾರ್ತೆಗಳು ಸಾಧಾರಣವೆಂಬಂತೆ ಒಳ ಪುಟದ ಮೂಲೆ ಸೇರಿರುತ್ತದೆ. ದಿನ ನಿತ್ಯ ಒಂದಲ್ಲಾ ಒಂದು ವಾರ್ತೆ ಇದ್ದೇ ಇರುತ್ತದೆ. ಮೊನ್ನೆ ತಾನೆ ಪೇಪರಲ್ಲಿ ಬಂದ ವಾರ್ತೆ ನೋಡಿ ನನ್ನ ಮೈ ಜುಮ್ ಎಂದಿತು. ವೆಲ್ಡಿಂಗ್ ಮಾಡುತಿದ್ದ ಜೆರ್ರಿ ಫ್ರಾನ್ಸಿಸ್ ಎಂಬ 18 ವಯಸ್ಸಿನ ಕೇರಳದ ಬಾಲಕ ಮಂಗಳೂರಿನ 15 ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಚಾಟಿಂಗ್ ಮೂಲಕ ಪ್ರೀತಿಸಿ, ಮೋಸ ಮಾಡಿ ಕಿಡ್ನ್ಯಾಪ್ ಮಾಡಿದ್ದ. ಫೇಸ್ಬುಕ್ ನಲ್ಲಿ ಪರಿಚಯವಾದ ಹುಡುಗ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯ ಮಾನವನ್ನೂ ದೋಚಿದ. ಚಿನ್ನವನ್ನೂ ದೋಚಿದ. ಇಂತಹ ವಾರ್ತೆಗಳು ಮಾಮೂಲಾಗಿ ಬಿಟ್ಟಿದೆ. ಫೇಸ್ಬುಕ್ ... ಇದರಲ್ಲಿ ಮುಖ ಪರಿಚಯವೂ ಇಲ್ಲದ ಯಾರ್ಯಾರೋ ಜೊತೆ ಸಂಪರ್ಕ ಮಾಡುವುದರಿಂದ ಸ್ವತಹಾ ಅಪಾಯವನ್ನು ಆಹ್ವಾನಿಸುತ್ತಾರೆ. ಶಾಲಾ ಕಾಲೇಜು ಕಲಿಯುವ ಹೆಣ್ಣು ಮಕ್ಕಳು ಸ್ವತಹ ಮೊಬೈಲ್ ಇಲ್ಲದಿದ್ದರೆ ಮನೆಯಲ್ಲಿ ಇನ್ಟರ್ನೆಟ್ ಸೌಲಭ್ಯವಿಲ್ಲದಿದ್ದರೆ, ಸೈಬರ್ ಕೆಫೆಗಳಲ್ಲಿ ಯಾರ್ಯಾರೊಂದಿಗೆ ಚಾಟಿಂಗ್ ಮಾಡಿ ಸಮಯ್ ದುರುಪಯೋಗ ಪಡಿಸಿ ಕೊಳ್ಳುತ್ತಾಳೆ. ಯಾರಾದರೂ ಕೇಳಿದರೆ ಸ್ಪೆಶಲ್ ಕ್ಲಾಸ್ ಎಂಬ ನೆಪ ಕಟ್ಟುತ್ತಾಳೆ.

ನನಗೆ ಅಂತರ್ಜಾಲವೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲಿ ಸಾಮಾಜಿಕ ತಾಣವೆಂದರೆ ಅಚ್ಚು ಮೆಚ್ಚು. ಮೊದಲು "ಆರ್ಕುಟ್" ನಲ್ಲಿ ಸ್ಕ್ರಾಪ್ ಬುಕ್ ವೀಕ್ಷಿಸುವುದರಲ್ಲೂ ನನ್ನ ಕೈವಾಡವಿತ್ತು. ಕ್ರಮೇಣ ಫೇಸ್ಬುಕ್ ನಲ್ಲೂ ಯಾರದೋ ಸಹಾಯದಿಂದ ಹೊಸತೊಂದು ಪ್ರೊಫೈಲನ್ನು ಪ್ರಾರಂಭಿಸಿದೆ. ಅವತ್ತು ನನ್ನಲಿದ್ದದ್ದು ಫ್ಯಾಮಿಲಿ ಫ್ರೆಂಡ್ ಕೊಟ್ಟ ಮೆಮೊರಿ ಕೂಡ ವರ್ಕ್ ಆಗದ ಕ್ಲಾಸಿಕ್ ಕ್ಯಾಮೆರ ಸೆಟ್ ಕ್ಲ್ಯಾರಿಟಿ ಕೂಡ ಇಲ್ಲದ ಫೊಟೊಗಳು ಡಿಲೀಟ್ ಮಾಡಲು ಮನಸ್ಸು ಬಾರದೆ ಇಂದೂ ಕೂಡ ನನ್ನ ಪ್ರೊಫೈಲ್ನಲ್ಲಿದೆ. ಅವತ್ತು ಆದಿತ್ಯವಾರವಾಗಿರಬೇಕು ಅಥವಾ ಯಾವುದೋ ರಜಾದಿನವಾಗಿರ ಬೇಕು. ಫ್ರೀ ಟೈಮಲ್ಲಿ ಫ್ರೆಂಡ್ಸ್ ಜೊತೆ ಸುತ್ತುವುದು, ಆಟವಾಡಲು ಗ್ರೌಂಡ್ ಗೆ ಹೋಗುವುದೂ ಇವೆಲ್ಲದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಅಂತೂ ಒಂದು ನೆಟ್ ಕಾರ್ಡ್ ತಂದು ನೆಟ್ ರಿಚಾರ್ಜ್ ಮಾಡಿ ಫೇಸ್ ಬುಕ್ ತೆರೆದಾಗ ಎರಡು ಮೂರು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದರಲ್ಲೂ ಫಾತಿಮಾಳ ರಿಕ್ವೆಸ್ಟ್ ನನ್ನಲ್ಲಿ ಇನ್ನಷ್ಟೂ ಅಚ್ಚರಿ ಮೂಡಿಸಿತ್ತು. ಎಕ್ಸೆಪ್ಟ್ ಮಾಡಿ ಚಾಟಿಂಗ್ ಆರಂಭಿಸಿದೆ, ಹಾಯಿ ಎನ್ನುವುದಕ್ಕೆ ತಕ್ಷಣವಲ್ಲದಿದ್ದರೂ ಕ್ರಮೇಣ ರಿಪ್ಲೈ ಕೂಡಾ ಬಂದು ಬಿಟ್ಟಿತ್ತು. ಪಂಜರದಿಂದ ತಪ್ಪಿಸಿಕೊಂಡ ಗಿಳಿಯಂತೆ ನನ್ನ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಹೀಗೆ ದಿನಗಳುರುಳಿದವು. ಒಂದು ತಿಂಗಳ ನಂತರ ಅವಳೇ ಹೇಳಿಬಿಟ್ಟಳು ಅವಳು ಅವಳಲ್ಲ. ಅವಳು ಅವನು ನನ್ನ ಫ್ರೆಂಡ್ ಎಂದು. ಅಂದಿನಿಂದ ಯಾವ ಹುಡುಗಿಯರಿಗೂ ಮೆಸೇಜ್ ಮಾಡಲು ಮನಸ್ಸೇ ಇರುತ್ತಿರಲಿಲ್ಲ, ಮಾತ್ರವಲ್ಲ ಸಾಮಾಜಿಕ ತಾಣಗಳ ಮೇಲಿರುವ ವಿಶ್ವಾಸವು ಕಡಿಮೆಯಾಗಿತ್ತು. 

ಸರಿಯಾಗಿ ಫೇಸ್‍ಬುಕ್ ಬಳಸಲು ತಿಳಿಯುವ ಪ್ರತಿಯೊಬ್ಬರಿಗೂ ಹೆಚ್ಚಾಗಿ ಎರಡು ಮೂರು ಅಕೌಂಟ್‍ಗಳು ಇರುತ್ತದೆ. ಅಂತೂ ಇತ್ತೀಚಿನ ದಿನಗಳಲ್ಲಿ ಫೇಕ್ ಅಕೌಂಟ್‍ಗಳು ಹೆಚ್ಚು ಸದ್ದು ಮಾಡುತ್ತಿದೆ. ಅಲ್ಲ ಇತ್ತೀಚೆಗಷ್ಟೇ ಅಲ್ಲ ಫೇಸ್‍ಬುಕ್ ಪ್ರಾರಂಭಿಸಿದ್ದಲ್ಲಿಂದಲೂ ಫೇಕ್ ಅಕೌಂಟ್‍ಗಳಿತ್ತು. ಆದರೆ ಹಿಂದೆ ಹೆಣ್ಣಿನ ಹೆಸರಿನಲ್ಲಿ ವ್ಯಕ್ತಿಪರ ಸಂದೇಶಗಳು ಪ್ರೀತಿಯ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ ಇತ್ತೀಚೆಗೆ ಯಾರದೋ ಹೆಸರಿನಲ್ಲಿ ಬಂದು ಕೋಮುವಾದದ ಬೆಂಕಿಗೆ ಪೆಟ್ರೋಲ್ ಹಾಕುತ್ತಾರೆ. ಧರ್ಮ ಸಂಘಟನೆಯ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಾರೆ. ಅವರಿಗೊಂದು ನಂಬಿಕೆ ಇರುತ್ತದೆ, ಇದು ನಮ್ಮದೇ ಲೋಕ, ಇಲ್ಲಿ ನಾವೇ ರಾಜಕುಮಾರರು ಇಚ್ಚಿದ್ದನ್ನೆಲ್ಲಾ ಗೀಚಬಹುದು ನಾವು ಗೀಚಿದ್ದೇ ಇಲ್ಲಿಯ ನಿಯಮ ಹೇಳುವವರೂ ಇಲ್ಲ ಕೇಳುವವರೂ ಇಲ್ಲ ಯಾರಾದರೂ ಕೇಳಿದರೆ ಒಂದು ಬ್ಲೋಕ್ ಮೂಲಕ ಅವರ ತಂಟೆ ಮುಗಿಯುತ್ತದೆ. ಈ ವಿಶ್ವಾಸವು ಬರೀ ಭ್ರಮೆಯಾಗಿದೆ. 

ನಾವು ಉಪಯೋಗಿಸುತ್ತಿರುವ ಮೊಬೈಲ್‍ನ ಐ.ಪಿ ಎಡ್ರಸ್ ಸೈಬರ್ ಸೆಲ್‍ನಿಂದ ನೋಡಿ ಅದರಲ್ಲಿರುವ ಸಿಮ್ ಯಾವುದು? ಯಾರ ಹೆಸರಿನಲ್ಲಿದೆ? ಯಾವ ಮೊಬೈಲ್ ಬಳಸುತ್ತಿದ್ದಾನೆ? ಇವನು ಈಗ ಎಲ್ಲಿದ್ದಾನೆ ಎಂದು ಸುಲಭವಾಗಿ ಪತ್ತೆ ಹಚ್ಚುವ ತಂತ್ರಜ್ಞಾನವಿದೆ. ಸರಕಾರದ ಆದೇಶದಂತೆ ಅತೀ ಹೆಚ್ಚು ಫೇಸ್‍ಬುಕ್ ಖಾತೆಗಳನ್ನು ತಡೆಯಲ್ಪಟ್ಟಿದ್ದು ಜ್ಯಾತ್ಯಾತೀತ ರಾಷ್ಟ್ರವಾದ ಭಾರತದಲ್ಲಾಗಿದೆ ಸರಕಾರದ ಆದೇಶದಂತೆ ಭಾರತದಲ್ಲಿ 5,000 ಖಾತೆಗಳು ತಡೆಯಲ್ಪಟ್ಟಿದೆ. ಅದರಲ್ಲಿ ಹೆಚ್ಚಾಗಿ ಕೋಮುವಾದ, ವ್ಯಕ್ತಿಯ ಕುರಿತು ಅಪಪ್ರಚಾರ ಮತ್ತು ಕಾಮ ಸಂದೇಶಗಳನ್ನು ಕಳುಹಿಸುವ ಖಾತೆಗಳಾಗಿದೆ. ಇಂತಹಾ ಸಂದೇಶಗಳು ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಗ್ರೂಪ್ ಮುಖಾಂತರವೂ ಹರಿದಾಡುತ್ತಿದೆ. ಇಂತಹಾ ಸಂದೇಶಗಳಿಗೆ ಮುಗಿ ಬೀಳದೇ ನಾವೆಲ್ಲಾ ಭಾರತೀಯರು, ನಮ್ಮೆಲ್ಲರಲ್ಲಿ ಹರಿದಾಡುತ್ತಿರುವ ರಕ್ತದ ಬಣ್ಣವೂ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಕುಡಿಯುವ ನೀರೂ ಒಂದೇ, ಆಡುತ್ತಿರುವ ಭಾಷೆ ಬೇರೆಯಾದರೂ ಅದರಲ್ಲಿರುವ ವಿಷಯವು ಒಂದೇ ಹೀಗಿರುವ ನಾವುಗಳ ಮಧ್ಯೆ ಏಕೆ ವೇಶ ದೋಷ ರೋಶಗಳ ಕೋಶ? ಭಿನ್ನತೆಯನ್ನು ಆಶಿಸುವ ಮನಸ್ಸುಗಳು ಪ್ರೀತಿಯನ್ನು ಬೆಳೆಸಲಿ ಕೋಮು ಬರೆಯುತ್ತಿರುವ ಕೈಗಳು ಶಾಂತಿಯನ್ನು ಬರೆಯಲಿ. ಪ್ರಗತಿಯನ್ನು ಕಾಯಲಿ. ಸ್ನೇಹದ ಸಂದೇಶವನ್ನು ಸಾರಲಿ.

ಫೇಸ್‍ಬುಕ್‍ನಿಂದ ಕಾರ್ಯಕರ್ತರು ಸಮಯ ವ್ಯರ್ಥ ಮಾಡುತ್ತಿದ್ದಾರೆಂದು ಮನಗಂಡು ಹಲವು ಕಾರ್ಯಾಲಯಗಳಲ್ಲಿ ಫೇಸ್‍ಬುಕ್‍ನ್ನು ನಿಷೇಧಿಸಲಾಗಿತ್ತು. ಹೊಸತೊಂದು Profile ಚಿತ್ರ ಹಾಕಿ ಇನ್ನೊಬ್ಬರಿಗೆ ಟ್ಯಾಗ್ ಮಾಡಿ ಮತ್ತೊಬ್ಬರಲ್ಲಿ ಲೈಕ್ ಕೇಳಿ ಕಮೆಂಟ್‍ಗೆ ಪ್ರತಿ ಕಮೆಂಟ್ ಹಾಕುತ್ತಿರುವುದು ಸಮಯ ವ್ಯರ್ಥವಲ್ಲದೆ ಮತ್ತಿನ್ನೇನು? ಪೇಜ್ ಅಥವಾ ಗ್ರೂಪ್ ನಿರ್ಮಿಸಿ ಒಬ್ಬೊಬ್ಬರನ್ನೇ ಅವಹೇಳಿಸಿ ಕಾಮಿಡಿ ಸ್ಟೇಟಸ್ ಅಪ್‍ಡೇಟ್ ಮಾಡುವುದು ವ್ಯರ್ಥವಲ್ಲವೇ? ಆದರೆ ಬ್ಲೂವೇವ್ಸ್‍ನಂಥಹಾ ಹೊಸ ಪುಟಗಳು ತೆರೆದು ಪ್ರಗತಿಯ ಬೀಜವನ್ನು ಬಿತ್ತುತ್ತಿರಲು ಅದರ ಸಂದೇಶವನ್ನು ಆಲಿಸುತ್ತಿದ್ದರೆ ಹೇಗೆ ತಾನೇ ಸಮಯ ವ್ಯರ್ಥವಾದೀತು? ಇಂತಹಾ ಒಳ್ಳೆಯ ಸಂದೇಶಗಳನ್ನು ಕಳುಹಿಸಲು ಜನರನ್ನು ಒಳಿತಿನೆಡೆಗೆ ಕರೆಯಲು ಅವಕಾಶವಿರುವಾಗ ಸಾಮಾಜಿಕ ತಾಣ ಬಳಕೆದಾರರು ಇದಕ್ಕೆ ವಿರುದ್ದ ರೀತಿಯಲ್ಲಿ ಚಲಿಸುತ್ತಿದ್ದಾರೆನ್ನುವುದೇ ನಗ್ನ ಸತ್ಯ!

Photoshop ಮೂಲಕ ದಿನಕ್ಕೊಬ್ಬರ ಅಸಲಿ ಮೂಗನ್ನು ತೆಗೆದು ಕೃತಕ ಬಾಯಿಗಳನ್ನಿಟ್ಟು ಪರರ ಕೊರತೆಗಳನ್ನು ರೌಂಡಪ್ ಮಾಡಿ ತೋರಿಸುವವರು ಒಂದೆಡೆಯಾದರೆ ಕಪ್ಪು ಮುಖದವನು ಸೆಲ್ಫಿ ತೆಗೆದು ಪಿಕ್‍ಸಾರ್ಟ್ ಮೂಲಕ ಬಣ್ಣ ಬದಲಿಸಿದರೆ ವಾವ್! ವಾಟ್ ಎ ಬ್ಯೂಟಿ ನೈಸ್ ಮಚ್ಚಾ ಸೂಪರ್ ಡಾರ್ಲಿಂಗ್ ಎನ್ನುವ ಕಮೆಂಟ್ ಹಾಕುವವರು ಇನ್ನೊಂದೆಡೆ. ಆದರೆ ಕೆಲವು photo ಗಳನ್ನು ಎಡಿಟ್ ಮಾಡಿ ಹೊಸ ಶೋರ್ಟ್ ಫಾರ್ಮ್ ಹಾಕಿ ವಾಟ್ಸಪ್ ಮೂಲಕ ಫೇಮಸ್ ಆಗಲು ಇಚ್ಚಿಸುವವರೂ ಇದ್ದಾರೆ. ಇನ್ನು ಕೆಲವರು ಕಂಡದ್ದನ್ನು ಕೇಳಿದ್ದನ್ನು ಎಲ್ಲವನ್ನೂ ಕೇಳದೇ ನೋಡದೇ ಶೇರ್ ಮಾಡುವವರೂ ಇದ್ದಾರೆ ಆದುದರಿಂದಲೇ ವಾಟ್ಸಪ್ ಮೂಲಕ ಹೆಚ್ಚು ಗಾಳಿ ಸುದ್ದಿಗಳು ಹರಡುತ್ತಿದೆ. ನಾವು ಮಾಡುತ್ತಿರುವ ಪ್ರತಿಯೊಂದು ಟೆಚ್ ಕೂಡಾ ಅಮೂಲ್ಯವಾದುದು. ನಾವು ಶೇರ್ ಮಾಡುತ್ತಿರುವ ಪ್ರತಿಯೊಂದನ್ನೂ ಶೇರ್ ಮಾಡುವುದಕ್ಕಿಂತ ಮುಂಚೆ ಎರಡು ಮೂರು ಬಾರಿ ನೋಡಿರಬೇಕು? ಇದರ ಮೂಲ ಎಲ್ಲಿಂದ? ಇದರಿಂದ ಏನಾದರೂ ಉಪಯೋಗಗಳಿವೆಯಾ? ಇದು ಸತ್ಯ ಸಂಗತಿಯೇ? ಎಂದು ಸರಿಯಾಗಿ ತಿಳಿದ ನಂತರ ಅದನ್ನು ಶೇರ್ ಮಾಡಬೇಕು. ಇಲ್ಲದಿದ್ದರೆ ಅದರಿಂದ ಬಹಳ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಒಂದು ಮೆಸೇಜನ್ನು ಬರೆದು ಕೊನೆಗೆ ಇದನ್ನು 10 ಜನರಿಗೆ ಕಳುಹಿಸಿದರೆ ನಿಮ್ಮ ಸ್ಟೇಟಸ್ ಬದಲಾಗುತ್ತದೆ, ಅಥವಾ ಕಳುಹಿಸದಿದ್ದರೆ ನಿಮ್ಮ ವಾಟ್ಸಪ್ ಬ್ಲೋಕ್ ಆಗಲಿದೆ ಎನ್ನುವಂಥಹಾ ಗಾಳಿಸುದ್ದಿಗಳಿಗೆ ಕಿವಿ ಕೊಡಬಾರದು. ಅಪ್ಪಿ ತಪ್ಪಿ ನಾವು 10 ಜನರಿಗೆ ಕಳುಹಿಸಿದರೆ ಆ 10 ಜನರು ಹತ್ತು ಹತ್ತು ಜನರಿಗೆ ಕಳುಹಿಸಿದರೆ ಈ ಗಾಳಿಸುದ್ದಿಯೂ ಸರಪಳಿಯೋಪಾದಿಯಲ್ಲಿ ಸಂಚರಿಸುತ್ತಾ ಇರುತ್ತದೆ. ಹೀಗೆ ಸ್ಪಷ್ಟವಲ್ಲದ ಸಂದೇಶಗಳನ್ನು ಅಪಘಾತ ಚಿತ್ರಗಳನ್ನು ಅಶ್ಲೀಲ ಚಿತ್ರಣಗಳನ್ನು ಕಳುಹಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅಂಥಹಾ ಸಂದೇಶಗಳು ಬಂದು ಬಿಟ್ಟರೆ ಅದನ್ನು ತಕ್ಷಣವೇ ಡಿಲೀಟ್ ಮಾಡಿ ಬಿಡಬೇಕು .

ಸಾಮಾಜಿಕ ತಾಣ ಅದರಲ್ಲಿ ದಿನನಿತ್ಯ ಹಾಳಾಗುವ ಜನರು ಹೆಚ್ಚುತ್ತಲೇ ಇದೆ. ಮಾನವನ ನಿತ್ಯ ಜೀವನದಲ್ಲಿ ಅತ್ಯಾವಶ್ಯಕವಾದರೂ ಇದನ್ನು ದುರುಪಯೋಗ ಪಡಿಸುವಲ್ಲಿ ಹೆಚ್ಚು ಜನರು ಯಶಸ್ವಿಯಾಗಿರುತ್ತಾರೆ. ಎಲ್ಲಿ ನೋಡಿದರೂ ತಪ್ಪುಗಳೇ ರಾರಾಜಿಸುತ್ತಿದೆ. ಹೌದು ಹಿಂದೆ ತಪ್ಪು ಮಾಡಲು ನಾವು ಪಾಪಗಳತ್ತ ಹೋಗ ಬೇಕಾಗಿತ್ತು ಆದರೆ ಇಂದು ಪಾಪಗಳೇ ನಮ್ಮ ಬೆನ್ನು ಹತ್ತುತ್ತಿದೆ. “ವೆಕ್ ಅಫಿ” ಎಂಬ ಯ್ಯಾಂಟಿ ವೈರಸ್ ಕಂಪೆನಿ ನಡೇಸಿದ ಅಂಕಿ ಅಂಶದ ಪ್ರಕಾರ ಕೌಮಾರ್ಯ ಪ್ರಾಯದ ಮಕ್ಕಳಿಂದ ಮತ್ತು ಯುವಕರಿಂದ ಅತ್ಯಂತ ಹೆಚ್ಚಾಗಿ ಅಂತರ್ಜಾಲವು ದುರುಪಯೋಗವಾಗುತ್ತಿದೆ. ಇಂತಹಾ ತಾಣಗಳಿಂದ ದಿನೇ ದಿನೇ ಹಾಳಾಗುತ್ತಿರುವುದು ಬರೀ ಹುಡುಗರು ಮಾತ್ರವಲ್ಲ ಹೆಚ್ಚಾಗಿ ಹುಡುಗಿಯರೂ ದಾರಿ ತಪ್ಪುತ್ತಿದ್ದಾರೆ. Porn ಸೈಟ್‍ಗಳನ್ನು ವೀಕ್ಷಿಸುತ್ತಿರುವ ಭಾರತೀಯರಲ್ಲಿ ಶೇಖಡಾ 25 ಜನರು ಮಹಿಳೆಯರು ಎಂದು ಇತ್ತೀಚೆಗೆ “ಕ್ವಾರ್ಟ್” ಎನ್ನುವಂಥಹಾ ಓನ್‍ಲೈನ್ ಮ್ಯಾಗಝೀನ್ ನಡೆಸಿದ ಅಂಕಿ ಅಂಶದ ಪ್ರಕಾರ ತಿಳಿದುಬಂದಿದೆ ಇದು Porn hub ಎಂಬ ಪ್ರಮುಖ Porn site ನೀಡಿದ ವರದಿಯಾಗಿದೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಅದರಲ್ಲಿ ಅತೀ ಹೆಚ್ಚು ಮೊಬೈಲ್ ಬಳಸುವವರಲ್ಲಿ ನಮ್ಮ ದೇಶವು ಎರಡನೇ ಸ್ಥಾನದಲ್ಲಿದೆ. 49.9 ಶೇ ಜನರು ಮೊಬೈಲ್ ಮೂಲಕ ಬಳಸುತಿದ್ದರೆ, 47.5 ಶೇ ಜನರು ಡೆಸ್ಕ್ ಟಾಪ್ ಮೂಲಕ ಮತ್ತು ಶೇ 2.6 ಟ್ಯಾಬ್ ಮೂಲಕ ಉಪಯೋಗಿಸುತ್ತಾರೆ. 

ನಾಚಿಕೆಗೇಡಿನ ವಿಷಯವೇನೆಂದರೆ ಹದಿಹರೆಯದ ಮಕ್ಕಳೂ ಕೂಡ ಇಂತಹ ತಂತ್ರಗಳಿಗೆ ಮುಗಿಬೀಳುತಿದ್ದಾರೆ. ಕೌಮಾರ್ಯದಲ್ಲಿ ದೈಹಿಕ ಹಾಗೂ ಭಾವನಾತ್ಮಕ ವಿಕಸನಗಳು ನಡೆಯುತಿದ್ದು ದೇಹದಲ್ಲಿ ಉತ್ಪಾದನೆಯಾಗುವ ಹಾರ್ಮೋನುಗಳು ಲೈಂಗಿಕ ಭಾವನೆಗಳನ್ನು ಕೆರಳಿಸುತ್ತವೆ. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಪರಸ್ಪರ ಲೈಂಗಿಕಾಸಕ್ತಿ ಮೂಡುವ ಪ್ರಾಯವದು. ಲೈಂಗಿಕ ವಿಕ್ರತಿ ಮತ್ತು ರತಿ ಕ್ರೀಡೆಗಳನ್ನು ತೋರಿಸುವ ಪೋರ್ನ್ ಸೈಟ್ ಗಳು ಇಂದಿನ ಮಕ್ಕಳ, ಯುವಕರ, ಅಂತರ್ಜಾಲ ಬಳಕೆದಾರರ ದಾರಿಗೆಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದು ಮಾನವನನ್ನು ದಾರಿ ತಪ್ಪಿಸಬಲ್ಲ ಅವನ ಜೀವನವನ್ನು ಪರಾಜಿತಗೊಳಿಸಬಲ್ಲ ಅತಿದೊಡ್ಡ ವಿಪತ್ತಾಗಿದೆ. ಮಾತ್ರವಲ್ಲ ಇತ್ತೀಚಿಗೆ ಸಮಾಜಿಕ ತಾಣದಲ್ಲಿ ಹೆಚ್ಚಾಗಿ ವಾಟ್ಸಪ್ ನಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕಲ್ಪಿಸದೆ ಹಿಡನ್ ಕ್ಯಾಮೆರಾಗಳಿಂದ ತೆಗೆದ ಪ್ರಸವ ವಿಡಿಯೋ ಮುಂತಾದ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳು ಹರಿದಾಡುತಿತ್ತು ಅನ್ನುವುದೇ ತಲೆ ತಗ್ಗಿಸ ಬೇಕಾದ ವಿಷಯ. ಕೆಲವೊಮ್ಮೆ ತಿಳಿಯದೆ ಯಾವುದೋ ಕ್ಲಿಪ್ಪನ್ನು ಕ್ಲಿಕ್ಕಿಸಿ ಅದರ ಬಲೆಗೆ ಬಿದ್ದು, ಕೊನೆಗೆ ಅಂತಹ ತಾಣಗಳ ಸಕ್ರೀಯ ಬಳಕೆದಾರನಾಗುತ್ತಾನೆ. ಹೆಚ್ಚಾಗಿ ಮೊಬೈಲ್ ಬಳಕೆದಾರರು ಮಾಡಿದ ತಪ್ಪಗಳನ್ನು ಪುನಾರಾವರ್ತಿಸುತ್ತಿದ್ದಾರೆ ಎಂದು ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯ ತಜ್ನರು ನಡೆಸಿದ ಅದ್ಯಾಯದಿಂದ ವರದಿಯಾಗಿದೆ. ಇಂದಿನ ಅತ್ಯಾಚಾರ ಕ್ರತ್ಯಗಳಿಗೆ ಇಂತಹಾ ತಾಣಗಳು ಕಾರಣವಾಗುವುದನ್ನೂ ಮನಗೊಂಡ ಕೇರಳ ಸರಕಾರ ೬೫೨ ಅಶ್ಲೀಲ ವೆಬ್ ಸೈಟ್ ಗಳನ್ನು ನಿಶೇದಿಸುವಂತೆ ಕೇಂದ್ರದ “CERTIN” ( Computer Emergency Response Team India) ಗೆ ಮನವಿ ಸಲ್ಲಿಸಿದೆ. ಭಾರತದ ಅಶ್ಲೀಲ ತಾಣಗಳಿಗೆ ವಿರೋಧ ಹೇರುವುದಾಗಿ ಕೇಂದ್ರ ಸರಕಾರ ಅದರ ಪ್ರಥಮ ಘಟ್ಟದಂತೆ ಭಾರತದ ಇಂಟರ್ನೆಟ್ ಆಂಡ್ ಮೊಬೈಲ್ ಅಸೋಶಿಯೇಶನ್ ಆಫ್ ಇಂಡಿಯಾದಿಂದ ಅಶ್ಲೀಲ ತಾಣಗಳ ಪಟ್ಟಿ ಆವಶ್ಯ ಪಟ್ಟಿದ್ದಾರೆ. ವಿದೇಶ ರಾಷ್ಟ್ರಗಳಲ್ಲಿ ಪೋರ್ನ್ ಸೈಟ್ ಗಳು ವಿಧೇಯವಾದರೂ ಇವು ಭಾರತೀಯ ಸಂಸ್ಕ್ರತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಮಾತ್ರವಲ್ಲ ಸಾಮಾಜಿಕ ತಾಣಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಅಶ್ಲೀಲ ದ್ರಶ್ಯಗಳನ್ನು ಹರಿದಾಡುವುದೂ ಅಪರಾಧವೆಂದು ಪರಿಗಣಿಸಿ, ದ್ರಶ್ಯಗಳನ್ನು ರವಾನಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಲು ತಿದ್ದುಪಡಿ ಕಾಯಿದೆಯಡಿ ಅವಕಾಶ ಕಲ್ಪಿಸಲಾಗುತ್ತದೆ. ಅಶ್ಲೀಲ ಚಿತ್ರಗಳ ರವಾನೆಗೆ ತಡೆ ಹಾಕಲು ರಾಜ್ಯ ಸರಕಾರವು ಮನವಿ ಮಾಡಿದ್ದು, ಈ ಕುರಿತು ಕೇಂದ್ರ ಸರಕಾರವು ಚಿಂತನೆ ನಡೆಸಿದೆ. ಇಂತಹಾ ಕೆಟ್ಟ ಸಂದೇಶಗಳನ್ನು ಶೇರ್ ಮಾಡದೆ, ಕೆಟ್ಟ ತಾಣಗಳಿಗೆ ಮುಗಿಬೀಳದೆ ಇನ್ನೆಂದೂ ಇಂತಹ ತಾಣಗಳಿಗೆ ಹೋಗಲಾರೆನು, ಇಂತಹಾ ಸಂದೇಶಗಳನ್ನು ಕಳುಹಿಸಲಾರೆನು, ಅಶ್ಲೀಲ ಸಂದೇಶಗಳನ್ನು ಕಳುಹಿಸುವವರನ್ನು ಬ್ಲಾಕ್ ಮಾಡುವೆನು ಎಂದೊ ಪ್ರತಿಜ್ನೆ ಮಾಡ ಬೇಕು. ಅಶ್ಲೀಲ ಚಿತ್ರಗಳನ್ನು ಕಳುಹಿಸ ಬಾರದೆಂದು, ಅದನ್ನು ನೋಡ ಬಾರದೆಂದೂ ಸ್ನೇಹಿತರಿಗೆ ಸದುಪದೇಶ ನೀಡ ಬೇಕು. ನಮ್ಮ ಮಕ್ಕಳಿಗೆ ಅದನ್ನು ನೋಡಲು ಅವಕಾಶ ಕೊಡಬಾರದು. ಚಿಕ್ಕ ಮಕ್ಕಳಿಗೆ ಸ್ವಂತವಾದ ಮೊಬೈಲನ್ನು ಕೊಡ ಬಾರದು. ಕೊಡುವುದಾದರೂ ಇನ್ಟರ್ನೆಟ್ ಸೌಲಭ್ಯವಿರುವ ಮೊಬೈಲ್ ನೀಡ ಬಾರದು. ಇಂದು ಶಾಲಾ ಚಟುವಟಿಕೆಗಳಿಗೆ ಕಂಪ್ಯೂಟರ್ ಅತ್ಯಾವಶ್ಯಕವಾಗಿರುವುದರಿಂದ ಅದರಲ್ಲಿ ಇಂಟರ್ನೆಟ್ ಬಳಕಗೆ ಅವಕಾಶವಿದ್ದರೆ ಮಾತ ಪಿತರು ಅದರ ಕುರಿತು ಸಂಪೂರ್ಣವಾಗಿ ತಿಳಿದಿರಬೇಕು.

ಪ್ರತಿಯೊಂದು ಮನೆಯವರೂ ತಮ್ಮಲ್ಲಿ ಬೆಳೆಯುತ್ತಿರುವ ನವ ಪೀಳಿಗೆಯನ್ನು ಉತ್ತಮ ದಾರಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಬೇಕು. ಇಂದಿನ ಯುವಕರಾದ ನಾವು ನಾಳೆಯ ಯುವಕರಿಗೆ ಅಂದರೆ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಶಾಂತಿ, ಸ್ನೇಹ, ಸಹೋದರತೆ ಕೌಟುಂಬಿಕ ಸಂಬಂಧಗಳು ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಬೆಳೆಸಲು ಪ್ರಯತ್ನಿಸಬೇಕು. “ A Society never destroyed by the inactivities of Rascals, but it destroyed by the inactivities of Good people” "ಕೆಟ್ಟ ಕೆಲಸಗಳಿಂದ ಸಮಾಜ ಕೆಡುವುದಿಲ್ಲ ಆದರೆ ಸಜ್ಜನರು ಕೆಲಸ ಮಾಡದಿರುವುದರಿಂದ ಸಮಾಜ ಕೆಡುತ್ತದೆ" ಎಂಬ ಚಿಂತಕನೊಬ್ಬನ ಮಾತು ಚಿಂತನಾರ್ಹ. ಕೆಟ್ಟವರಿಗೆ ಒಳ್ಳೆಯ ದಾರಿಯನ್ನು ನಾವು ತೋರಿಸಬೇಕು. ಪ್ರತಿಯೊಬ್ಬನ ಮುಂದೆ ಎರಡು ದಾರಿಗಳಿರುತ್ತವೆ. ಕೆಟ್ಟದಾರಿಯು ಒಳ್ಳೆಯ ದಾರಿಗಿಂತ ಎಷ್ಟೇ ಸುಲಭವಾಗಿದ್ದರೂ, ಸಂತಸವನ್ನು ನೀಡುತಿದ್ದರೂ ನಾವು ಸತ್ಪಥದ ದಾರಿಯಲ್ಲೇ ಹೋಗಬೇಕು. 

ಸಮಾಜಿಕ ತಾಣಗಳಲ್ಲಿ, ಗ್ರೂಪ್ ಗಳಲ್ಲಿ ಬರೇ ಹಾಯ್, ಹೆಲೋ ಎನ್ನುವಂತಹ ಸಂದೇಶಗಳನ್ನು ಕಳುಹಿಸುವುದನ್ನು ಬಿಟ್ಟು ಸಮಾಜಿಕ ತಾಣಗಳನ್ನು ಸಮಾಜಕ್ಕೆ ಉಪಯೋಗವಾಗುವಂತಹ ಮಾಹಿತಿಯನ್ನು ಕಳುಹಿಸ ಬೇಕು. ಅದಕ್ಕೂ ಸಾಧ್ಯವಾಗುತಿಲ್ಲದಿದ್ದರೆ ನಾಡಿನ ಪ್ರಗತಿಯನ್ನು, ಸಮಾಜಿಕ ಕ್ರಾಂತಿಯನ್ನು ಬಯಸುವ ಬ್ಲೂ ವೇವ್ಸ್ ನಂತಹ ಪುಟಗಳಿಗೆ ಬೆಂಬಲ ನೀಡಬೇಕು. ಆಧುನಿಕ ತಂತ್ರಜ್ನಾನಗಳನ್ನು ಅತಿಯಾಗಿ ಬಳಸದೆ, ಮಿತವಾಗಿ ಬಳಸಬೇಕು. ಅತಿಯಾಗಿ ಬಳಸುವುದರಿಂದ ಜ್ನಾಪಕ ಶಕ್ತಿಯ ಮೇಲೆ ಪರಿಣಾಮ ಬೀಳುತ್ತದೆ ಎಂದು ಮಲೇಶ್ಯಾದ ಸಂಶೊಧಕರು ತಿಳಿಸಿದ್ದಾರೆ. ಕೆಟ್ಟ ಸಂದೇಶಗಳನ್ನು ಆಲಿಸದೆ, ಪರರ ಕೊರತೆಗಳನ್ನು ಎತ್ತಿ ಹೇಳದೇ, ಸಮಯ ವ್ಯರ್ಥವಾಗದಂತೆ ಸತ್ಯದೆಡೆಗೆ ಜನರನ್ನು ಆಹ್ವಾನಿಸುತ್ತಾ ಬಳಸ ಬೇಕಾದ ರೀತಿ ನೀತಿಗಳನ್ನು ತಿಳಿದು ಸಮಾಜಿಕ ತಾಣಗಳನ್ನು ಉಪಯೋಗಿಸ ಬೇಕು

ಇದು ನನ್ನ ಮೊದಲ ಲೇಖನವಾದರೆ ಇಂತಹ ಹಲವು ಲೇಖನಗಳು ಮೊದಲಾಗಿ ನಂತರದ್ದಾಗಿ ಕೊನೆಗೊಮ್ಮೆ ಯಶಸ್ವಿ ಲೇಖಕನಾದರೆ ಬರೆಯಲು ಅರಿಯದವರಿಗೆ ಲೇಖನಿ ಕೊಟ್ಟು ಅವಕಾಶ ಕಲ್ಪಿಸಿದ ಬ್ಲೂ ವೇವ್ಸ್ ಗೆ ನನ್ನ ಮನದಾಳದ ಧನ್ಯವಾದಗಳು. ಈ ವರುಷದ ಅಂತ್ಯ ನವ ವರುಷದ ಪ್ರಾರಂಭ ನವ ಚಂತನೆಗಳನ್ನು ತರುತ್ತಾ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸ್ರಷ್ಟಿಸುತ್ತಾ ಸಮಾಜಿಕ ತಾಣಗಳಿಗೆ ಮಾದರಿಯಾಗಲಿರುವ ಬ್ಲೂ ವೇವ್ಸ್ ಪ್ರತಿ ವರುಷವೂ ಹರುಷವನ್ನು ತರುತ್ತಾ ಚಿರಕಾಲ ಬಾಳಲಿ. ನೀಲಿ ಅಲೆಗಳ ಹಿಂದಿರುವ ಬಿಳಿಯ ಮುಖಗಳಿಗೆ ದೇವನು ಕರುಣಿಸಲಿ.

ಮಂಗಳವಾರ, ಫೆಬ್ರವರಿ 10, 2015

ಶಿಕ್ಷಣ ವ್ಯವಸ್ಥೆ- ಲೋಪದೋಷಗಳು ಹಾಗೂ ಸುಧಾರಣೆಯ ಮಾರ್ಗಗಳು






ತುಳಸಿದಾಸ್, ಬಂಟ್ವಾಳ

ನಿಕ್ಷೇಪ 2014-15. ಸಮಾಧಾನಕರ ಬಹುಮಾನ ಪಡೆದ  ಲೇಖನ #1#

ಒಂದು ದೇಶವು ಆರ್ಥಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ.ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎನ್ನುವ ಕೂಗು ನಮ್ಮ ಸಾತಂತ್ರ್ಯ ಚಳುವಳಿಯ ಜೊತೆ ಜೊತೆಗೆ ಬೆಳೆದು ಬಂದಿದೆ. ಹಲವಾರು ಹೋರಾಟಗಳು ನಡೆಯುತ್ತಿದೆ. ಆದರೆ ನಮ್ಮನ್ನಾಳುವ ಸರಕಾರಗಳ ತಪ್ಪು ನೀತಿಗಳಿಂದಾಗಿ ಇಂದಿಗೂ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಾಗಿಲ್ಲ. ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಹಲವಾರು ಲೋಪ ದೊಷಗಲಿಂದ ಕೂಡಿದೆ. ಶಿಕ್ಷಣ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸುವುದು ಸಪಕಾರದ ಕರ್ತವ್ಯ ಕೂಡ ಆಗಿದೆ.


ಇಂದು ನಮ್ಮ ಶಿಕ್ಷಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಹಲವಾರು ಲೋಪ ದೋಷಗಳಿವೆ.

ಶಾಲಾ ಪೂರ್ವ ಶಿಕ್ಷಣ:
ಮಕ್ಕಳಲ್ಲಿ ಉತ್ತಮ ಜ್ನಾನ ಬೆಳೆದು ಬರುವಲ್ಲಿ ಶಾಲಾ ಪೂರ್ವ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ನಮ್ಮಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳು, ಸೂಕ್ತ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಕಾಣಬಹುದು. ಇಲ್ಲಿ ಪಾಠ ಮಾಡುವ ಶಿಕ್ಷಕಿಯರಿಗೆ ಸರಿಯಾಗಿ ವೇತನ ಸಿಗದೆ ಅವರು ಪರದಾಡುವ ಸ್ಥಿತಿ ಇದೆ. ಅಲ್ಲದೆ ಪೌಷ್ಟಿಕ ಆಹಾರಗಳು ಕೂಡ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ಕಳಪೆ ಆಹಾರಗಳು ಪೂರೈಕೆಯಾಗುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಶಾಲಾ ಪೂರ್ವ ಶಿಕ್ಷಣವೇ ಸರಿಯಾಗಿಲ್ಲ.
ಇದರ ಪರಿಣಾಮವಾಗಿ ಹಾಗೂ ಜಾಗತಿಕ ಕಾರಣದಿಂದಾಗಿ ನಮ್ಮ ಜನತೆಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಕಾರಣದಿಂದಾಗಿ LKG,UKG, BABY SITTING ಮುಂತಾದುವುಗಳು ಪ್ರಾರಂಭವಾಗಿದೆ. ಇಲ್ಲಿ ಲಕ್ಷಾಂತರ ರುಪಾಯಿಗಳನ್ನು ಪ್ರವೇಶ ಶುಲ್ಕವಾಗಿ ಪಡೆಯಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ಒಂದು ಮೌಲ್ಯಯುತ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಇದು ಕೇವಲ ಹಣ ಮಾಡುವ ಕೇಂದ್ರಗಳಾಗಿವೆ.

ಶಾಲಾ ಶಿಕ್ಷಣ: 
ಶಾಲಾ ಶಿಕ್ಷಣದಲ್ಲಿ ಸರಕಾರಿ ಶಾಲೆಗಳು ಮುಖ್ಯವಾಗಿದೆ. ಆದರೆ ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ನಮ್ಮ ದೇಶದ ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ನಮ್ಮ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಹೆಚ್ಚಿನ ಸರಕಾರಿ ಶಾಲೆಗಳು ವಿಧ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದೆ. ಈ ಶಾಲೆಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲದ ಕಾರಣ ವಿಧ್ಯಾರ್ಥಿಗಳು ಖಾಸಗೀ ಶಾಲೆಗಳನ್ನು ಅವಲಂಭಿಸುವ ಪರಿಸ್ಥಿತಿ ಇದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಳಿವೆ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು ಪೂರೈಕೆಯಾಗುತ್ತಿಲ್ಲ. ಸರಕಾರಗಳ ನೀತಿ ಕೂಡ ಖಾಸಗಿಗಳ ಪರ ಇರುವುದರಿಂದ, ಸರಕಾರಿ ಶಾಲೆಗಳು ಈ ರೀತಿ ರೋಗಗ್ರಸ್ತವಾಗಲು ಕಾರಣವಾಗಿದೆ.

ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ನಾಯಿ ಕೊಡೆಗಳಂತೆ ತಲೆಯೆತ್ತಿದೆ. ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲಿ ಮಾಡಲಾಗುತ್ತದೆ. ಇವುಗಳು ಶಿಕ್ಷಣ ನೀಡುವುದರ ಬದಲು ಕೇವಲ ಹಣ ಮಾಡುವ ವ್ಯಾಪಾರಿ ಕೇಂದ್ರಗಳಾಗಿದೆ. ಹೆಚ್ಚಿನ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಪಡೆದಿರುವುದಿಲ್ಲ. ಕನಿಷ್ಟ ದ್ವಿತೀಯ ಪಿ.ಯು.ಸಿ ಓದಿದವರನ್ನು ಇಲ್ಲಿ ಶಿಕ್ಷಕರಾಗಿ ನೇಮಿಸಿರುವುದನ್ನು ಕಾಣ ಬಹುದು. ಇಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗುವುದರ ಬದಲು ಕೇವಲ ಸರ್ಟಿಫಿಕೇಟ್ ಗಾಗಿ ಮಾತ್ರ ಶಿಕ್ಷಣ ಎನ್ನುವಂತ್ತಾಗಿದೆ. ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ: ಕಳೆದೆರಡು ವರ್ಷಗಳ ಹಿಂದೆ ನಮ್ಮ ಸರಕಾರವು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದಾಗ ಒಂದು ರೀತಿಯಲ್ಲಿ ಬಡವರ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಬಹುದು ಎಂಬ ಸಂಭ್ರಮ ಉಂಟಾಗಿತ್ತು. ಆದರೆ ಎರಡು ವರ್ಷಗಳಲ್ಲಿ, ಮುಖ್ಯವಾಗಿ ಕರ್ನಾಟಕ ರಾಜ್ಯದ ಬೆಳವಣಿಗೆಯನ್ನು ಗಮನಿಸಿದರೆ ಈ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರಕಾರವೆ ಹಿಂದೇಟು ಹಾಕುತ್ತದೆ. ಖಾಸಗಿ ಶಾಲೆಗಳಲ್ಲಿ ೨೫% ಬಡ ಮಕ್ಕಳಿಗೆ ಪ್ರವೇಶ ನೀಡಬೇಕಾಗಿದ್ದರೂ ಖಾಸಗಿ ಶಾಲೆಗಳು ಪ್ರವೇಶ ನೀಡಲು ಹಿಂದೇಟು ಹಾಕುತ್ತಿದೆ. ಇಲ್ಲಿ ಖಾಸಗಿ ಶಿಕ್ಶಣ ಸಂಸ್ಥೆಗಳಿಗೆ ನಿಯಂತ್ರಣ ಹಾಕಲು ಜಿಲ್ಲಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ಜಿಲ್ಲೆಗೂ ಇರಬೇಕಾದ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ನಿಷ್ಕ್ರೀಯವಾಗಿದೆ. ಈ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ಹಣ ಮಾಡುವಲ್ಲಿ ಯಶಸ್ವಿಯಾಗಿದೆ.

ಬಿಸಿಯೂಟ ಯೋಜನೆಯಲ್ಲೂ ಹಲವಾರು ಲೋಪ ದೋಷಗಳು :
ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಎಸ್.ಎಮ್.ಕ್ರಷ್ಣ ಸರಕಾರ ಇದ್ದಾಗ ಜಾರಿಗೊಳಿಸಿದ್ದು, ಇದರಿಂದಾಗಿ ಬಡ ವಿಧ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲು ಸಾಧ್ಯ್ವಾವಾಗಿದೆ. ಆದರೆ ಸರಕಾರದ ತಪ್ಪು ನೀತಿಗಳಿಂದಾಗಿ ಬಿಸಿಯೂಟದ ಯೋಜನೆಯು ಖಾಸಗಿ ಸ್ವಯಂ ಸಂಸ್ಥೆಗಳ ಪಾಲಾಗುವ ಸಂದರ್ಭ ಬಂದಿದೆ. ಈಗಾಗಲೇ ಪಟ್ಟಣ ಪ್ರದೇಶಗಳಲ್ಲಿ ಸ್ವಯಂಸೇವಾ ಸಂಸ್ಥೆಗಳಿಗೆ ಬಿಸಿಯೂಟದ ನಿರ್ವಹಣೆ ನೀಡಲಾಗಿದೆ. ಬಿಸಿಯೂಟವನ್ನು ಖಾಸಗಿಯವರಿಗೆ ವಹಿಸಿದರೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಿ ಹಣ ಮಾಡುವ ಉದ್ದೇಶ ಕೂಡ ಸ್ವಯಂ ಸಂಸ್ಥೆಗಳಿಗಿರುತ್ತದೆ. ಇದರಿಂದಾಗಿ ಬಡ ಮಕ್ಕಳ ಪಾಲಿಗಂತೂ ತೊಂದರೆಯಾಗಿದೆ.

ಪದವಿ ಪೂರ್ವ ಶಿಕ್ಷಣ 
ಪದವಿ ಪೂರ್ವ ಶಿಕ್ಷಣ ಕೂಡ ಹಲವಾರು ದೋಶಗಳಿಂದ ಕೂಡಿದ್ದು ಗುಣಮಟ್ಟದ ಮೌಲ್ಯಯುತ ಶಿಕ್ಷಣ ಮರಿಚೀಕೆಯಾಗಿದೆ. ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನೇ ಗಮನಿಸಿದರೆ ಸರಕಾರಿ ಪದವಿ ಪೂರ್ವ ಕಾಲೇಜುಗಳು ಬೆರಳೆಣಿಕೆಯಷ್ಟಿದೆ. ಇರುವ ಕಾಲೇಜುಗಳು ಕೂಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಎಲ್ಲಾ ವಿಷಯಗಳಿಗೆ ಬೇಕಾದ ಉಪನ್ಯಾಸಕರ ಕೊರತೆ ಇದೆ. ವಿಜ್ನಾನ ವಿಭಾಗವಂತು ಹೆಚ್ಚಿನ ಕಡೆ ಇಲ್ಲ. ಇದ್ದರೂ ಅದಕ್ಕೆ ಬೇಕಾದ ಪ್ರಯೋಗಲಯದ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲಾ ಕಾರುಗಳಿಂದ ಬಡ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಮರಿಚೀಕೆಯಾಗಿದೆ. ಇದಲ್ಲದೆ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಪಿ ಯು ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದು ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲು ಮಾಡುವ ಮೂಲಕ ಶಿಕ್ಷಣವನ್ನು ಮರಾಟದ ವಸ್ತುವನ್ನಾಗಿ ಮಾಡಲಾಗಿದೆ
ಇದಲ್ಲದೆ ಕಳೆದ ವರ್ಷದಿಂದ ವಿಜ್ನಾನ ವಿಭಾಗಕ್ಕೆ CBSC ಪಠ್ಯಕ್ರಮವನ್ನು ಹೇರಿರುವುದರಿಂದ ವಿದ್ಯಾರ್ಥಿಗಳ ಮೇಲೆ ಮತ್ತು ಉಪನ್ಯಾಸಕರ ಮೇಲೆ ಹೆಚ್ಚಿನ ಹೊರೆ ಉಂಟಾಗಿದೆ. ಸರಕಾರಗಳಉ ಶಿಕ್ಷಣ ಇಲಾಖೆಗಳ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ
ಪದವಿ ಶಿಕ್ಷಣ:
ಪದವಿ ಶಿಕ್ಷಣದಲ್ಲಿ ಪದವಿ ಕಾಲೇಜುಗಳು ಹೆಚ್ಚಿನ ಕಡೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಅವಲಂಬಿಸ ಬೇಕಾಗಿದೆ. ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಡೊನೇಶನ್ ನಿಡಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಉಪನ್ಯಾಸಕರು ಕೂಡ ಎಲ್ಲಾ ವಿಷಯಕ್ಕೆ ಇರುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕದಿಂದಾಗಿ ಅವರಿಗೆ ಸರಿಯಾದ ವೇತನ ಸಿಗದ ಕಾರಣ ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಲಭ್ಯರಾಗುತ್ತಿಲ್ಲ.
ಪದವಿ ಕಾಲೇಜುಗಳು ಹೆಚ್ಚಿನವು ವಿಶ್ವ ವಿದ್ಯಾಲಯಗಳ ವ್ಯಾಪ್ತಿಯೊಳಗೆ ಇರುತ್ತದೆ. ಇದರ ಮದ್ಯೆ ಕೆಲವು ಸ್ವಯತ್ತ ಕಾಲೇಜುಗಳಿವೆ. ಇದರ ಜೊತೆಗೆ ವಿಶ್ವ ವಿದ್ಯಾಲಯಗಳ ವೇಳಾ ಪಟ್ಟಿಗಳು ಬೇರೆ ಬೇರೆ ರೀತಿ ಇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿಧ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ. ಉದಾಹರಣೆಗೆ: ಕರ್ನಾಟಕದಲ್ಲಿ ಹಲವಾರು ವಿಶ್ವ ವಿದ್ಯಾಲಯಗಳಿದ್ದು, ಇವುಗಳಲ್ಲಿ ಪರೀಕ್ಷೆಗಳ ವೇಳಾ ಪಟ್ಟಿ ಬೇರೆ ಬೇರೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳು ಪದವಿ ಮುಗಿಸಿ ಮುಂದಿನ ಕೋರ್ಸ್ ಗೆ ಪ್ರವೇಶ ಪಡೆಯಬೇಕಾರೆ ಕೆಲವೊಂದು ದಾಖಲಾತಿ ಮುಗಿದಿರುತ್ತದೆ. ಸೂಕ್ತ ಸಮಯಕ್ಕೆ ಪರೀಕ್ಷಾ ಫಲಿತಾಂಶಗಳು ಬಾರದೆ, ಅಂಕಪಟ್ಟಿಗಳು ಕೂಡಾ ಸಿಗದೆ ಇರುವ ಪರಿಸ್ಥಿತಿ ಕೂಡಾ ಇದೆ.
ಸೆಮಿಸ್ಟರ್ ಪದ್ದತಿ:
ಇತ್ತೀಚಿನ ಕೆಲವು ವರ್ಷಗಳಿಂದ ಪದವಿಯಿಂದ ಸೆಮಿಸ್ಟರ್ ಪದ್ದತಿ ಜಾರಿ ಗೊಳಿಸಿದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಹೊರೆಯನ್ನು ಹೊರುವಂತಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಿಪರೀತ ಪರೀಕ್ಷಾ ಶುಲ್ಕಗಳು, ಮರುಮೌಲ್ಯ ಮಾಪನಾ ಶುಲ್ಕಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗುತ್ತದೆ. ಒಮ್ಮೆ ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ ಮುಂದಿನ ಪರೀಕ್ಷೆಗೆ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ. ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿನ ಲೋಪ ದೋಷಗಳು:
ಇಂದು ವಿಶ್ವ ವಿದ್ಯಾಲಯಗಳಲ್ಲಿ ಕೂಡ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ಹಣವುಲ್ಲವರಿಗೆ ಮಾತ್ರ ವಿಶ್ವ ವಿದ್ಯಾಲಯ ಪ್ರವೇಶ ಎನ್ನುವಂತಾಗಿದೆ. ಇಂದು ವಿಶ್ವ ವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ತಾಚಾರ, ಜಾತಿವಾದಗಳು ತಾಂಡವವಾಡುತ್ತಿದೆ. ಸೂಕ್ತ ಅಧ್ಯಯನ ಸಮಾಗ್ರಿಗಳಿಲ್ಲದೆ ಕೇವಲ ಅಂಕ ಪಟ್ಟಿಗೋಸ್ಕರ ವಿಶ್ವ ವಿದ್ಯಾಲಯಗಳು ಇದೆ ಎನ್ನುವಂತಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಸೊರಗುತ್ತಿದೆ.
ಖಾಸಗಿ ವಿವಿಗಳ ಸ್ಥಾಪನೆ:
ನಮ್ಮ ದೇಶಕ್ಕೆ ಖಾಸಗಿ ವಿವಿಗಳು ಮತ್ತು ವಿದೇಶಿ ವಿವಿಗಳಿಗೆ ಅವಕಾಶ ನೀಡಲಾಗಿದೆ. ಈ ಖಾಸಗಿ ಮತ್ತು ವಿದೇಶಿ ವಿವಿಗಳ ಪ್ರವೆಶದಿಂದಾಗಿ ಉನ್ನತ ಶಿಕ್ಷಣವು ಮಹತ್ವವನ್ನೇ ಕಳೆದು ಕೊಳ್ಳುವಂತಾಗಿದೆ. ಹಣವುಳ್ಳವರಿಗೆ ಪದವಿಯನ್ನು ಖರೀದಿ ಮಾಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ವಿವಿಗಳಿಗೆ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ.ಇದರ ಕುಲಪತಿಗಳು ಕೂಡ ಖಾಸಗಿ ವ್ಯಕ್ತಿಗಳಾಗಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೂ ಕೂಡ ಪೆರ್ಶ್ನಿಸುವ ಹಕ್ಕು ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಈ ಖಾಸಗೀ ಮತ್ಥು ವಿದೇಶಿ ವಿವಿಗಳು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಬಹಳ ಅಪಾಯಕಾರಿಯಾಗಿದೆ.
ವ್ರತ್ತಿ ಶಿಕ್ಷಣದಲ್ಲಿನ ಲೋಪಗಳು:
ವ್ರತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಇಂದು ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ, ಬೆರಳೆಣಿಕೆಯ ಸರಕಾರಿ ಕಾಲೇಜುಗಳಿವೆ. ಇದರಿಂದಾಗಿ ಸಾಕಷ್ಟು ಖಾಸಗಿ ಕಾಲೇಜುಗಳು ತಲೆಯೆತ್ತಿವೆ. ಇಲ್ಲಿನ ಡೊನೇಶನ್ ಗಳಿಂದಾಗಿ ಇಂದು ಬಡ ವಿದ್ಯಾರ್ಥಿಗಳಿಗೆ ವ್ರತ್ತಿ ಶಿಕ್ಷಣವೆನ್ನುವುದು ಕನಸಿನ ಮಾತಾಗಿದೆ. ITI ಮತ್ತು DIPLOMA ಗಳಿಗೆ ಸರಿಯಾದ ಸರ್ಕಾರದ ಸಹಾಯವಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ. ಇಂಜಿನಿಯರಿಂಗ್ ಸಂಪೂರ್ಣ ಖಾಸಗಿಯವರ ಹಿಡಿತದಲ್ಲಿದ್ದು ಮರಾಟದ ಸರಕಾಗಿದೆ. ವೈದಕೀಯ ಶಿಕ್ಷಣ ಕೂಡಾ ಸಂಪೂರ್ಣವಾಗಿ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಖಾಸಗಿ ವೈದಕೀಯ ಕಾಲೇಜುಗಳಲ್ಲಿ ಹಣವಿಲ್ಲದವರು ಮುಖ ಮಾಡುವ ಪರಿಸ್ಥಿತಿಯೇ ಇಲ್ಲ. ಬೇಕಾ ಬಿಟ್ಟಿ ಡೊನೇಶನ್ ವಸೂಲಿ ಮಾಡಿದರೂ ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ. ಸರಕಾರಗಳ ಖಾಸಗಿಯವರ ಪರವಾದ ನೀತಿಗಳಿಂದ ಈ ವ್ರತ್ತಿ ಶಿಕ್ಷಣವೆನ್ನುವುದು ಬಡವರಿಗೆ ಕನಸಿನ ಮಾತಾಗಿದೆ.
ಸಕಾಲಕ್ಕೆ ಸಿಗದ ವಿದ್ಯಾರ್ಥಿ ವೇತನಗಳು:
ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗುವ ವಿವಿಧ ವಿದ್ಯಾರ್ಥಿ ವೇತನಗಳು ಇಂದು ಸಮರ್ಪಕವಾಗಿ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂರು, ಮುನ್ನೂರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಕೆಲವೊಂದು ವಿದ್ಯಾರ್ಥಿ ವೇತನಗಳನ್ನು ನಿಲ್ಲಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಬೋದನಾ ಶುಲ್ಕವನ್ನು ಸರಕಾರವೆ ಭರಿಸುತಿತ್ತು. ಆದರೆ ಕಳೆದ ಅವದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಳ್ವಿಕೆಯಲ್ಲಿದ್ದ ಬಿ.ಜೆ.ಪಿ ಸರಕಾರ ಇದನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರಕಾರ ಕೂಡ ಇದನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಹಲವಾರು ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುವಂತಾಗಿದೆ.
ಹಾಸ್ಟೆಲ್ ಗಳಲ್ಲಿನ ಸಮಸ್ಯೆಗಳು:
ಇಂದು ಕರ್ನಾಟಕ ಹಾಸ್ಟೆಲ್ ಗಳಲ್ಲಿನ ಪರಿಸ್ಥಿತಿಯನ್ನೇ ಗಮನಿಸಿದರೆ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲ್ಲಖೆಯ ಹಾಸ್ಟೆಲ್ ಗಳಿವೆ. ಎಲ್ಲಾ ಹಾಸ್ಟೆಲ್ ಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಸ್ಟೆಲ್ ಗಳಲ್ಲಿ ಪೌಷ್ಟಿಕ ಅಹಾರಗಳು ಕೂಡ ಸಿಗುತ್ತಿಲ್ಲ. ಆಹಾರಕ್ಕೆ ಬೇಕಾದ ಹಣವನ್ನು ಒದಗಿಸುವಲ್ಲಿ ಸರಕಾರಗಳು ವಿಫಲವಾಗಿದೆ. ಇದಲ್ಲದೆ ಅಧ್ಯಯನ ಸಮಾಗ್ರಿಗಳು, ದಿನ ಪತ್ರಿಕೆ, ಕಂಪ್ಯೂಟರ್ ಇದ್ಯಾವ ಸೌಲಭ್ಯವೂ ಹಾಸ್ಟೆಲ್ ಗಳಿಗೆ ಇಲ್ಲದ ಕಾರಣ ಹಾಸ್ಟೆಲ್ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ.
ಶಿಕ್ಷಣಕೆ ಹಣಕಾಸು ಕಡಿತ:
ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹಣಕಾಸು ಒದಗಿಸುವಲ್ಲಿ ವಿಫಲವಾಗುತ್ತಿದೆ. 1964 ರಲ್ಲಿ ಕೊಠಾರಿ ಅಯೋಗವು ಕೇಂದ್ರ ಬಜ್ಜೆಟ್ ನಲ್ಲಿ ಶೇ 10% ಹಾಗೂ ರಾಜ್ಯ ಬಜ್ಜೆಟ್ ನಲ್ಲಿ 30% ಹಣವನ್ನು ಮೀಸಲಿಡ ಬೇಕು ಎಂದು ಶಿಫಾರಸ್ಸು ನೀಡಿತ್ತು. ಆದರೆ ಸರಕಾರಗಳು ಇದನ್ನು ನಿರ್ಲಕ್ಷಿಸುತ್ತಿವೆ. ಸರಕಾರಗಳು ಬಜ್ಜೆಟ್ ನಲ್ಲಿ ಶಿಕ್ಶಣಕ್ಕೆ ಬೇಕಾದಷ್ಟು ಹಣವನ್ನು ಮೀಸಲಿಡದ ಕಾರಣ ಸರಕಾರಿ ಶಿಕ್ಷಣ ಸಂಸ್ಥೆಗಳು ಸೌಲಭ್ಯಗಳಿಂದ ವಂಚಿತವಾಗಲು ಕಾರಣವಾಗಿದೆ.
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ತಡೆ:
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಗುಲಾಮರಂತೆ ಮಾಡಿ ರಾಜಕೀಯ, ಸಮಾಜಿಕ ಚಂತನೆಗಳನ್ನು ಬೆಳೆಸೆದಂತೆ ಮಾಡಲಾಗಿದೆ. ತಮಗೆ ಎಂತಹಾ ಶಿಕ್ಷಣ ಬೇಕು ಎನ್ನುವುದನ್ನು ತಿಳಿದು ಕೊಳ್ಳುವಂತಹ ಸಾಮಾನ್ಯ ಜ್ನಾನ ಕೂಡ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ತಮ್ಮ ಹಕ್ಕುಗಳಿಗೋಸ್ಕರ ಪ್ರತಿಭಟಿಸುವ ಹಕ್ಕುಗಳನ್ನೇ ನಿರಾಕರಿಸಲಾಗಿದೆ. ಇದರ್ ಜೊತೆಗೆ ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳನ್ನೇ ನಿರಾಕರಿಸಲಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆದರೆ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ನೆ, ಪ್ರಶ್ನಿಸುವ ಮನೋಭಾವ ಉಂಟಾಗಿ ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಪ್ರತಿಭಟಿಸಲು ಸಾಧ್ಯವಿತ್ತು. ಆದರೆ ಸರಕಾರಗಳು ಖಾಸಗಿ ಶಿಕ್ಶಣ ಸಂಸ್ಥೆಗಳ ಮತ್ತು ಬಂಡವಾಳ ಶಾಹಿಗಳ ಹಿಡಿತದಲ್ಲಿ ಇರುವ ಕಾರಣ ವಿದ್ಯಾರ್ಥಿಗಳ ದ್ವನಿಯನ್ನು ಅಡಗಿಸಿ ತನ್ನ ಬೇಳೆ ಬೇಯಿಸುವಲ್ಲಿ ನಿರತವಾಗಿದೆ.

ಈ ರೀತಿಯಲ್ಲಿ ಇಂದು ಎಲ್ಲಾ ವಿಧದಲ್ಲೂ ಶಿಕ್ಷಣವು ಹಲವಾರು ಲೋಪ ದೋಶಗಳಿಂದ ಕೂಡಿದೆ. ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳವಣಿಗೆ ಹೊಂದಿ ಈ ದೇಶಕ್ಕೆ ಕೊಡುಗೆ ನೀಡ ಬೇಕಾದರೆ ಅವರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಆದರೆ ಇಂದಿನ ನಮ್ಮ ಈ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಲ್ಲಿ ಯಾವುದೇ ಬೆಳವಣಿಗೆಗಳು ಆಲೋಚನೆಗಳು, ಪ್ರಶ್ನಿಸುವ ಮನೋಭಾವ ಬೆಳೆಯುತ್ತಿಲ್ಲ. ಈ ಪರಿಸ್ಥಿತಿಯ ಲಾಭ ಪಡೆದು ಕೊಂಡು ಕೋಮುವಾದಿಗಳು, ವಿಛ್ಹಿದ್ದಕಾರಿ ಶಕ್ತಿಗಳು ವಿದ್ಯಾರ್ಥಿಗಳ ತಲೆಗೆ ಧರ್ಮದ ವಿಷ ಬೀಜ ಬಿತ್ತುವ ಮೂಲಕ ದ್ವೇಶದ ಮನೋಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಹೆಚ್ಚಿನ ಶಿಕ್ಷಣ ಪಡೆದವರೇ ಹಲವಾರು ಕ್ರಿಮಿನಲ್ ಗಳಾಗಿರುವುದನ್ನು ಕಾಣಬಹುದು. ಇದಕ್ಕೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣವಾಗಿದೆ.
ನಮ್ಮ ಶಿಕ್ಷಣವು ಸಂಪೂರ್ಣವಾಗಿ ಬದಲಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಹಲವಾರು ಕ್ರಮ ಕೈಗೊಳ್ಳ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆಗಳಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಭಯದ ವಾತಾವರಣ ನಿರ್ಮಾಣ ಮಾಡದೆ ಆತ್ಮಿಯವಾಗಿ ನಡೆಸಿಕೊಂಡು ತಿಳುವಳಿಕೆ ನೀಡಬೇಕಾಗಿದೆ. ಇದಲ್ಲದೆ ಎಲ್ಲಾರೂ ಸರಕಾರಿ ಶಾಲೆಗಳಲ್ಲಿಯೆ ಶಿಕ್ಷಣ ಪಡೆಯುವಂತಾಗ ಬೇಕು. ಇದಕ್ಕಾಗಿ ಸರಕಾರವು ಸರಕಾರಿ ಶಾಲೆಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

ಇಂದು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಆಂಗ್ಲ ಮಾದ್ಯಮ ಶಾಲೆಗಳನ್ನು ನಿಯಂತ್ರಿಸ ಬೇಕು.ಶಿಕ್ಷಣವು ಹಣ ಕೊಟ್ಟು ಖರೀದಿಸುವ ಸಾಧನವಾಗ ಬಾರದು. ಉತ್ತಮವಾದ ಮೌಲ್ಯಯುತ ಜೀವನ ನಡೆಸಲು ಹಾಗೂ ದೇಶಕ್ಕೆ ಕೊಡುಗೆ ನೀಡಲು ಸಹಕಾರಿಯಾಗಬೇಕು. ಪಕ್ಷೇತರ ಚಟುವಟಿಕೆಗಲಿಗೆ ಕೂಡ ಪ್ರೊತ್ಸಾಹ ಕೊಡಬೇಕು. ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಸರಕರ ಒದಗಿಸಬೇಕು. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ಗ್ರಂಥಾಲಯ ವ್ಯವಸ್ಥೆ ಇರಬೇಕು. ಇಲ್ಲಿ ದಿನ ಪತ್ರಿಕೆಗಳು, ಇತರ ಎಲ್ಲಾ ಪುಸ್ತಕಗಳು ಸಿಗಬೇಕು. ವಿದ್ಯಾರ್ಥಿಗಳಲ್ಲಿ ದಿನ ನಿತ್ಯಾ ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳುವಳಿಕೆ ಬರಬೇಕು.
# ಪ್ರಾಥಮಿಕ ಹಂತದಿಂದ ಪಿ.ಯು.ಸಿ ತನಕವಾದರೂ ಶಿಕ್ಷಣ ಉಚಿತವಾಗಿ ಸಿಗಬೇಕು. ಇದರಿಂದ ಬಡ ಹಾಗೂ ಹಿಂದುಳಿದ ಮಕ್ಕಳು ಪಿಯುಸಿ ತನಕವಾದರೂ ಶಿಕ್ಷಣ ಪಡೆಯಬಹುದು. ಸರಕಾರಿ ಕಾಲೇಜುಗಳಿಗೆ ಡೊನೇಶನ್ ವಸೂಲಿ ಸಂಪೂರ್ಣ ನಿಷೇದಿಸಬೇಕು.
# ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಣ ಹೇರಬೇಕು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆಯೆತ್ತಿದೆ. ಬೇಬಿ ಸಿಟ್ಟಿಂಗ್ ನಿಂದ ಹಿಡಿದು ಉನ್ನತ ಶಿಕ್ಷಣ್ದವರೆಗೆ ಬೇಕಾಬಿಟ್ಟಿ ಡೊನೇಶನ್ ಮಾಡಲಾಗುತ್ತಿದೆ. ಇದಕ್ಕೆ ಸರಕಾರ ನಿಯಂತ್ರಣ ಹೇರಬೇಕು.
# R.T.I ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು.
# ಕಾಯಿದೆಯ ಪ್ರಕಾರ ಖಾಸಗಿ ಶಿಕ್ಷಣ ಸಂಥೆಗಳು 100 ರಲ್ಲಿ 25% ಸೀಟನ್ನು ಬಡ ವಿದ್ಯಾರ್ಥಿಗಳಿಗೆ ನೀಡಬೇಕು. ಆದರೆ ಇದು ಯಶಸ್ವಿಯಾಗಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿ R.T.I ಕಾಯ್ದೆ ಅನುಷ್ಟಾನವಾಗುವಂತೆ ಕ್ರಮ ಕೈಗೊಳ್ಳಬೇಕುಶಾಲಾ ಕಾಲೇಜುಗಳಿಗೆ ಖಾಯಂ ಶಿಕ್ಷಕರ, ಉಪನ್ಯಾಸಕರ ನೇಮಕವಾಗಬೇಕು. ಶಾಲಾ ಕಾಲೇಜುಗಳ್ಳಲ್ಲಿ ಇಂದು ಹೊರಗುತ್ತಿಗೆ ನೇಮಕಾತಿ ನಡೆಯುತ್ತಿದೆ. ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರು, ಉಪನ್ಯಾಸಕರು, ಹಾಸ್ಟೆಲ್ ವಾರ್ಡನ್, ಇತರ ಸಿಬಂದಿಗಳನ್ನು ಗುತ್ತಿಗೆ ಮತ್ತು ಅರೆ ಗುತ್ತಿಗೆ ಅದಾರದಲ್ಲಿ ನೇಮಕ ಮಾಡಲಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಒಂದು ವರ್ಷಕ್ಕೆ ಕೆಲವು ಸ್ವಯಂ ಸೇವ ಸಂಥೆಗಳ ಮೂಲಕ ನೇಮಕ ಮಾಡಲಾಗುತ್ತದೆ. ಈ ಸಂಸ್ಥೆಗಳು ಅವರಿಗೆ ಸರಿಯಾದ ವೇತನ ನೀಡದೆ ವಂಚಿಸಿದ ಸಾಕಷ್ಟು ಉದಾಹರಣೆಗಳಿವೆ. ಸಾಕಷ್ಟು ಖರ್ಚು ಮಾಡಿ ಉನ್ನತ ಶಿಕ್ಷಣ ಪಡೆದವರು ಬೀದಿ ಪಾಲಾಗುತ್ತಿದ್ದಾರೆ. ಈ ಎಲ್ಲದರ ಪರಿಣಾಮವನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.
# ಅವೈಜ್ನಾನಿಕ ಸೆಮಿಸ್ಟರ್ ಪದ್ದತಿ ಕೈ ಬಿಡಬೇಕು. ಮತ್ತು ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು.ಇಮ್ದಿನ ಅವೈಜ್ನಾನಿಕ ಸೆಮಿಸ್ಟರ್ ಪದ್ದತಿಯಿಂದ ವಿದ್ಯಾರ್ಥಿಗಳು ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಹೊರೆಯನ್ನು ಅನುಭವಿಸುಂತಾಗಿದೆ. ಈ ಬಗ್ಗೆ ಸರಕಾರವು ಶಿಕ್ಷಣ ತಜ್ನರೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು.
# ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ತಡೆಗಟ್ಟಿ ಪ್ರಾಮಾಣಿಕ ವ್ಯಕ್ತಿಗಳನ್ನು ಉನ್ನತ ಹುದ್ದೆಗೇರುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು.
ವಿದ್ಯಾರ್ಥಿ ಸಂಘದ ಚುಣಾವಣೆ ನಡೆಯಬೇಕು:
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆದರೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ರಾಜಕೀಯ, ಸಮಾಜಿಕ ತಿಳುವಳಿಕೆ ಬರುತ್ತದೆ. ಹಾಗೂ ಸಮಸ್ಯೆಗಳ ಬಗ್ಗೆ ದ್ವನಿಯೆತ್ತಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಶಾಲಾ ಕಾಲೇಜು ವಿ.ವಿ ಗಳಲ್ಲಿ ನಡೆಯುವ ಎಲ್ಲ ಚರ್ಚೆಗಳು ತೀರ್ಮಾನಗಳಲ್ಲಿ ವಿದ್ಯಾರ್ಥಿ ಪ್ರತಿನಿದಿಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೆಕು. ಈ ಬಗ್ಗೆ ಸರಕಾರ ಕ್ರಮ ಕೈಗೊಂಡರೆ ಶಿಕ್ಷಣದಲ್ಲಿನ ಲೋಪದೋಷಗಳನ್ನು ಕೆಲವು ಮಟ್ಟೀಗಾದರೂ ಸರಿಪಡಿಸಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು. ಈಗ ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಮಠಗಳಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದನ್ನು ನಿಲ್ಲಿಸಬೆಕು.
ಪಠ್ಯ ಪುಸ್ತಕದಲ್ಲಿ ಜನಪರ ಮತ್ತು ವೈಜ್ನಾನಿಕ ಚಿಂತನೆಗಳಿರಬೇಕು. 
ನಮ್ಮನ್ನಾಳುವ ಸರಕಾರಗಳು ಪಠ್ಯ ಪುಸ್ತಕಗಳಲ್ಲಿ ಜಾತ್ಯಾತೀತ ವಿರೋಧಿ, ಸಂವಿಧಾನ ವಿರೋಧಿಯಾಗಿರುವ ಕೆಲವು ವಿಷಯಗಳನ್ನು ಪ್ರಕಟಿಸಲು ಮುಂದಾಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ತಿರುಚಿ ತಮಗೆ ಬೇಕಾದಂತೆ ಪ್ರಕಟಿಸುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ.ಪಠ್ಯದಲ್ಲಿ ಭಗದ್ಗೀತೆ ಕಡ್ಡಾಯ, ಜ್ಯೋತಿಷ್ಯ, ಯೋಗ ಸಮಾಜಕ್ಕೆ ಯಾವುದೇ ಕೊಡುಗೆ ನೀಡದ ಪಠ್ಯಗಳನ್ನು ಕೈ ಬಿಟ್ಟು ಈ ದೇಶದ ನಿಜವಾದ ಇತಿಹಾಸ, ಜಾತ್ಯಾತೀತತೆಗೆ, ವೈಚಾರಿಕತೆಗೆ ಕೊಡುಗೆ ನೀಡುವಂತಹ ಪಠ್ಯಕ್ರಮ ರೂಪಿಸಿದರೆ ವಿದ್ಯಾರ್ಥಿಗಳಿಗೆ ಬೌದ್ಧಿಕವಾಗಿ ಬೆಳವಣಿಗೆಗೆ ಸಾಧ್ಯವಾಗುತ್ತದೆ. ಹಾಗೂ ಶಿಕ್ಶಣದಲ್ಲಿ ಸ್ವಲ್ಪವಾದರೂ ಸುಧಾರಣೆಗಳು ಬೆಳೆದು ಬರಲು ಸಾಧ್ಯವಾಗುತ್ತದೆ.
ಹಾಸ್ಟೆಲ್ ವ್ಯವಸ್ಥೆಯನ್ನು ಬಲ ಪಡಿಸಬೇಕು ಮತ್ತು ವಿದ್ಯಾರ್ಥಿ ವೇತನವನ್ನು ಸೂಕ್ತ ಸಮಯಕ್ಕೆ ನೀಡಬೇಕು:
ಹೆಚ್ಚಿನ ಬಡ ವಿದ್ಯಾರ್ಥಿಗಳು, ಹಳ್ಳಿ ಪ್ರದೇಶದ ವಿದ್ಯಾರ್ಥಿಗಳು ಹಾಸ್ಟೆಲ್ ಗಳನ್ನು ಅವಲಂಬಿಸಿದ್ದಾರೆ. ಆದರೆ ಸರಕಾರಗಳು ಹಾಸ್ಟೆಲ್ ಗಳಿಗೆ ಸರಿಯಾದ ಪ್ರೊತ್ಸಾಹ ನೀಡದ ಕಾರಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.
ಸರಕಾರವು ಹಾಸ್ಟೆಲ್ ಗಳಿಗೆ ಬೇಕಾದ ಸಮಾಗ್ರಿಗಳನ್ನು, ಮೂಲಭೂತ ಸೌಕರ್ಯಗಳನ್ನು ಹಾಗೂ ಪೌಷ್ಟಿಕಾಂಶವುಲ್ಲ ಆಹಾರವನ್ನು ಒದಗಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಸಿಗುವಂತಾಗಬೇಕು.
ಖಾಸಗಿ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಬಲಪಡಿಸ ಬೆಕು:
ಸರಕಾರಿ ವಿಶ್ವ ವಿದ್ಯಾಲಯಗಳು ಸೂಕ್ತ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಪ್ರವೇಶ ಶುಲ್ಕ ಏರಿಕೆ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಈ ಮಧ್ಯೆ ಸರಕಾರಗಳು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿದೆ. ಖಾಸಗಿ ವಿಶ್ವ ವಿದ್ಯಾಲಗಳಿಗೆ ಅನುಮತಿ ನೀಡಿದ ನಂತರ ಸರಕಾರಕ್ಕೆ ಅದರ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಡೋನೇಶನ್ ವಸೂಲಿ ಮಾಡುವ ಅಪಾಯವಿದೆ.
ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು:
ಇಂದಿನ ಈ ಅವೈಜ್ನಾನಿಕವಾದ ಶಿಕ್ಷಣ ನೀತಿಗಳಿಂದಗಿ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಜಾಗತೀಕರಣದ ದಾಳಿಯಿಂದ ಗ್ರಾಮೀಣ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳು ಮರೆಯಾಗುತ್ತಿವೆ. ವಿದ್ಯಾರ್ಥಿಗಳ ಪ್ರತಿಬೆಗಳು ನಶಿಸುತ್ತಿದೆ. ಇದಕ್ಕಾಗಿ ಸರಕಾರಗಳು ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹಾ ಕಾರ್ಯಕ್ರಮಗಳನ್ನು ಜಾರಿಗೋಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಬೇಕಾದ ಸಮಾಗ್ರಿಗಳನ್ನು, ಸೂಕ್ತ ತರಬೇತುದಾರರನ್ನು ಕೂಡಾ ನೇಮಿಸಬೇಕು. ಒಟ್ಟಿನಲ್ಲಿ ನಮ್ಮ ದೇಶ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಪ್ರಭಾವದಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನು ಕಳೆದುಕೋಂಡು ಕೇವಲ ಉದ್ಯೋಗ ಪಡೆಯಲು ಶಿಕ್ಷಣ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಶಿಕ್ಷಣ ಪಡೆದವರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಪರದಾಡುವಂತಾಗಿದೆ.ನಮ್ಮನ್ನಾಳುವ ಸರಕಾರಗಳನ್ನು ಬಂಡವಾಳಶಾಹಿಗಳು ನಿಯಂತ್ರಿಸುವ ಕಾರಣದಿಂದಾಗಿ ಸರಕಾರಗಳಿಗೆ ಸರಿಯಾದ ಶಿಕ್ಷಣ ನೀಡುವಂತಹ ಯೊಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಸರಕಾರಗಳು ಈಗ ಇರುವ ಶಿಕ್ಷಣ ನೀತಿಗಳನ್ನು ಬದಲಾಯಿಸಿ, ಶಿಕ್ಷಣಕ್ಕೆ ಸರಿಯಾದ ಪ್ರೊತ್ಸಾಹ್, ಯೋಜನೆಗಳ್ಳನ್ನು ಕೈಗೊಂಡರೆ ಖಂಡಿತವಾಗಿಯೂ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಸುಧಾರಣೆ ಕಾಣಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಮುಂದೆ ಅವರು ಈ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಯಶಸ್ವಿಯಾಗಿ ಪಾಲ್ಗೊಳ್ಳಬೇಕಾದರೆ ಜನರಿಗೆ ಉತ್ತಮ ಶಿಕ್ಷಣ ಸಿಗಬೇಕು. ಜನರು ವಿದ್ಯಾವಂತರಾದರೆ ಮಾತ್ರ ಈ ದೇಶಕ್ಕೆ ಒಂದು ಉತ್ತಮ ಆಡಳಿತ ಸಿಗಲು ಸಾಧ್ಯ. ಇದಕ್ಕಾಗಿ ಸರಕಾರಗಳು ಶಿಕ್ಷಣದಲ್ಲಿನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸುವುದು ಇಂದಿನ ಅಗತ್ಯವಾಗಿದೆ